ಮನೆಯಿಂದ ಹೊರ ಬರ್ತಿಲ್ಲ ಜನ, ಮನೆಗೇ ಬರ್ತಿದೆ ದಿನಸಿ, ಔಷಧಿ
ದೇಶವೇ ಲಾಕ್ಡೌನ್ ಆಗಿರುವ ಸಂದರ್ಭದಲ್ಲಿ ಮಂಗಳೂರಿನ ವಿಟ್ಲದಲ್ಲಿ ಜನ ಮನೆಯಿಂದ ಹೊರಗೆ ಬರದೆ ಶಿಸ್ತಾಗಿ ಮನೆಯೊಳಗೆ ಕೂತಿದ್ದಾರೆ. ಕೊರೋನಾ ವೈರಸ್ನಿಂದ ತಪ್ಪಿಸಿಕೊಳ್ಳಲು ನೀಡಲಾಗಿರುವ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ದಿನಸಿ ಹಾಗೂ ತರ್ತು ಔಷಧಗಳು ಅವರ ಮನೆ ಬಾಗಿಲಿಗೇ ಬರುತ್ತಿದೆ. ಹೇಗೆ..? ಇಲ್ಲಿ ನೋಡಿ
ದೇಶವೇ ಲಾಕ್ಡೌನ್ ಆಗಿ ಜನರು ದಿನಸಿ ಇಲ್ಲದೆ ಕಷ್ಟಪಡುವುದನ್ನು ತಪ್ಪಿಸಲು ವಿಟ್ಲದ ಯುವಕರ ತಂಡ ಮಾದರಿ ಕೆಲಸ ಮಾಡುತ್ತಿದೆ.
ಮಹಾಮಾರಿಯಿಂದ ಕಂಗೆಟ್ಟಿರುವ ನಾಡಿನ ಜನತೆಗೆ ತುರ್ತು ಸಂದರ್ಭದಲ್ಲಿ ಅನಾರೋಗ್ಯದ ಸಮಸ್ಯೆ, ದಿನಸಿ ಮತ್ತಿತರ ಸಾಮಗ್ರಿಗಳನ್ನು ಮಹಾಮಾರಿಯಿಂದ ಕಂಗೆಟ್ಟಿರುವ ನಾಡಿನ ಜನತೆಗೆ ತುರ್ತು ಸಂದರ್ಭದಲ್ಲಿ ನಾಡಿನ ಜನತೆಗೆ ಅನಾರೋಗ್ಯದ ಸಮಸ್ಯೆ, ದಿನಸಿ ಮತ್ತಿತರ ಸಾಮಗ್ರಿಗಳನ್ನು ತಮ್ಮ ಮನೆಬಾಗಿಲಿಗೆ ತಲುಪಿಸುವ ಕೆಲಸವನ್ನು ವಿಶ್ವಹಿಂದೂ ಪರಿಷತ್ ಬಜರಂಗದಳ ವಿಟ್ಲ ಶಾಖೆ ಮಾಡುತ್ತಿದೆ.
ಅಕ್ಕಿ ಇನ್ನಿತರ ಸಾಮಾಗ್ರಿಯನ್ನು ವಿತರಿಸುತ್ತಿರುವುದು
Vital
ಜನರ ಮನೆ ಬಾಗಿಲಿಗೆ ಹಾಲಿನ ಪ್ಯಾಕೆಟ್ಗಳನ್ನೂ ಹಂಚಲಾಯಿತು
ಔಷಧ ಕೇಳಿದವರಿಗೆ ಔಷಧಿ ತಲುಪಿಸುವ ವ್ಯವಸ್ಥೆ
ವಾಟ್ಸಾಪ್ ಗ್ರೂಪ್ ಮೂಲಕ ತಮ್ಮ ಬೇಡಿಕೆಗಳನ್ನು ಮುಂದಿಡುವ ಜನ. ಜನರ ಬೇಡಿಕೆಗನುಗುಣವಾಗಿ ಸಮಾಗ್ರಿ ವಿತರಣೆ ಮಾಡುತ್ತಾರೆ.
ಬಡವರ ಮನೆಗೆ ಅಕ್ಕಿಯನ್ನು ವಿತರಿಸುತ್ತಿರುವುದು
ಅಕ್ಕಿ ಸೇರಿ ಇತರ ಸಮಾಗ್ರಿಗಳನ್ನು ಜೀಪಿನಲ್ಲಿ ಮನೆ ಮನೆಗೆ ತೆಗೆದುಕೊಂಡು ಹೋಗಿ ಹಂಚುತ್ತಿರುವುದು
ನಿತ್ಯ ಉಪಯೋಗಿಸುವ ಹಾಲು, ಮೊಸರು, ಮಜ್ಜಿಗೆ ಇವುಗಳನ್ನು ವಿಟ್ಲ ಆಸುಪಾಸಿನ ಪ್ರದೇಶಗಳಿಗೆ ಮಾರ್ಕೆಟ್ ದರದಲ್ಲಿಯೇ ಮನೆ ಮನೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದ್ದು, ಹಾಲಿನ ವ್ಯಾಪಾರಿ ನವೀನ್ ನಾಯಕ್ ಎಂಬವರು ಉಚಿತ ಹೋಂ ಡೆಲಿವರಿ ನೀಡಲು ಮುಂದಾಗಿದ್ದಾರೆ.