ಭಾರತ್ ಲಾಕ್ಡೌನ್: ಒಂದೊತ್ತಿನ ಊಟಕ್ಕೂ ಬಡವರ ಪರದಾಟ, ಕಾಂಗ್ರೆಸ್ನಿಂದ ಆಹಾರ ವಿತರಣೆ
ಬೆಂಗಳೂರು(ಏ.03): ದೇಶಾದ್ಯಂತ ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ಬಡವರು, ಭಿಕ್ಷುಕರು, ನಿರ್ಗತಿಕರು, ಕೂಲಿ ಕಾರ್ಮಿಕರು ಒಂದು ಹೊತ್ತಿನ ಊಟ ಮಾಡುವುದಕ್ಕೂ ಪರದಾಡುತ್ತಿದ್ದಾರೆ. ಹೀಗಾಗಿ ಬಡವರ ಹೊಟ್ಟೆ ತುಂಬಿಸಲು ಕಾಂಗ್ರೆಸ್ ಆಹಾರ ಸಿದ್ಧಪಡಿಸಿ ಹಂಚುತ್ತಿದೆ.
ಸಂಕಷ್ಟದಲ್ಲಿರುವ ಬಡವರು, ಹಸಿದವರ ಹೊಟ್ಟೆ ತುಂಬಿಸಲು ಕಾಂಗ್ರೆಸ್ ಆಹಾರ ವಿತರಣೆ
ಬಿಟಿಎಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಲಕ್ಕಸಂದ್ರದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಹಾರ ಸಿದ್ಧಪಡಿಸಲಾಗುತ್ತಿದೆ
ಸಿದ್ಧವಾದ ಆಹಾರವನ್ನು ಬಡವರು, ನಿರ್ಗತಿಕರು ಹಾಗೂ ಹಸಿದವರಿಗೆ ವಿತರಣೆ
ಆಹಾರ ತಯಾರಿಕೆ ಪರಿಶೀಲಿಸಿ ಖುದ್ದು ಆಹಾರ ಸೇವಿಸಿ ಗುಣಮಟ್ಟ ಪರೀಕ್ಷಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕ ಮಾಜಿ ಸಚಿವ ರಾಮಲಿಂಗಾ ರೆಡ್ಡಿ