ಲಾಠಿ ಹಿಡಿದ ಖಡಕ್ ಪೊಲೀಸರಿಂದ ಮಾನವೀಯ ಕೆಲಸ..! ಸೌಟು ಹಿಡಿದ ಡಿಸಿಪಿ
ಲಾಕ್ಡೌನ್ ಉಲ್ಲಂಘಿಸಿದವರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು ಈಗ ಹಸಿದವರಿಗೆ ಅನ್ನ ನೀಡುವ ಮಾನವೀಯ ಕೆಲವನ್ನೂ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗ ಪೊಲೀಸರು ಆಹಾರ ವಿತರಣೆ ಮಾಡಿದ್ದಾರೆ. ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ಅವರು ಸ್ವತಃ ತಾವೇ ಸೌಟ್ ಹಿಡಿದು ಊಟ ಬಡಿಸಿದ್ದಾರೆ. ಇಲ್ಲಿವೆ ಫೋಟೋಸ್
ನಿರಾಶ್ರಿತರ ಕೇಂದ್ರದಲ್ಲಿ ಪೊಲೀಸರು ಬಡವರಿಗೆ ಆಹಾರ ವಿತರಿಸಿದ್ದಾರೆ
ಪುಟ್ಟ ಮಕ್ಕಳೂ ಬಂದು ಆಹಾರ ತೆಗೆದುಕೊಳ್ಳುತ್ತಿರುವುದು
ದಕ್ಷಿಣ ವಿಭಾಗದ ಎಲ್ಲಾ ಠಾಣೆಯಿಂದಲೂ ಊಟ ವಿತರಣೆ ಮಾಡಲಾಗುತ್ತಿದ್ದು ಪೊಲೀಸರ ಕಾರ್ಯಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ
ಕೊರೊನಾ ಹೊಡೆತಕ್ಕೆ ಊಟವಿಲ್ಲದೇ ಪರದಾಡುತ್ತಿರುವ ಬಡವರಿಗೆ ಊಟ ವಿತರಣೆ ಮಾಡಿ ಪೊಲೀಸರು ಮಾನವೀಯತೆ ತೋರಿಸಿದ್ದಾರೆ.
ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ಅವರು ಸ್ವತಃ ತಾವೇ ಸೌಟ್ ಹಿಡಿದು ಊಟ ಬಡಿಸಿದ್ದಾರೆ.