MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • KK ಪೋಸ್ಟ್ ಮಾರ್ಟಂ ವರದಿ: ಸಿಪಿಆರ್ ನೀಡಿದ್ದರೆ ಅವರ ಪ್ರಾಣ ಉಳಿಯುತ್ತಿತ್ತು!

KK ಪೋಸ್ಟ್ ಮಾರ್ಟಂ ವರದಿ: ಸಿಪಿಆರ್ ನೀಡಿದ್ದರೆ ಅವರ ಪ್ರಾಣ ಉಳಿಯುತ್ತಿತ್ತು!

ಬಾಲಿವುಡ್ ಗಾಯಕ ಕೆಕೆ (Krishnakumar Kunnath) ಶಾಶ್ವತವಾಗಿ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ಅವರ ಮರಣೋತ್ತರ ಪರೀಕ್ಷೆಯನ್ನು ಗುರುವಾರ ಅಂದರೆ ಜೂನ್ 1 ರಂದು ಮಾಡಲಾಯಿತು. ಇದರಲ್ಲಿ ದೊಡ್ಡ ವಿಷಯವೊಂದು ಬಹಿರಂಗಪಡಿಸಲಾಗಿದೆ. ಅವರ ಸಾವಿಗೆ ಕಾರಣ ಹೃದಯಾಘಾತ (Cardiac Arrest). ಇದರೊಂದಿಗೆ ಸಮಯಕ್ಕೆ ಸರಿಯಾಗಿ ಸಿಪಿಆರ್ (CPR) ನೀಡಿದ್ದರೆ ಅವರ ಪ್ರಾಣ ಉಳಿಸಬಹುದಿತ್ತು ಎಂದೂ ಹೇಳಲಾಗಿದೆ. 

2 Min read
Author : Suvarna News
Published : Jun 02 2022, 05:16 PM IST
Share this Photo Gallery
  • FB
  • TW
  • Linkdin
  • Whatsapp
17

ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್‌ ಉರ್ಫ್ ಕೆಕೆ ನಮ್ಮೊಂದಿಗಿಲ್ಲ. ಅವರ ಅಂತ್ಯಕ್ರಿಯೆ ಜೂನ್ 2 ರಂದು ನಡೆದಿದೆ. ಇದೇ ವೇಳೆ ಸಕಾಲಕ್ಕೆ ಸಿಪಿಆರ್ ನೀಡಿದ್ದರೆ ಅವರ ಪ್ರಾಣ ಉಳಿಸಬಹುದಿತ್ತು ಎಂಬ ದೊಡ್ಡ ಸುದ್ದಿ ಹೊರಬಿದ್ದಿದೆ.

27

ಇದರೊಂದಿಗೆ ಅವರು ಆ್ಯಂಟಿಸಿಡ್ ಸೇವಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅವರ ಎಡ ಭಾಗದಲ್ಲಿರುವ ಮುಖ್ಯ ಪರಿಧಮನಿಯಲ್ಲಿ (coronary artery) ದೊಡ್ಡ ಬ್ಲಾಕೇಜ್‌ ಮತ್ತು ಇತರ ಅಪಧಮನಿಗಳಲ್ಲಿ (arteries) ಸಣ್ಣ ಬ್ಲಾಕೇಜ್‌ ಇದ್ದವು ಎಂದು ವೈದ್ಯರು ಹೇಳಿದರು.

37

ಕಾರ್ಯಕ್ರಮದ ವೇಳೆ ಅತಿಯಾದ ಉತ್ಸಾಹದಿಂದಾಗಿ ರಕ್ತದ ಹರಿವು ನಿಂತು ಹೋಯಿತು, ಇದರಿಂದಾಗಿ ಹೃದಯ ಬಡಿತ ನಿಂತು ಹೋಯಿತು. ಅದರಿಂದಾಗಿ ಆತ ಪ್ರಾಣ ಕಳೆದುಕೊಂಡ. ಮೂರ್ಛೆ ಬಿದ್ದ ಕೂಡಲೇ ಯಾರಾದರೂ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ನೀಡಿದ್ದರೆ ಸಿಂಗರ್ ಅವರನ್ನು ಉಳಿಸಬಹುದಿತ್ತು ಎಂದು ವೈದ್ಯರು ಹೇಳಿದ್ದಾರೆ. 

47

ಗಾಯಕನಿಗೆ ದೀರ್ಘ ಕಾಲದಿಂದ ಹೃದಯ ಸಂಬಂಧಿ ಸಮಸ್ಯೆಗಳಿವೆ ಎಂದು ಅವರು ಹೇಳಿದರು. ಯಾರು ತಕ್ಷಣ ಚಿಕಿತ್ಸೆ ನಿಡಲಿಲ್ಲ. ಗಾಯಕನಿಗೆ ಎಡ ಮುಖ್ಯ ಪರಿಧಮನಿಯಲ್ಲಿ 80 ಪ್ರತಿಶತದಷ್ಟು ತಡೆ ಇತ್ತು. ಇತರ ಅಪಧಮನಿಗಳಲ್ಲಿ ಸಣ್ಣ ಹೆಪ್ಪುಗಟ್ಟುವಿಕೆ ಇತ್ತು. ಇಂತಹ ಪರಿಸ್ಥಿತಿಯಲ್ಲಿ ಸಿಪಿಆರ್ ನೀಡಿದ್ದರೆ ಅವರ ಪ್ರಾಣ ಉಳಿಯುತ್ತಿತ್ತು.

57

ವೈದ್ಯರ ಪ್ರಕಾರ, ಮಂಗಳವಾರ (ಮೇ 31) ವೇದಿಕೆಯ ಪ್ರದರ್ಶನದ ಸಮಯದಲ್ಲಿ, ಗಾಯಕರು ವೇದಿಕೆಯಲ್ಲಿ ವೇಗವಾಗಿ ತಿರುಗುತ್ತಿದ್ದರು ಮತ್ತು ಅನೇಕ ಬಾರಿ ಅವರು ಗುಂಪಿನ ಮಧ್ಯೆ ನೃತ್ಯ ಮಾಡಿದರು. ಇದು ದೊಡ್ಡ ಒತ್ತಡ ಉಂಟು ಮಾಡಿತು. ಇದರಿಂದಾಗಿ ರಕ್ತದ ಹರಿವು ನಿಂತು ಹೋಯಿತು. ಇದರಿಂದಾಗಿ ಹೃದಯ ಬಡಿತ ನಿಂತುಹೋಯಿತು.  ಇದರಿಂದಾಗಿ ಗಾಯಕ ಮೂರ್ಛೆ ಹೋದರು ಮತ್ತು ಅವರು ಹೃದಯ ಸ್ತಂಭನಕ್ಕೆ ಒಳಗಾದರು. ತಕ್ಷಣವೇ ಸಿಪಿಆರ್ ನೀಡಿದ್ದರೆ ಅವರನ್ನು ಕೂಡಲೇ ಉಳಿಸಬಹುದಿತ್ತು.

67

ಸಿಪಿಆರ್ ತುರ್ತು ಸಂದರ್ಭದಲ್ಲಿ ನೀಡಲಾಗುವ ವೈದ್ಯಕೀಯ ವಿಧಾನವಾಗಿದೆ. ಸಿಪಿಆರ್ ಎಂದರೆ ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್, ಇದು ಹೃದಯಾಘಾತದ ಸಮಯದಲ್ಲಿ ತಕ್ಷಣವೇ ನೀಡಲಾಗುತ್ತದೆ. ಸಿಪಿಆರ್ ಎಂದರೆ ಹೃದಯವು ನಿಂತಾಗ ಹೃದಯವನ್ನು ಮರು ಪ್ರಾರಂಭಿಸುವ ಪ್ರಕ್ರಿಯೆ. ಆದ್ದರಿಂದ ಆಮ್ಲಜನಕದ ಮಟ್ಟವು ಶ್ವಾಸಕೋಶಕ್ಕೆ ಹೋಗಬಹುದು ಮತ್ತು ಹೃದಯ ಬಡಿತವನ್ನು ಸಾಮಾನ್ಯಗೊಳಿಸುವ ಮೂಲಕ ಅದನ್ನು ಮತ್ತೆ ಪ್ರಾರಂಭಿಸಬಹುದು. 

77

CPR ಗಾಗಿ ತರಬೇತಿ ನೀಡಲಾಗುತ್ತದೆ. ಇದರಿಂದ ಅನೇಕ ಜೀವಗಳನ್ನು ಉಳಿಸಬಹುದು. ಹೃದಯಾಘಾತ, ಹೈಪೋವೊಲೆಮಿಕ್ ಶಾಕ್, ಪ್ರಜ್ಞಾಹೀನ ಸ್ಥಿತಿಯಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾದ ವ್ಯಕ್ತಿಯನ್ನು ತಕ್ಷಣವೇ ಸಿಪಿಆರ್ ನೀಡಿ ರಕ್ಷಿಸಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಬಾಲಿವುಡ್

Latest Videos
Recommended Stories
Recommended image1
Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್​: ಮಾತು ನಿಜವಾಗೋಯ್ತು- ವಿಡಿಯೋ ವೈರಲ್​
Recommended image2
ಅಮಿತಾಭ್ ಮಾತ್ರವಲ್ಲ, ಇವರೆಲ್ಲರೂ ಶೂಟಿಂಗ್ ಸೆಟ್‌ನಿಂದ ಜೀವ ಉಳಿಸಿಕೊಂಡು ಬಂದವರೇ
Recommended image3
ಕಾರಿನೊಳಗಿನ ಸೀನ್‌ನಿಂದ ಹೆಚ್ಚಿದ ರಾಜಕೀಯ ಒತ್ತಡ, ಟಾಕ್ಸಿಕ್ ಟೀಸರ್ ನಟಿ ಬದುಕಿನಲ್ಲಿ ಕೋಲಾಹಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved