ಕೊರೋನಾ ಮಧ್ಯೆಯೂ ಜನಕ್ಕೆ ಸಂತೆಯದ್ದೇ ಚಿಂತೆ: ಪೊಲೀಸರ ಲಾಠಿ ಏಟಿಗೆ ಕಾಲ್ಕಿತ್ತ ಮಂದಿ!
ಬಾಗಲಕೋಟೆ(ಮಾ.26): ಮಹಾಮಾರಿ ಕೊರೋನಾ ವೈರಸ್ ದೇಶದಿಂದ ಕಿತ್ತೊಗೆಯಲು ಏಪ್ರಿಲ್ 14 ರವೆರೆ ಭಾರತ್ ಲಾಕ್ಡೌನ್ ಕರೆ ಕೊಟ್ಟಿದ್ದಾರೆ. ಆದರೆ, ಬಾಗಲಕೋಟೆ ಜನ ಮಾತ್ರ ಲಾಕ್ಡೌನ್ ಮಧ್ಯೆಯೂ ಸಂತೆ ಮಾಡಲು ಮುಂದಾಗಿದ್ದರು. ಹೀಗಾಗಿ ಪೊಲೀಸರು ಸಂತೆಗೆ ಬಂದಿದ್ದ ಮಂದಿಗೆ ಲಾಠ ಏಟಿನ ರುಚಿ ತೋರಿಸಿದ್ದಾರೆ.
ಜಿಲ್ಲಾಡಳಿತ ಸೂಚನೆ ಧಿಕ್ಕರಿಸಿ ವಲ್ಲಭಾಯ್ ವೃತ್ತದ ಬಳಿ ಕಾಯಿಪಲ್ಲೆ ಮಾರುಕಟ್ಟೆ ಆರಂಭ
ಬೆಳ್ಳಂಬೆಳಿಗ್ಗೆ ಕೆಲವರಿಗೆ ಲಾಠಿ ಏಟಿನ ರುಚಿ ತೋರಿಸಿದ ಪೋಲಿಸರು
ಮಾರುಕಟ್ಟೆ ಆರಂಭವಾದ ಕೆಲವೇ ಕ್ಷಣಗಳಲ್ಲಿ ಸಂತೆಯಿಂದ ಜನರನ್ನು ಚದುರಿಸಿದ ಪೊಲೀಸರು
ಪೊಲೀಸರ ಲಾಠಿ ಏಟಿನ ರುಚಿ ತಿಂದು ಸಂತೆ ಕಾಲ್ಕಿತ್ತ ಜನರು
ಮನೆಮನೆಗೆ ತೆರಳಿ ಕಾಯಿಪಲ್ಲೆ ಮಾರಾಟ ಮಾಡಲು ಸೂಚಿಸಿದ ಜಿಲ್ಲಾಡಳಿತ
ನಗರದಲ್ಲಿ ಬೆಳ್ಳಂಬೆಳಿಗ್ಗೆ ಸಿಟಿ ರೌಂಡ್ಸ್ ಹಾಕಿದ ಎಸ್.ಪಿ. ಲೋಕೇಶ್
ಪರಿಸ್ಥಿತಿ ಅವಲೋಕಿಸಿ ಸ್ಥಳಕ್ಕೆ ಹೆಚ್ಚುವರಿ ಡಿಎಆರ್ ಪೋಲಿಸ್ ಸಿಬ್ಬಂದಿ ನಿಯೋಜನೆ