ವಾವ್ಹ್..!ಕರ್ನಾಟಕ ಕಾಂಗ್ರೆಸ್ ನಾಯಕರಿಗೂ ಮಾದರಿಯಾಯ್ತು ಮೋದಿ ಡಿಸ್ಟೆನ್ಸ್ ಮೀಟಿಂಗ್
ಮಾಹಾಮಾರಿ ಕೊರೋನಾ ವೈರಸ್ ವಿರುದ್ಧ ಸಮರ ಸಾರಿರುವ ಕೇಂದ್ರ, ಲಾಕ್ಡೌನ್ಗೆ ಘೋಷಿಸಿದೆ. ಮೊನ್ನೇ ದೇಶವನ್ನುದ್ದೇಶಿಸಿ ಮಾತನಾಡಿದ್ದ ಮೋದಿ, 21 ದಿನಗಳ ಕಾಲ ಹೊರಗಡೆ ಬರಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಕರೆ ನೀಡಿದ್ದರು. ಇದರ ಬೆನ್ನಲ್ಲೇ ಮೋದಿ ಕ್ಯಾಬಿನೆಟ್ ಸಭೆ ನಡೆಸಿದ್ದು. ಆ ಸಭೆಯಲ್ಲಿ ಸೋಷಿಯಲ್ ಡಿಸ್ಟೆನ್ಸ್ ಕಾಪಾಡಿಕೊಂಡು ಮಾದರಿಯಾಗಿದ್ದರು. ಇದೀಗ ಇದು ಕರ್ನಾಟಕ ಕಾಂಗ್ರೆಸ್ ನಾಯಕರಿಗೂ ಮಾದರಿಯಾಗಿದ್ದು, ಅವರು ಸಹ ಸಭೆಯಲ್ಲಿ ಅಂತರ ಕಾಯ್ದುಕೊಂಡಿದ್ದಾರೆ. ಒಂದಿಷ್ಟು ಚಿತ್ರಗಳು ಇಲ್ಲಿವೆ ನೋಡಿ.
21 ದಿನಗಳ ಕಾಲ ಹೊರಗಡೆ ಬರಬೇಡಿ ಎಂದು ಮೋದಿ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಕರೆ ನೀಡಿದ್ದರು. ಇದರ ಬೆನ್ನಲ್ಲೇ ಮೋದಿ ಕ್ಯಾಬಿನೆಟ್ ಸಭೆ ನಡೆಸಿದ್ದು. ಆ ಸಭೆಯಲ್ಲಿ ಸೋಷಿಯಲ್ ಡಿಸ್ಟೆನ್ಸ್ ಕಾಪಾಡಿಕೊಂಡು ಮಾದರಿಯಾಗಿದ್ದರು.
ಮೋದಿ ಅವರ ಸಾಮಾಜಿಕ ಅಂತರ ಇತರರಿಗೂ ಮಾದರಿಯಾಗಿದ್ದು, ಅಂಗಡಿ ಮುಂದೆಯಲ್ಲೂ ಸಹ ಸರ್ಕಲ್ ಹಾಕಿ ಡಿಸ್ಟೆನ್ಸ್ ಕಾಪಾಡಿಕೊಳ್ಳುತ್ತಿದ್ದಾರೆ.
ಇದೀಗ ರಾಜ್ಯ ಕಾಂಗ್ರೆಸ್ ಸಭೆಯಲ್ಲೂ ಸಹ ಸೋಷಿಯಲ್ ಡಿಸ್ಟೆನ್ಸ್ ಕಾಪಾಡಿರುವುದು ಕಂಡುಬಂದಿದೆ.
ಗುರುವಾರ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಡಿಕೆಶಿ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಸಭೆ ನಡೆಸಿದರು
ಈ ಸಭೆಯಲ್ಲಿ ನಾಯಕರು ಸ್ವಲ್ಪ ಅಂತರ ಕಾಯ್ದುಕೊಂಡು ಮೋದಿ ಡಸ್ಟೆನ್ಸ್ ಮಾದರಿಯನ್ನು ಅನುಸರಿಸಿದರು.
ಕೇವಲ ರಾಜ್ಯ ಕಾಂಗ್ರೆಸ್ ಮಾತ್ರವಲ್ಲದೇ ಮಾಹಾರಾಷ್ಟ್ರ ಸಿಎಂ ಸಭೆಯಲ್ಲೂ ಸಹ ಸೋಷಿಯಲ್ ಡಿಸ್ಟೆನ್ಸ್ ಕಂಡುಬಂದಿದೆ.
ಇಂದು (ಗುರುವಾರ) ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ನಡೆದ ಮೀಟಿಂಗ್ನಲ್ಲಿ ಒಬ್ಬರಿಂದ ಒಬ್ಬರಿಗೆ ಅಂತರದಲ್ಲಿ ಕುರ್ಚಿಗಳಲ್ಲಿ ಕುಳಿತು ಸಭೆ ಮಾಡಿದರು.