MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • ಧೋನಿ ಮೇಲೆ ನಂಬಿಕೆ ಕಳೆದುಕೊಂಡ CSK, ಐಪಿಎಲ್‌ನ ಕೊನೇ ಹಂತದಲ್ಲಿ ದಾಖಲೆವೀರ ವಿಕೆಟ್‌ಕೀಪರ್‌ ಸೇರ್ಪಡೆ!

ಧೋನಿ ಮೇಲೆ ನಂಬಿಕೆ ಕಳೆದುಕೊಂಡ CSK, ಐಪಿಎಲ್‌ನ ಕೊನೇ ಹಂತದಲ್ಲಿ ದಾಖಲೆವೀರ ವಿಕೆಟ್‌ಕೀಪರ್‌ ಸೇರ್ಪಡೆ!

MS Dhoni: ಚೆನ್ನೈ ಸೂಪರ್‌ ಕಿಂಗ್ಸ್‌ ಮ್ಯಾನೇಜ್‌ಮೆಂಟ್‌ ಧೋನಿ ಮೇಲೆ ಇಟ್ಟಿದ್ದ ನಂಬಿಕೆಯನ್ನು ಕಳೆದುಕೊಂಡಿರುವ ಸೂಚನೆ ಸಿಕ್ಕಿದೆ. ಏಕೆಂದರೆ ಋತುವಿನ ಅಂತ್ಯದಲ್ಲಿ ಚೆನ್ನೈ ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್‌ ಅವರೊಂದಿಗೆ ಸಹಿ ಹಾಕಿಕೊಂಡಿದೆ.

2 Min read
Santosh Naik
Published : May 06 2025, 03:23 PM IST| Updated : May 06 2025, 03:24 PM IST
Share this Photo Gallery
  • FB
  • TW
  • Linkdin
  • Whatsapp
16

ಐಪಿಎಲ್ ನಲ್ಲಿ ಸಿಎಸ್ ಕೆ ತಂಡದ ಪಾಲಿಗೆ ಇಂಥದ್ದೊಂದು ಘಟನೆ ಆಗಿರುವುದು ಇದೇ ಮೊದಲು. ಐದು ಬಾರಿ ಚಾಂಪಿಯನ್ ಆಗಿರುವ ತಂಡ ಸತತ ಎರಡು ಬಾರಿ ಐಪಿಎಲ್ ಪ್ಲೇಆಫ್ ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿರುವುದು ಇದೇ ಮೊದಲು.

26

ಋತುವಿನ ಆರಂಭದಲ್ಲಿ ರುತುರಾಜ್ ಗಾಯಕ್ವಾಡ್ ತಂಡದ ನಾಯಕರಾಗಿದ್ದರು. ಗಾಯದ ಕಾರಣ ಅವರು ಐಪಿಎಲ್‌ನಿಂದ ಹೊರಬಿದ್ದಿದ್ದರು. ಬಳಿಕ ಧೋನಿ ಮತ್ತೆ ನಾಯಕನಾಗಿದ್ದರೂ, ತಂಡವನ್ನು ಯಶಸ್ಸಿನ ಹಾದಿಗೆ ತರಲು ಅವರಿಗೆ ಸಾಧ್ಯವಾಗಲಿಲ್ಲ. ಧೋನಿಯ ಸ್ವಂತ ಪ್ರದರ್ಶನವೂ ಅತ್ಯಂತ ಕೆಳಮಟ್ಟದಲ್ಲಿದೆ.
 

Related Articles

Related image1
ವಿರಾಟ್, ಸಚಿನ್ ಅಥವಾ ಧೋನಿ: ಯಾರ ಬಳಿ ದುಬಾರಿ ಕಾರು ಕಲೆಕ್ಷನ್ ಇದೆ?
Related image2
ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಸೋಲಿಗೆ ಕಾರಣ ಏನು: ಧೋನಿ ಹೇಳಿದ್ದೇನು?
36

ಈ ಬಾರಿ ಅವರು ನಾಯಕರಾಗಿಯೂ ವಿಫಲರಾಗಿದ್ದಾರೆ, ವಿಕೆಟ್ ಹಿಂದೆ ಅವರು ಉತ್ತಮ ಪ್ರದರ್ಶನ ನೀಡುತ್ತಿಲ್ಲ, ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ, ಫಿನಿಶರ್ ಧೋನಿ ಎನ್ನುವ ಹೆಸರಿಗೆ ತಕ್ಕಂತೆ ಅವರ ಆಟ ಬಂದಿಲ್ಲ. ಈ ಬಾರಿ ಸಿಎಸ್‌ಕೆ ಅಧಿಕಾರಿಗಳು ಧೋನಿ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎನ್ನುವ ಸೂಚನೆ ಸಿಗುವಂಥ ಬೆಳವಣಿಗೆಯಾಗಿದೆ.
 

46

ಏಕೆಂದರೆ ಋತುವಿನ ಕೊನೆಯಲ್ಲಿ, ಚೆನ್ನೈ ಯುವ ವಿಕೆಟ್ ಕೀಪರ್-ಬ್ಯಾಟರ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಸಿಎಸ್‌ಕೆ ಗುಜರಾತ್‌ನ ಉರ್ವಿಲ್ ಪಟೇಲ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ. ಊರ್ವಿಲ್‌ ಪಟೇಲ್‌, ಟಿ20ಯಲ್ಲಿ ಅತಿವೇಗದ ಶತಕ ಬಾರಿಸಿದ ಭಾರತದ ಬ್ಯಾಟ್ಸ್‌ಮನ್‌ ಎನ್ನುವ ಶ್ರೇಯ ಹೊಂದಿದ್ದಾರೆ. ಅವರು ಕೇವಲ 28 ಎಸೆತಗಳಲ್ಲಿ ಟಿ20 ಶತಕ ಗಳಿಸಿದ ದಾಖಲೆ ಮಾಡಿದ್ದಾರ.  ಈ ಹಾದಿಯಲ್ಲಿ ಅವರು ಗೇಲ್ ದಾಖಲೆಯನ್ನು ಮುರಿದರು. ಅವರು ಟಿ20 ಕ್ರಿಕೆಟ್‌ನಲ್ಲಿ 36 ಎಸೆತಗಳಲ್ಲಿ ಶತಕ ಗಳಿಸಿದ್ದರು.

56

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತ್ರಿಪುರ ವಿರುದ್ಧ ಉರ್ವಿಲ್‌ ಕೇವಲ 28 ಎಸೆತಗಳಲ್ಲಿ ಶತಕ ಗಳಿಸಿದರು. ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕದ ವಿಶ್ವ ದಾಖಲೆಯನ್ನು ಕೇವಲ 1 ಎಸೆತದಲ್ಲಿ ಅವರು ತಪ್ಪಿಸಿಕೊಂಡರು. ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕದ ವಿಶ್ವ ದಾಖಲೆಯನ್ನು ಎಸ್ಟೋನಿಯಾದ ಸಾಹಿಲ್ ಚೌಹಾಣ್ ಹೊಂದಿದ್ದಾರೆ, ಅವರು 27 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ. ಆದರೂ, ಪಂತ್ ಅವರ ದಾಖಲೆಯನ್ನು ಮುರಿದ ಅತ್ಯಂತ ವೇಗದ ಭಾರತೀಯ ಆಟಗಾರ ಇವರಾಗಿದ್ದರು.
 

66

ಆದರೆ, ಸಿಎಸ್‌ಕೆ ಅಧಿಕಾರಿಗಳು ಉರ್ವಿಲ್ ಪಟೇಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದು ಧೋನಿ ಮೇಲಿನ ನಂಬಿಕೆ ಕಳೆದುಕೊಂಡ ಕಾರಣದಿಂದಲ್ಲ, ಬದಲಿಗೆ ವಿಕೆಟ್ ಕೀಪರ್ ವಂಶ್ ಬೇಡಿ ಗಾಯದ ಕಾರಣದಿಂದ ಹೊರಗುಳಿದಿರುವುದರಿಂದ ಈ ಸ್ಥಾನಕ್ಕೆ ಊರ್ವಿಲ್‌ರನ್ನು ಆಯ್ಕೆ ಮಾಡಲಾಗಿದೆ ಎಂದಿದೆ. ಆದರೆ, ಲಕ್ಷಣ ಹಾಗೆ ಕಾಣುತ್ತಿಲ್ಲ.
 

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಕ್ರಿಕೆಟ್
ಎಂ.ಎಸ್. ಧೋನಿ
ಚೆನ್ನೈ ಸೂಪರ್ ಕಿಂಗ್ಸ್
ಐಪಿಎಲ್
ಕ್ರೀಡೆಗಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved