MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಬಾಂಗ್ಲಾದೇಶದ ರಿಕ್ವೆಸ್ಟ್‌ ರಿಜೆಕ್ಟ್‌; ಭಾರತದಲ್ಲಿ ಆಡಿ ಇಲ್ಲದಿದ್ದರೇ ಹೊರ ಹೋಗಿ ಐಸಿಸಿ ಖಡಕ್ ವಾರ್ನಿಂಗ್!

ಬಾಂಗ್ಲಾದೇಶದ ರಿಕ್ವೆಸ್ಟ್‌ ರಿಜೆಕ್ಟ್‌; ಭಾರತದಲ್ಲಿ ಆಡಿ ಇಲ್ಲದಿದ್ದರೇ ಹೊರ ಹೋಗಿ ಐಸಿಸಿ ಖಡಕ್ ವಾರ್ನಿಂಗ್!

ದುಬೈ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನಾಡಲು ನಾವು ಭಾರತಕ್ಕೆ ಬರಲ್ಲ ಎಂದಿದ್ದ ಬಾಂಗ್ಲಾದೇಶ ತಂಡಕ್ಕೆ ಐಸಿಸಿ ಮುಟ್ಟಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ 

1 Min read
Author : Naveen Kodase
Published : Jan 07 2026, 09:18 AM IST
Share this Photo Gallery
  • FB
  • TW
  • Linkdin
  • Whatsapp
18
ಟಿ20 ವಿಶ್ವಕಪ್‌ ಫೆಬ್ರವರಿ 07ರಿಂದ ಆರಂಭ
Image Credit : Getty

ಟಿ20 ವಿಶ್ವಕಪ್‌ ಫೆಬ್ರವರಿ 07ರಿಂದ ಆರಂಭ

2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಮುಂಬರುವ ಫೆಬ್ರವರಿ 07ರಿಂದ ಆರಂಭವಾಗಲಿದ್ದು, ಟೂರ್ನಿಗೆ ಭಾರತ ಹಾಗೂ ಶ್ರೀಲಂಕ ಜಂಟಿ ಆತಿಥ್ಯ ವಹಿಸಿವೆ. ಹೀಗಿರುವಾಗಲೇ ವಿವಾದವೊಂದು ತಲೆದೂರಿದೆ.

28
ಲಂಕಾಗೆ ಸ್ಥಳಾಂತರಿಸಲು ಮನವಿ
Image Credit : Getty

ಲಂಕಾಗೆ ಸ್ಥಳಾಂತರಿಸಲು ಮನವಿ

ಮುಸ್ತಾಫಿಜುರ್‌ ರಹಮಾನ್‌ರನ್ನು ಐಪಿಎಲ್‌ನಿಂದ ಹೊರಹಾಕಿದ ಬಿಸಿಸಿಐ ನಡೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಾಂಗ್ಲಾದೇಶ, ತಾನು ವಿಶ್ವಕಪ್‌ನಲ್ಲಿ ಆಡಲು ಭಾರತಕ್ಕೆ ಪ್ರಯಾಣಿಸುವುದಿಲ್ಲ. ಬದಲಿಗೆ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸುವಂತೆ ಐಸಿಸಿಗೆ ಒತ್ತಾಯಿಸಿತ್ತು.

Related Articles

Related image1
ಟಿ20 ವಿಶ್ವಕಪ್‌ನಲ್ಲಿ ಈತನೇ ಭಾರತದ ಎಕ್ಸ್‌ ಫ್ಯಾಕ್ಟರ್ ಎಂದ ಎಬಿ ಡಿವಿಲಿಯರ್ಸ್‌! ಆದ್ರೆ ಅದು ಅಭಿಷೇಕ್, ಬುಮ್ರಾ ಅಲ್ಲ
Related image2
ಈ ಬಾಂಗ್ಲಾದೇಶ ಕ್ರಿಕೆಟಿಗನ ಪತ್ನಿ ಶ್ರೀಕೃಷ್ಣನ ಅಪ್ಪಟ ಆರಾಧಕಿ!
38
ಐಸಿಸಿ ಮಧ್ಯ ಪ್ರವೇಶ
Image Credit : Getty

ಐಸಿಸಿ ಮಧ್ಯ ಪ್ರವೇಶ

ಎರಡೂ ಕ್ರಿಕೆಟ್‌ ಮಂಡಳಿಗಳ ನಡುವಿನ ತಿಕ್ಕಾಟ ನಿಲ್ಲಿಸಲು ಐಸಿಸಿ ಮಧ್ಯಪ್ರವೇಶ ಮಾಡಿದ್ದು, ಬಾಂಗ್ಲಾ ಕ್ರಿಕೆಟ್‌ ಮಂಡಳಿಯ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದೆ ಎಂದು ವರದಿಯಾಗಿತ್ತು.

48
ಸರ್ಕಾರದ ಬಳಿ ಚರ್ಚಿಸಿ ತೀರ್ಮಾನಿಸಲು ನಿರ್ಧಾರ
Image Credit : Getty

ಸರ್ಕಾರದ ಬಳಿ ಚರ್ಚಿಸಿ ತೀರ್ಮಾನಿಸಲು ನಿರ್ಧಾರ

ಬಾಂಗ್ಲಾ ಜೊತೆ ಮಾತುಕತೆ ನಡೆಸಿರುವ ಐಸಿಸಿ, ಭಾರತಕ್ಕೆ ಪ್ರಯಾಣಿಸದೆ ಇರಲು ಕೈಗೊಂಡಿರುವ ನಿರ್ಧಾರವನ್ನು ಕೈಬಿಡುವಂತೆ ಕೇಳಿಕೊಂಡಿತ್ತು. ಅದಕ್ಕೆ ಬಿಸಿಬಿ ತನ್ನ ಸರ್ಕಾರವನ್ನು ಕೇಳಿ ತಿಳಿಸುವುದಾಗಿ ಹೇಳಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

58
ಮರು ಪರಿಶೀಲನೆಗೆ ಚಿಂತನೆ
Image Credit : Getty

ಮರು ಪರಿಶೀಲನೆಗೆ ಚಿಂತನೆ

ಮುಂದಿನ ತಿಂಗಳ ಟಿ20 ವಿಶ್ವಕಪ್‌ನಲ್ಲಿ ತಾನು ಭಾರತದಲ್ಲಿ ಆಡುವುದಿಲ್ಲ ಎಂದಿದ್ದ ಬಾಂಗ್ಲಾದೇಶ, ಇದೀಗ ತನ್ನ ನಿರ್ಧಾರವನ್ನು ಮರುಪರಿಶೀಲಿಸಲು ನಿರ್ಧರಿಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಬಳಿ ಸಮಯಾವಕಾಶ ಕೇಳಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

68
ಬಾಂಗ್ಲಾ ಮನವಿ ರಿಜೆಕ್ಟ್‌
Image Credit : X

ಬಾಂಗ್ಲಾ ಮನವಿ ರಿಜೆಕ್ಟ್‌

ಇದೀಗ ಭಾರತದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಸ್ಥಳಾಂತರ ಮಾಡಲು ಬಾಂಗ್ಲಾದೇಶ ಮಾಡಿದ ಮನವಿಯನ್ನು ಐಸಿಸಿ ತಿರಸ್ಕರಿಸಿದೆ ಎಂದು ವರದಿಯಾಗಿದೆ.

78
ಬಾಂಗ್ಲಾದೇಶಕ್ಕೆ ಐಸಿಸಿ ಖಡಕ್ ವಾರ್ನಿಂಗ್
Image Credit : ANI

ಬಾಂಗ್ಲಾದೇಶಕ್ಕೆ ಐಸಿಸಿ ಖಡಕ್ ವಾರ್ನಿಂಗ್

ಭಾರತದಲ್ಲಿ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಆಡಿ ಇಲ್ಲದಿದ್ದರೇ ಟೂರ್ನಿಯಿಂದಲೇ ಹೊರಹೋಗಿ ಎನ್ನುವ ಖಡಕ್ ಎಚ್ಚರಿಕೆಯನ್ನು ಬಾಂಗ್ಲಾದೇಶಕ್ಕೆ ಐಸಿಸಿ ರವಾನಿಸಿದೆ ಎಂದು ವರದಿಯಾಗಿದೆ.

88
ಬಾಂಗ್ಲಾದೇಶ ವೇಳಾಪಟ್ಟಿ
Image Credit : Getty

ಬಾಂಗ್ಲಾದೇಶ ವೇಳಾಪಟ್ಟಿ

ಬಾಂಗ್ಲಾದೇಶ ಆಡುವ ಗ್ರೂಪ್ ಹಂತದ ಎಲ್ಲಾ ಪಂದ್ಯಗಳು ಭಾರತದಲ್ಲೇ ನಿಗದಿಯಾಗಿದ್ದು, ಮೊದಲ ನಾಲ್ಕು ಪಂದ್ಯಗಳಿಗೆ ಕೋಲ್ಕತಾದ ಈಡನ್ ಗಾರ್ಡನ್ಸ್‌ ಮೈದಾನ ಆತಿಥ್ಯ ವಹಿಸಿದ್ದರೇ, ಕೊನೆಯ ಲೀಗ್ ಪಂದ್ಯಕ್ಕೆ ಮುಂಬೈನ ವಾಂಖೆಡೆ ಮೈದಾನ ಆತಿಥ್ಯ ವಹಿಸಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಸಿಸಿ ಟಿ20 ವಿಶ್ವಕಪ್
ಬಾಂಗ್ಲಾದೇಶ
ಟೀಮ್ ಇಂಡಿಯಾ
ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ)

Latest Videos
Recommended Stories
Recommended image1
ವಿಶ್ವಕಪ್‌ ಗೆದ್ದ ಭಾರತ ಮಹಿಳಾ ಅಂಧರ ಕ್ರಿಕೆಟ್‌ ತಂಡಕ್ಕೆ 5 ಕೋಟಿ ಬಹುಮಾನ ನೀಡಿದ ನೀತಾ ಅಂಬಾನಿ
Recommended image2
ವಿಜಯ್ ಹಜಾರೆ ಟ್ರೋಫಿ: ದೇಶಿ ಕ್ರಿಕೆಟ್‌ನಲ್ಲೂ ಗಿಲ್, ಸೂರ್ಯ ಫೇಲ್!
Recommended image3
ವಿಜಯ್ ಹಜಾರೆ ಟ್ರೋಫಿ: ಮಯಾಂಕ್ ಅಗರ್‌ವಾಲ್ ಶತಕ, ಮತ್ತೆ ಗುಡುಗಿದ ಪಡಿಕ್ಕಲ್, ಕರ್ನಾಟಕಕ್ಕೆ ಭರ್ಜರಿ ಜಯಭೇರಿ
Related Stories
Recommended image1
ಟಿ20 ವಿಶ್ವಕಪ್‌ನಲ್ಲಿ ಈತನೇ ಭಾರತದ ಎಕ್ಸ್‌ ಫ್ಯಾಕ್ಟರ್ ಎಂದ ಎಬಿ ಡಿವಿಲಿಯರ್ಸ್‌! ಆದ್ರೆ ಅದು ಅಭಿಷೇಕ್, ಬುಮ್ರಾ ಅಲ್ಲ
Recommended image2
ಈ ಬಾಂಗ್ಲಾದೇಶ ಕ್ರಿಕೆಟಿಗನ ಪತ್ನಿ ಶ್ರೀಕೃಷ್ಣನ ಅಪ್ಪಟ ಆರಾಧಕಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved