MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Jobs
  • Central Government Jobs
  • ದೇಶಸೇವೆಗಾಗಿ ಮೂರು ವರ್ಷ ಸೋಶಿಯಲ್ ಮೀಡಿಯಾದಿಂದ ದೂರ ಉಳಿದ ಅಂಜಲಿ!

ದೇಶಸೇವೆಗಾಗಿ ಮೂರು ವರ್ಷ ಸೋಶಿಯಲ್ ಮೀಡಿಯಾದಿಂದ ದೂರ ಉಳಿದ ಅಂಜಲಿ!

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC 2020) ಪರೀಕ್ಷೆಯ ಫಲಿತಾಂಶ ಸೆಪ್ಟೆಂಬರ್ 24 ರಂದು ಹೊರಬಿದ್ದಿದೆ. ಅಂತಿಮ ಫಲಿತಾಂಶದಲ್ಲಿ ಒಟ್ಟು 761 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಏಷ್ಯಾನೆಟ್‌ ನ್ಯೂಸ್‌(Asianet News) UPSC ಆಯ್ಕೆ ಮಾಡಿದ 100 ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದೆ. ಈ ಸರಣಿ ಸಂದರ್ಶನದ(UPSC Interview) ಮೂಲಕ ಅಭ್ಯರ್ಥಿಗಳ ಯಶಸ್ಸಿನ ಗುಟ್ಟು ಅನಾವರಣಗೊಳಿಸಿದೆ. ಈ ಸರಣಿಯ 5ನೇ ಸಂಚಿಕೆಯಲ್ಲಿ 158 ನೇ Rank ಪಡೆದ ಉತ್ತರ ಪ್ರದೆಶದ(Uttar Pradesh) ಕಾನ್ಪುರ್(Kanpur) ನಿವಾಸಿ ಅಂಜಲಿ ವಿಶ್ವಕರ್ಮ(Anjali Vishwakarma) ಜೊತೆ ಸಂವಾದ ನಡೆಸಲಾಗಿದೆ. ಈ ವೇಳೆ ಅವರು UPSCಯಲ್ಲಿ ಯಶಸ್ಸನ್ನು ಪಡೆಯಲು, ಕಠಿಣ ಪರಿಶ್ರಮದ ಜೊತೆಗೆ, ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ. ಅಂಜಲಿ ವಿದೇಶದಲ್ಲಿ ತೈಲ ಕಂಪನಿಯಲ್ಲಿ(Oil Company) ಕೆಲಸ ಮಾಡುತ್ತಿದ್ದರು ಆದರೆ ಯುಪಿಎಸ್‌ಸಿಗೆ ತಯಾರಾಗಲು, ಕೈತುಂಬಾ ಸಂಬಳ ಸಿಗುತ್ತಿದ್ದ ಕೆಲಸವನ್ನು ಬಿಟ್ಟು ಸ್ವದೇಶಕ್ಕೆ ಮರಳಿದರು. ಇದರೊಂದಿಗೆ, ಅವರು ಈ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸೋಶಿಯಲ್ ಮೀಡಿಯಾದಿಂದಲೂ ದೂರ ಉಳಿದಿದ್ದರು. ಅವರ ಈ ಯಶಸ್ಸಿನ ಕೆಲ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

2 Min read
Author : Suvarna News
| Updated : Oct 11 2021, 05:49 PM IST
Share this Photo Gallery
  • FB
  • TW
  • Linkdin
  • Whatsapp
17

ಉದ್ಯೋಗ ಬಿಟ್ಟಿದ್ದೇಕೆ?

ಐಪಿಎಸ್‌ಗೆ ಆಯ್ಕೆಯಾಗಿರುವ ಅಂಜಲಿ ಕಾನ್ಪುರದಲ್ಲಿ ಜನಿಸಿದ್ದಾರೆ. ಡೆಹ್ರಾಡೂನ್‌ನಿಂದ 12 ರವರೆಗೆ ಅಧ್ಯಯನ ಮಾಡಿದ ಅವರು ಬಳಿಕ ಐಐಟಿ ಕಾನ್ಪುರ (ಐಐಟಿ ಕಾನ್ಪುರ) ದಿಂದ ಬಿ.ಟೆಕ್ (ಬಿ.ಟೆಕ್) ಮಾಡಿದ್ದಾರೆ. ತದ ನಂತರ ವಿದೇಶಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಜೀವನೋಪಾಯಕ್ಕಾಗಿ ಕೆಲಸ ಮಾಡುವ ಮೂಲಕ ಹಣವನ್ನು ಗಳಿಸಬಹುದು, ಆದರೆ ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂಬುವುದು ಅಂಜಲಿ ಉದ್ದೇಶವಾಗಿತ್ತು. ಈ ಆಲೋಚನೆಯಿಂದಾಗಿ ನಾನು ನನ್ನ ಕೆಲಸವನ್ನು ಬಿಟ್ಟು UPSC ಪರೀಕ್ಷೆಗೆ ತಯಾರಿ ಆರಂಭಿಸಿದೆ ಹಾಗೂ ಎರಡನೇ ಪ್ರಯತ್ನದಲ್ಲಿ ಯಶಸ್ಸು ಗಳಿಸಿದೆ ಎಂದಿದ್ದಾರೆ ಅಂಜಲಿ.

27

ವಿವಿಧ ರಾಷ್ಟ್ರಗಳಲ್ಲಿ ಉದ್ಯೋಗ

ಅಂಜಲಿ ವಿಶ್ವಕರ್ಮ ಐಐಟಿ ಕಾನ್ಪುರದಲ್ಲಿ 2015 ರಲ್ಲಿ ಪದವಿ ಗಳಿಸಿದರು. ಬಳಿಕ 2018 ರವರೆಗೆ ಆಯಿಲ್ ಕಂಪನಿಯಲ್ಲಿ ಕೆಲಸ ಮಾಡಿದರು. ಈ ಸಮಯದಲ್ಲಿ, ಅವರು ದೀರ್ಘಕಾಲದವರೆಗೆ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಮೆಕ್ಸಿಕೋನ ತೈಲ ಕಂಪನಿಯಲ್ಲಿ ಉದ್ಯೋಗ ಮಾಡಿ ಅವರು ವೃತ್ತಿ ಜೀವನ ಆರಂಭಿಸಿದರು. ಕಂಪನಿಯಲ್ಲಿ ಅವರ ಕೆಲಸ ಕಡಲತೀರದಿಂದ ಸಮುದ್ರದ ನಡುವೆ ಇರುತ್ತಿತ್ತು. ಇದಕ್ಕಾಗಿ ಬೇಕಾದ ತರಬೇತಿಯನ್ನು ಅವರು ಯುಎಇಯಲ್ಲಿ ಪಡೆದರು. ಅಲ್ಲದೇ ಅವರು ನಾರ್ವೆ, ಮಲೇಷ್ಯಾ, ಸ್ಟೇಟ್ ಆಫ್ ಮಲಕ್ಕಾ, ಯುಕೆ ಮತ್ತು ನ್ಯೂಜಿಲ್ಯಾಂಡ್‌ನಲ್ಲಿ ಸಮುದ್ರದ ನಡುವೆ ಕೆಲಸ ಮಾಡಿದ್ದಾರೆ. ಇನ್ನು UPSC ಪರೀಕ್ಷೆಗೆ ತಯಾರಾಗಲು ನಿರ್ಧರಿಸಿದಾಗ ಅವರು ನ್ಯೂಜಿಲೆಂಡ್‌ನಲ್ಲಿದ್ದರು.

37

ಎರಡನೇ ಪ್ರಯತ್ನದಲ್ಲಿ ಯಶಸ್ಸು

ಅಂಜಲಿ ಅವರು 2018 ರಲ್ಲಿ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್‌ಸಿ) ಪರೀಕ್ಷೆಗೆ ಸಿದ್ಧರಾಗಲು ನಿರ್ಧರಿಸಿದರು. 2018 ರ ಪರೀಕ್ಷೆಯಲ್ಲಿ ಮೊದಲ ಬಾರಿಗೆ ಅದೃಷ್ಟವನ್ನು ಪ್ರಯತ್ನಿಸಿದೆ. ಆದರೆ ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್ ಪರೀಕ್ಷೆಯಲ್ಲೂ ಉತ್ತೀರ್ಣರಾಗಿರಲಿಲ್ಲ. ಅವರು ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾದರು.

47

ಸೋಶಿಯಲ್ ಮೀಡಿಯಾ ಪ್ರಭಾವ ಕಡಿಮೆಯಾಯ್ತು

ಯುಪಿಎಸ್‌ಸಿ ಮುಖ್ಯ ಪರೀಕ್ಷೆಗೆ ಹೆಚ್ಚು ಗಮನಹರಿಸಿ ತಯಾರಿ ನಡೆಸಬೇಕು. ಅದೂ ಸುತ್ತಲಿನ ಪರಿಸರದಿಂದ ವಿಚಲಿತರಾಗಬಾರದು. ತನ್ನ ಅಧ್ಯಯನದ ಅನುಭವವನ್ನು ಹಂಚಿಕೊಂಡ ಅಂಜಲಿ, 12 ನೇ ತರಗತಿಯವರೆಗೆ, ಇಂಟರ್ನೆಟ್ ಅಷ್ಟೊಂದು ವ್ಯಾಪಕವಾಗಿರಲಿಲ್ಲ. ಆ ಸಮಯದಲ್ಲಿ ಅಧ್ಯಯನದಲ್ಲಿ ಗಮನಹರಿಸುವುದು ಸುಲಭವಾಗಿತ್ತು. ಇದೇ ಕಾರಣದಿಂದ ಯುಪಿಎಸ್‌ಸಿಗೆ ತಯಾರಿ ನಡೆಸುವಾಗ ಸೋಶಿಯಲ್ ಮಿಡಿಯಾದಿಂದ ದೂರ ಉಳಿದೆ ಎಂದಿದ್ದಾರೆ.

57

ಆಡಳಿತಾತ್ಮಕ ಸೇವೆಯಿಂದ ಮಾತ್ರ ಜೀವನದಲ್ಲಿ ಪರಿಣಾಮಕಾರಿ ಕೆಲಸ ಸಾಧ್ಯ

ತನ್ನ ಕೆಲಸದ ಸಮಯದಲ್ಲಿ, ಜೀವನದಲ್ಲಿ ಕೆಲವು ಪರಿಣಾಮಕಾರಿ ಕೆಲಸಗಳನ್ನು ಮಾಡಬೇಕಾದರೆ, ಅದನ್ನು ಕೇವಲ ಭಾರತೀಯ ಆಡಳಿತ ಸೇವೆಯ ಮೂಲಕ ಮಾತ್ರ ಮಾಡಬಹುದು ಎಂಬುವುದು ಅಂಜಲಿ ಅಭಿಪ್ರಾಯ. ವೈವಿಧ್ಯಮಯ ಸಾಮರ್ಥ್ಯಗಳನ್ನು ಆಡಳಿತ ಸೇವೆಯಲ್ಲಿ ಉತ್ತಮವಾಗಿ ಪೂರೈಸಬಹುದೆಂದು ಭಾವಿಸಿದ್ದೇನೆ ಎಂದು ಅಂಜಲಿ ಹೇಳಿದ್ದಾರೆ. ಆರ್ಥಿಕವಾಗಿ ಸುರಕ್ಷಿತವಾಗಿರಲು ಉದ್ಯೋಗಕ್ಕೆ ಸೇರಿದ್ದೆ. ಇದರಿಂದ ನಾನು ನನ್ನ ಅಧ್ಯಯನವನ್ನು ನಿಭಾಯಿಸಲೂ ಸುಲಭವಾಯ್ತು. ನನ್ನೊಂದಿಗೆ ಅಧ್ಯಯನ ಮಾಡಿದ ಜನರು ಸಿದ್ಧತೆ ಮತ್ತು ಯಶಸ್ಸನ್ನು ಪಡೆದರು, ಅವರು ಮುಂದೆ ಹೋದರು ಎಂದಿದ್ದಾರೆ.

67

ಪೋಷಕರಿಗೆ ಯಶಸ್ಸಿನ ಕ್ರೆಡಿಟ್

ಅಂಜಲಿ ತನ್ನ ಯಶಸ್ಸಿನ ಕ್ರೆಡಿಟ್ ಅನ್ನು ತನ್ನ ಹೆತ್ತವರಿಗೆ ನೀಡುತ್ತಾರೆ. ನನಗೆ ಅಧ್ಯಯನ ಮಾಡಲು ಪ್ರೋತ್ಸಾಹಿಸಿದರು. ಅಲ್ಲದೇ ತಂಗಿ ಆರುಷಿಯ ಬೆಂಬಲ ಸಿಕ್ಕಿತು. ಮನೆಯಲ್ಲಿ ಕಲಿಕೆಯ ವಾತಾವರಣ ತುಂಬಾ ಚೆನ್ನಾಗಿತ್ತು. ಶಿಕ್ಷಕರ ಬೆಂಬಲ ಸಿಕ್ಕಿತು. ಅವರು ನ್ಯೂಜಿಲೆಂಡ್‌ನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದಾಗ, ಸಹೋದ್ಯೋಗಿಗಳಿಂದ ಬೆಂಬಲವಿತ್ತು ಎಂದಿದ್ದಾರೆ

77

ನೀವು ಸ್ನೇಹಿತರಿಂದಲೂ ಸ್ಫೂರ್ತಿ ಪಡೆಯಬಹುದು

ಇದನ್ನೆಲ್ಲ ನೋಡಿ, ಅನೇಕ ಜನರು ಹಣ ಸಂಪಾದಿಸುತ್ತಿದ್ದಾರೆ. ಆದರೆ ನಾಣು ದೇಶದ ಸೇವೆ ಮಾಡಬೇಕು ಎಂದು ನಿರ್ಧರಿಸಿ ಯುಪಿಎಸ್‌ಸಿಗೆ ತಯಾರಿ ಆರಂಭಿಸಿದೆ. ನನಗೆ ಇಂತಹ ಕೆಲಸಕ್ಕೆ ಸೇರೆಂಬ ಬಯಕೆ ಯಾವತ್ತೂ ಇತ್ತು. ಇದು ಸಮಾಜದ ಮೇಲೆ ಪ್ರಭಾವ ಬೀರುತ್ತದೆ. ಈ ನಿಟ್ಟಿನಲ್ಲಿ ನೀವು ನಿಮ್ಮ ಸ್ನೇಹಿತರಿಂದಲೂ ನೀವು ಸ್ಫೂರ್ತಿ ಪಡೆಯಬಹುದು.


 

About the Author

SN
Suvarna News
ಐಎಎಸ್
ಭಾರತೀಯ ಪೊಲೀಸ್ ಸೇವೆ
ಯುಪಿಎಸ್ಸಿ
ಉತ್ತರ ಪ್ರದೇಶ

Latest Videos
Recommended Stories
Recommended image1
ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಹೈಕ್ ನಿರೀಕ್ಷೆ, ಜನವರಿ ಸಂಬಳದಲ್ಲೇ ಸಿಗುತ್ತಾ ಏರಿಕೆ ಸ್ಯಾಲರಿ ?
Recommended image2
ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
Recommended image3
DRDO ನೇಮಕಾತಿ, ಬರೋಬ್ಬರಿ 764 ತಾಂತ್ರಿಕ ಸಹಾಯಕ, ತಂತ್ರಜ್ಞ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved