ಮಾನವೀಯತೆ ಮೆರೆದ ಪೊಲೀಸರು, ಹಸಿದವರಿಗೆ ಊಟ ವಿತರಣೆ
ಕೊರೋನಾ ವೈರಸ್ ವಿಪರೀತವಾಗಿ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ಭಾರತವೇ ಮುಂದಿನ 21 ದಿನಗಳವರೆಗೆ ಲಾಕ್ಡೌನ್ ಆಗಲಿದೆ. ಈಗಾಗಲೇ ಕರ್ನಾಟಕ ಸಂಪೂರ್ಣ ಸ್ಥಗಿತಗೊಂಡಿದೆ. ಈ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಳ್ಳುವ ಪೊಲೀಸರು ಜನ ಜಾಗೃತಿ ಮೂಡಿಸುವುದಲ್ಲದೇ, ಹಸಿದ ಜೀವಗಳಿಗೆ ಖುದ್ದು ಆಹಾರ ಪೂರೈಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಇಡೀ ದೇಶವೇ ಲಾಕ್ ಡೌನ್ ಆಗುತ್ತಿದ್ದು, ಬೀದಿ ಬದಿಯಲ್ಲಿ ವಾಸಿಸುತ್ತಿರುವ ಬಡವರ ಹಸಿವು ನೀಗುವುದೇ ದೊಡ್ಡ ಸಲವಾಗಿದೆ.
ಹಸಿದವರ ಸಂಕಟ ಅರಿತ ಪೊಲೀಸರು ತಮ್ಮ ವಾಹನದಲ್ಲಿಯೇ ಆಹಾರ ವಿತರಿಸಿದ್ದಾರೆ.
ಇಂಥ ಕಾರ್ಯಕ್ಕೆ ಮುಂದಾಗುವುದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯ.
ದೇಶದ ಕೆಲವೆಡೆ ಹಲವು ಎನ್ಜಿಒಗಳು ಹಸಿದವರ ಹೊಟ್ಟೆ ತುಂಬಿಸುವ ಕಾರ್ಯಕ್ಕೆ ಮುದಾಗಿವೆ.
ಮಾನವೀಯತೆ ಮೆರೆಯುತ್ತಿರುವ ಪೊಲೀಸರು ಆಟೋ ಮೂಲಕ ರೋಗದ ಬಗ್ಗೆಯೂ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ.
ವೈದ್ಯರು, ವೈದ್ಯರಿಗೆ ಚಪ್ಪಾಳೆ ಮೂಲಕ ನೈತಿಕ ಬೆಂಬಲ ನೀಡಿ, ಎಂದು ಪ್ರಧಾನಿ ಮೋದಿ ನೀಡಿದ ಕರೆಗೆ ವ್ಯಾಪಕ ಬೆಂಬಲವೂ ವ್ಯಕ್ತವಾಗಿತ್ತು.