ಕೋಚ್ ಗೌತಮ್ ಗಂಭೀರ್ ಜತೆಗೆ ಹದಗೆಟ್ಟ ರೋಹಿತ್-ಕೊಹ್ಲಿ ಸಂಬಂಧ; ಬಿಸಿಸಿಐ ನಡೆ ಏನು?
ಬೆಂಗಳೂರು: ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ ಬಳಿಕ ಹಿರಿಯ ಆಟಗಾರರಿಗೆ ಗೇಟ್ಪಾಸ್ ನೀಡುವ ಕೆಲಸ ನಡೆಯುತ್ತಿದೆ ಎನ್ನುವ ಆರೋಪವಿದೆ. ಇದೆಲ್ಲದರ ನಡುವೆ ಇದೀಗ ಗಂಭೀರ್ ಹಾಗೂ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಡುವೆ ಶೀತಲ ಸಮರ ಜೋರಾಗಿದೆ.

ದಕ್ಷಿಣ ಆಫ್ರಿಕಾ ಎದುರಿನ ಮೊದಲ ಪಂದ್ಯದಲ್ಲಿ ಮಿಂಚಿದ ಕೊಹ್ಲಿ-ರೋಹಿತ್
ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿ ಮುಕ್ತಾಯದ ಬಳಿಕ ಇದೀಗ ಮೊದಲ ಬಾರಿಗೆ ಮೈದಾನಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಮ್ಮ ಅದ್ಭುತ ಬ್ಯಾಟಿಂಗ್ ಫಾರ್ಮ್ ಮುಂದುವರೆಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತವರಿನಲ್ಲಿ ಟೆಸ್ಟ್ ವೈಟ್ ವಾಷ್ ಅನುಭವಿಸಿದ ಭಾರತ
ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯಲ್ಲಿ ವೈಟ್ವಾಷ್ ಅನುಭವಿಸಿದೆ. ಹೀಗಿರುವಾಗಲೇ ಗೌತಮ್ ಗಂಭೀರ್ ಹಾಗೂ ಕೊಹ್ಲಿ-ರೋಹಿತ್ ನಡುವಿನ ಸಂಬಂಧ ಚೆನ್ನಾಗಿಲ್ಲ ಎಂದು ವರದಿಯಾಗಿದೆ.
ಹಿರಿಯ ಆಟಗಾರರ ಜತೆ ಶೀತಲ ಸಮರ
ದೈನಿಕ್ ಜಾಗರಣ್ ವರದಿಯ ಪ್ರಕಾರ, ಹೆಡ್ಕೋಚ್ ಗೌತಮ್ ಗಂಭೀರ್ ಕೋಚ್ ಆದ ಆರಂಭಿಕ ದಿನಗಳಲ್ಲಿ ರೋಹಿತ್ ಹಾಗೂ ಕೊಹ್ಲಿ ಜತೆಗೆ ಹೊಂದಿದ್ದ ಒಡನಾಟ ಈಗ ಇಲ್ಲ. ಇದೀಗ ಇವರ ನಡುವಿನ ಶೀತಲ ಸಮರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಎಂದು ವರದಿಯಾಗಿದೆ.
ಕೋಚ್-ಆಟಗಾರರ ನಡುವೆ ಸಂಬಂಧ ಸರಿಯಿಲ್ಲ
ರಾಹುಲ್ ದ್ರಾವಿಡ್ ಅವರನ್ನು ಭಾರತದ ಮುಖ್ಯ ಕೋಚ್ ಆಗಿ ನೇಮಕ ಮಾಡಿದಾಗ ಕೊಹ್ಲಿ ಮತ್ತು ರೋಹಿತ್ ಅವರೊಂದಿಗೆ ಇದ್ದ ಸಂಬಂಧವನ್ನು ಮುಖ್ಯ ಕೋಚ್ ಗೌತಮ್ ಗಂಭೀರ್ ಈಗ ಹೊಂದಿಲ್ಲ ಎಂದು ವರದಿಯಾಗಿದೆ.
ಟೆಸ್ಟ್ ನಿವೃತ್ತಿ ಬೆನ್ನಲ್ಲೇ ಹಳಸಿದ ಸಂಬಂಧ
ಕೊಹ್ಲಿ ಮತ್ತು ರೋಹಿತ್ ಟೆಸ್ಟ್ ಕ್ರಿಕೆಟ್ನಿಂದ ಅನಿರೀಕ್ಷಿತ ನಿವೃತ್ತಿ ಘೋಷಿಸಿದ ನಂತರ ಸಂಬಂಧದಲ್ಲಿ ಬಿರುಕುಗಳು ನಿಜವಾಗಿಯೂ ಕಾಣಿಸಿಕೊಳ್ಳಲು ಪ್ರಾರಂಭಿಸಿದವು ಎಂದು ವರದಿಯಾಗಿದೆ.
ಅಚ್ಚರಿ ಮಾಹಿತಿ ಬೆಳಕಿಗೆ
ಆಸ್ಟ್ರೇಲಿಯಾ ಏಕದಿನ ಸರಣಿಯ ಸಮಯದಲ್ಲಿ, ರೋಹಿತ್ ಶರ್ಮಾ ಮತ್ತು ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ನಡುವೆ ಉತ್ತಮ ಸಂಬಂಧವಿರಲಿಲ್ಲ ಎನ್ನುವ ಅಚ್ಚರಿಯ ವರದಿ ಕೂಡಾ ಹೊರಬಿದ್ದಿದೆ.
ಆಸೀಸ್ ಎದುರು ಕಮ್ಬ್ಯಾಕ್ ಮಾಡಿದ್ದ ರೋ-ಕೋ ಜೋಡಿ
ಟೆಸ್ಟ್ ಮಾದರಿಯಿಂದ ನಿವೃತ್ತರಾದ ನಂತರ ಕೊಹ್ಲಿ ಮತ್ತು ರೋಹಿತ್ ಟೀಂ ಇಂಡಿಯಾ ಜೆರ್ಸಿಯಲ್ಲಿ ಮೊದಲ ಸಲ ಕಣಕ್ಕಿಳಿದದ್ದು ಅದೇ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ. ಕೊಹ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ಅವಳಿ ಡಕ್ಗಳನ್ನು ಅನುಭವಿಸಿದರೂ, ಮೂರನೇ ಪಂದ್ಯದಲ್ಲಿ ಅವರು ಪುಟಿದೆದ್ದರು, ರೋಹಿತ್ ಶತಕ ದಾಖಲಿಸಿದ ಅದೇ ಪಂದ್ಯದಲ್ಲಿ.
ಬಿಸಿಸಿಐಗೆ ತಲೆನೋವು
ದಕ್ಷಿಣ ಆಫ್ರಿಕಾ ಏಕದಿನ ಪಂದ್ಯಗಳು ಆರಂಭವಾಗುತ್ತಿದ್ದಂತೆ, ಕೊಹ್ಲಿ ಮತ್ತು ಗಂಭೀರ್ ನಡುವಿನ ಸಂಬಂಧವು ಕೂಡ ಚರ್ಚೆಯ ವಿಷಯವಾಗಿದೆ. ಈ ಇಬ್ಬರು ಆಟಗಾರರ ಜತೆ ಗಂಭೀರ್ ಸರಿಯಾಗಿ ಸಮಾಲೋಚನೆ ಮಾಡುತ್ತಿಲ್ಲ ಎಂದೆಲ್ಲಾ ವರದಿಯಾಗಿದೆ. ಇದು ಬಿಸಿಸಿಐ ತಲೆನೋವು ಹೆಚ್ಚುವಂತೆ ಮಾಡಿದೆ.
ಆಸ್ಟ್ರೇಲಿಯಾ ಸರಣಿ ವೇಳೆಯಲ್ಲೇ ಕೈಕೊಟ್ಟ ಸಂವಹನ ಕೊರತೆ
ಆಸ್ಟ್ರೇಲಿಯಾ ಸರಣಿಯ ಸಮಯದಲ್ಲಿ, ರೋಹಿತ್ ಮತ್ತು ಅಗರ್ಕರ್ ಪರಸ್ಪರ ಮಾತನಾಡಲಿಲ್ಲ. ಆಗಿನಿಂದ ಇಂದಿನವರೆಗೆ, ಕೊಹ್ಲಿ ಮತ್ತು ಗಂಭೀರ್ ಕೂಡ ಪರಸ್ಪರ ಹೆಚ್ಚು ಮಾತನಾಡಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

