MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru Urban
  • ಕೇವಲ 3 ತಿಂಗಳ ಸಾಲದ ಕಂತು ಬಾಕಿ, ₹1.2ಕೋಟಿ ಫ್ಲಾಟ್ ಕಳೆದುಕೊಂಡ ಬೆಂಗಳೂರಿಗನ ಕಣ್ಣೀರು

ಕೇವಲ 3 ತಿಂಗಳ ಸಾಲದ ಕಂತು ಬಾಕಿ, ₹1.2ಕೋಟಿ ಫ್ಲಾಟ್ ಕಳೆದುಕೊಂಡ ಬೆಂಗಳೂರಿಗನ ಕಣ್ಣೀರು

ಕೇವಲ 3 ತಿಂಗಳ ಸಾಲದ ಕಂತು ಬಾಕಿ, ಇಷ್ಟೇ ನೋಡಿ ಬರೋಬ್ಬರಿ 8 ವರ್ಷಗಳಿಂದ ನಿಯತ್ತಾಗಿ ಗೃಹ ಸಾಲ ಕಟ್ಟಿದ್ದರೂ ಬ್ಯಾಂಕ್ ಕೇಳಲಿಲ್ಲ. ಮನೆಯಲ್ಲಿ ಬ್ಯಾಂಕ್ 90 ಲಕ್ಷಕ್ಕೆ ಹರಾಜು ಹಾಕಿದ ಕಣ್ಣೀರಿನ ಘಟನೆ ಬೆಂಗಳೂರಲ್ಲಿ ನಡೆದಿದೆ. 

2 Min read
Author : Chethan Kumar
Published : Feb 20 2026, 12:43 PM IST
Share this Photo Gallery
  • FB
  • TW
  • Linkdin
  • Whatsapp
16
ಬೆಂಗಳೂರಿನಲ್ಲಿ ಮನೆ ಖರೀದಿಸುತ್ತೀರಾ?
Image Credit : freepik

ಬೆಂಗಳೂರಿನಲ್ಲಿ ಮನೆ ಖರೀದಿಸುತ್ತೀರಾ?

ಬೆಂಗಳೂರಲ್ಲಿ ಮನೆ ಖರೀದಿಸಬೇಕು ಅನ್ನೋದು ಹಲವರ ಬಯಕೆ. ಇನ್ನು ಮನೆ ಖರೀದಿಸಿದವರು ಇಎಂಐ, ಮನೆ ಸಾಲದ ಬಡ್ಡಿ ಅತೀಯಾಗುತ್ತಿದೆ ಅನ್ನೋ ತಲೆನೋವು ಇದ್ದೇ ಇದೆ. ಇದೀಗ ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಬೆಂಗಳೂರಿನಲ್ಲಿ ಫ್ಲಾಟ್ ಖರೀದಿಸುವವರನ್ನು ಎಚ್ಚರಿಸಿದೆ. ಬೆಂಗಳೂರಿನ ನಿವಾಸಿ ದಿಢೀರ್ ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಮೂರು ತಿಂಗಳ ಮನೆಯ ಸಾಲ ಪಾವತಿಸಲು ಸಾಧ್ಯವಾಗಿಲ್ಲ. ಇಷ್ಟೇ ನೋಡಿ ಬ್ಯಾಂಕ್ 1.2 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್‌ನ್ನು 95 ಲಕ್ಷರೂಪಾಯಿಗೆ ಹರಾಜು ಹಾಕಿದ ಘಟನೆ ನಡೆದಿದೆ.

26
3 ಕಂತು ಬಾಕಿ ಕಟುಂಬ ಬೀದಿಗೆ
Image Credit : Asianet News

3 ಕಂತು ಬಾಕಿ ಕಟುಂಬ ಬೀದಿಗೆ

ನೆರೆಮನೆಯ ಚಾರ್ಟೆಡ್ ಅಕೌಂಟೆಂಟ್ ಮೀನಾ ಗೋಯಲ್ ನೆರೆಮೆಯವರ ಕಣ್ಣೀರ ಕತೆಯನ್ನು ಬಹಿರಂಗಪಡಿಸಿದ್ದಾರೆ. 8 ವರ್ಷಗಳ ಹಿಂದೆ ಈತ ಫ್ಲಾಟ್ ಖರೀದಿಸಿದ್ದಾರೆ. ಡೌನ್‌ಪೇಮೆಂಟ್ ಮಾಡಿ ಫ್ಲಾಟ್ ಖರೀದಿಸಿದ ಈ ಬೆಂಗಳೂರು ನಿವಾಸಿ ಕಳೆದ 8 ವರ್ಷದಿಂದ ಒಂದೇ ಒಂದು ಇಎಂಐ ಬಾಕಿ ಉಳಿಸಿದೆ ಸಮಯಕ್ಕೆ ಸರಿಯಾಗಿ ಪಾವತಿಸಿದ್ದಾರೆ. ಆದರೆ ಮೂರು ಕಂತು ಸಾಲ ಬಾಕಿಯಾಗಿದ್ದೇ ತಡ, ಬ್ಯಾಂಕ್ ಎದ್ನೋ ಬಿದ್ನೋ ಅಂತಾ ಬಂದು ಮನೆಯನ್ನೇ ಮಾರಾಟ ಮಾಡಿ ಕುಟಂಬವನ್ನೇ ಬೀದಿಗೆ ತಂದಿದೆ.

Related Articles

Related image1
Home Loan Transfer: ಮನೆ ಸಾಲವನ್ನು ಬೇರೆ ಬ್ಯಾಂಕಿಗೆ ವರ್ಗಾಯಿಸುವುದು ಹೇಗೆ? ಲಾಭಗಳೇನು?
Related image2
Interest-Free Loan: ಬಡ್ಡಿಯೇ ಇಲ್ಲದ ಸಾಲ ಸಿಗುತ್ತೆ ನೋಡಿ... ಅಸಲು ಕಟ್ಟಿದರೆ ಸಾಕು, 0 % ಬಡ್ಡಿ-100% ಖುಷಿ!
36
ಕೆಲಸ ಕಳೆದುಕೊಂಡ ವ್ಯಕ್ತಿ
Image Credit : Getty

ಕೆಲಸ ಕಳೆದುಕೊಂಡ ವ್ಯಕ್ತಿ

2025ರ ಅಕ್ಟೋಬರ್ ತಿಂಗಳಲ್ಲಿ ಕೆಲಸ ಕಳೆದುಕೊಂಡಿದ್ದರು. ಆರಂಭಿಕ ತಿಂಗಳು ಮ್ಯಾನೇಜ್ ಮಾಡಿದ್ದಾರೆ. ಬಳಿಕ ಸಾಧ್ಯವಾಗಿಲ್ಲ. ಹೀಗಾಗಿ ಜನವರಿ ವೇಳೆಗೆ 3 ತಿಂಗಳ ಮನೆ ಸಾಲದ ಕಂತು ಬಾಕಿ ಉಳಿದುಕೊಂಡಿದೆ. 8 ವರ್ಷ ಒಂದು ಸಾಲ ಬಾಕಿ ಉಳಿಸಿಕೊಳ್ಳದ ವ್ಯಕ್ತಿ, ಆರ್ಥಿಕ ಸಮಸ್ಯೆ ಎದುರಾಗಿದ್ದ ಕಾರಣ 3 ತಿಂಗಳ ಮನೆ ಸಾಲ ಬಾಕಿ ಉಳಿದಿತ್ತು.

46
ಬ್ಯಾಂಕ್‌ನಿಂದ SARFAESI Act ಅಡಿಯಲ್ಲಿ ನೋಟಿಸ್
Image Credit : istock

ಬ್ಯಾಂಕ್‌ನಿಂದ SARFAESI Act ಅಡಿಯಲ್ಲಿ ನೋಟಿಸ್

ಬ್ಯಾಂಕ್ SARFAESI Act ಅಡಿಯಲ್ಲಿ ಜನವರಿಯಲ್ಲಿ ನೋಟಿಸ್ ನೀಡಿದೆ. SARFAESI Act ಅಡಿಯಲ್ಲಿ ಬ್ಯಾಂಕ್‌ಗಳು ಕೋರ್ಟ್ ಮಧ್ಯಸ್ಥಿತೆ ಇಲ್ಲದೆ ಸಾಲದ ಮರುಪಾವತಿಗಾಗಿ ಆಸ್ತಿ ಜಪ್ತಿ ಮಾಡುವ ಅಧಿಕಾರ ಹೊಂದಿದೆ. ಇದರಂತೆ ವ್ಯಕ್ತಿಗೆ ನೋಟಿಸ್ ನೀಡಿದೆ ಕೆಲವೇ ದಿನದಲ್ಲಿ 1.2 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್‌ನ್ನು ಹರಾಜು ಮಾಡಿದೆ.

56
95 ಲಕ್ಷ ರೂಗೆ ಮಾರಾಟ, ಲಕ್ಷ ಲಕ್ಷ ರೂ ನಷ್ಟ
Image Credit : freepik

95 ಲಕ್ಷ ರೂಗೆ ಮಾರಾಟ, ಲಕ್ಷ ಲಕ್ಷ ರೂ ನಷ್ಟ

ಡೌನ್‌ಪೇಮೆಂಟ್ ಮಾಡಿ ಕಳೆದ 8 ವರ್ಷದಿಂದ ಲೋನ್ ಪಾವತಿ ಮಾಡುತ್ತಿದ್ದಾರೆ. ಆದರೆ ಬ್ಯಾಂಕ್ 1.2 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್‌ನ್ನು 95 ಲಕ್ಷ ರೂಪಾಯಿಗೆ ಹರಾಜು ಹಾಕಿತು. ಈ 90 ಲಕ್ಷ ರೂಪಾಯಿಯಲ್ಲಿ 80 ಲಕ್ಷ ರೂಪಾಯಿ ಬಾಕಿ ಸಾಲವನ್ನು ಬ್ಯಾಂಕ್ ವಸೂಲಿ ಮಾಡಿದೆ. ಬಾಕಿ ಉಳಿದ 15 ಲಕ್ಷ ರೂಪಾಯಿ ಹಣವನ್ನು ವ್ಯಕ್ತಿಗೆ ನೀಡಿದೆ. ಸರಿಸುಮಾರು 40 ಲಕ್ಷಕ್ಕೂ ಹೆಚ್ಚು ಪಾವತಿ ಮಾಡಿ ವ್ಯಕ್ತಿಗೆ ಕೊನೆಗೆ ಉಳಿದಿದ್ದು ಕೇವಲ 15 ಲಕ್ಷ ರೂಪಾಯಿ ಮಾತ್ರ.

66
ಮೀನಲ್ ಗೋಯಲ್ ನೀಡಿದ ಎಚ್ಚರಿಕೆ
Image Credit : Getty

ಮೀನಲ್ ಗೋಯಲ್ ನೀಡಿದ ಎಚ್ಚರಿಕೆ

ಸಾಲ ಬಾಕಿ ಉಳಿಸಿಕೊಂಡರೆ ಬ್ಯಾಂಕ್‌ನಿಂದ ದೂರ ಸರಿಯುವ ಬದಲು ಬ್ಯಾಂಕ್ ಜೊತೆ ಮಾತನಾಡಿ ಸಾಲವನ್ನು ಅವಧಿ ವಿಸ್ತರಣೆ, ಅಥವಾ ಇತರ ಮಾರ್ಗಗಳನ್ನು ಚರ್ಚಿಸಿ. ಕೆಲ ಆಯ್ಕೆಗಳನ್ನು ಬ್ಯಾಂಕ್ ನೀಡಲಿದೆ. ತಕ್ಷಣದ ಅಪಾಯದಿಂದ ಪಾರಾಗುವ ಸಾಧ್ಯತೆಗಳಿವೆ. ಇನ್ನು ಪಿಎಫ್ ಖಾತೆಯಿಂದ ತುರ್ತು ನಿಧಿ ಬಳಸಿಕೊಳ್ಳಲು ಅವಕಾಶವಿದೆ. ಬ್ಯಾಂಕ್ ಜಪ್ತಿ ಮಾಡಿ ಮಾರಾಟ ಮಾಡುವವರೆಗೆ ಕಾಯಬೇಡಿ. ನೀವೇ ಮಾರಾಟ ಮಾಡಿದರೆ ಮಾರುಕಟ್ಟೆ ದರ ಲಭ್ಯವಾಗಲಿದೆ. ಬ್ಯಾಂಕ್ ತನ್ನ ಸಾಲ ಮಾರುಪಾವತಿ ಮಾತ್ರ ನೋಡಲಿದೆ ಎಂದು ಮೀನಲ್ ಗೋಯಲ್ ಎಚ್ಚರಿಸಿದ್ದಾರೆ.

ಮೀನಲ್ ಗೋಯಲ್ ನೀಡಿದ ಎಚ್ಚರಿಕೆ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಬೆಂಗಳೂರು
ಮನೆ ಸಾಲ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಬೆಂಗಳೂರು ಮಹಿಳಾ ಟೆಕ್ಕಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್; ಹಂತಕನ ವಿಕೃತಿಗೆ ಪೊಲೀಸರೇ ಶಾಕ್!
Recommended image2
Karnataka Weather Update: ಬೆಂಕಿ ಬಿಸಿಲಿಗೆ ಬ್ರೇಕ್ ಇಲ್ಲ, ಇಬ್ಬನಿ ಚಳಿಗೆ ಕೊನೆಯಿಲ್ಲ: ಇಂದಿನ ರಾಜ್ಯದ ಹವಾಮಾನ!
Recommended image3
ಕಿಮ್ಮನೆ ರತ್ನಾಕರ್ ಆಪ್ತನಿಂದ ಮಹಿಳೆಗೆ ವಂಚನೆ; ಅದಾನಿ ಗ್ರೂಪ್‌ನಿಂದ 100 ಕೋಟಿ ಫಂಡ್ ಕೊಡಿಸೋದಾಗಿ 35 ಲಕ್ಷ ಪಂಗನಾಮ!
Related Stories
Recommended image1
Home Loan Transfer: ಮನೆ ಸಾಲವನ್ನು ಬೇರೆ ಬ್ಯಾಂಕಿಗೆ ವರ್ಗಾಯಿಸುವುದು ಹೇಗೆ? ಲಾಭಗಳೇನು?
Recommended image2
Interest-Free Loan: ಬಡ್ಡಿಯೇ ಇಲ್ಲದ ಸಾಲ ಸಿಗುತ್ತೆ ನೋಡಿ... ಅಸಲು ಕಟ್ಟಿದರೆ ಸಾಕು, 0 % ಬಡ್ಡಿ-100% ಖುಷಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved