ಚಿತ್ರಗಳು: ನಿರ್ಗತಿಕರ ಪಾಲಿನ ಬಂಧು ನಮ್ಮ ಬೆಂಗಳೂರು ಪೊಲೀಸ್ರು
ದೇಶದ ಜನತಗ ಈಗ ಕೊರೋನಾ ಸಂಕಷ್ಟ ಕಾಲ. ಕಿಲ್ಲರ್ ವೈರಸ್ ಆರ್ಭಟದಿಂದಾಗಿ ಇಡೀ ದೇಶವೇ ಕಂಪ್ಲೀಟ್ ಸ್ತಬ್ಶವಾಗಿದೆ. ಇದ್ರಿಂದ ಸಾಕಷ್ಟು ಜನರು ತೊಂದರೆಯಲ್ಲಿ ಸಿಲುಕಿದ್ದಾರೆ. ಅದ್ರಲ್ಲೂ ಬಿಕ್ಷಕರು, ನಿರ್ಗತಿಕರ ಕಥೆ ಹೇಳತೀರದರು. ಸಾಮಾನ್ಯವಾಗಿ ಅವರಿವರ ಬಳಿ ಇಲ್ಲ ಅಲ್ಲಿ ಇಲ್ಲಿ ಬಿದ್ದಿರೋದನ್ನ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ರು. ಆದ್ರೆ, ಇದೀಗ ರಸ್ತೆಯಲ್ಲಿ ಜನರೇ ಇಲ್ಲ. ಇದರಿಂದ ಇವರ ಹೊಟ್ಟಯನ್ನ ನಮ್ಮ ಬೆಂಗಳೂರು ಪೊಲೀಸ್ರು ತುಂಬಿಸಿದ್ದಾರೆ.
ಕೊರೋನಾ ಸಂಕಷ್ಟ ಕಾಲದಲ್ಲಿ ಹಸಿದವರ ಹೊಟ್ಟೆ ತುಂಬಿಸಿದ ಬೆಂಗಳೂರು ನಗರ ಪೊಲೀಸ್ರು
ಆಹಾರವಿಲ್ಲದೇ ರಸ್ತೆಯಲ್ಲಿ ತಿರುಗಾಡುತ್ತಿದ್ದವರಿಗೆ ನಗರದ ಪೊಲೀಸರು ಊಟ ವಿತರಿಸಿದರು.
ತಮ್ಮ ವಾಹನದಲ್ಲಿಯೇ ತಂದು ಬಿಕ್ಷುಕರಿಗೆ ಬಾಳೆ ಎಲೆ ಊಟ ನೀಡಿದರು
ಕೊರೋನಾ ವೈರಸ್ ಎಫೆಕ್ಟ್ನಿಂದ ಇಡೀ ದೇಶವೇ ಲಾಕ್ಡೌನ್ ಆಗಿದ್ದರಿಂದ ಬಿಕ್ಷುಕರು ಊಟವಿಲ್ಲದೇ ಪರದಾಡುತ್ತಿದ್ದರು.
ಸಾಮಾನ್ಯವಾಗಿ ದಿನ ಹೋಗೋ ಬರೋ ಜನರು ಅರ್ಧ ತಿಂದು ಬಿಸಾಡಿದ್ದ ಆಹಾರವನ್ನೇ ಬಿಕ್ಷುಕರು ಸೇವಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.
ಡೆಡ್ಲಿ ಕೊರೋನಾ ಭೀತಿಯಿಂದ ಯಾರು ರಸ್ತೆಗೆ ಬಂದಿಲ್ಲದಿರುವುದರಿಂದ ನಿರ್ಗತಿಕರ ಹೊಟ್ಟೆಗೆ ಏನು ಇಲ್ಲದಂತಾಗಿತ್ತು
ಸದ್ಯಕ್ಕೆ ನಿರ್ಗತಿಕರ ಪಾಲಿನ ಬಂಧು ನಮ್ಮ ಬೆಂಗಳೂರು ಪ್ರೊಲೀಸ್ರು
ತಮ್ಮ ವಾಹನದಲ್ಲಿ ಊಟ ತಂದು ರಸ್ತೆಯಲ್ಲಿ ಕುಳಿತ್ತಿದ್ದ ನಿರ್ಗತಿಕರಿಗೆ ವಿತರಿಸುತ್ತಿದ್ದಾರೆ.