Asianet Suvarna News Asianet Suvarna News

Friday Remedy: ಶುಕ್ರವಾರದ ದಿನ ಈ ಕೆಲಸ ಮಾಡಿದ್ರೆ ಬಡತನ ಕಾಡುತ್ತೆ!

ಶುಕ್ರವಾರ ಸಂಪತ್ತಿಗೆ ಅಧಿಪತಿಯಾದ ತಾಯಿ ಲಕ್ಷ್ಮಿಯ ದಿನ. ಅಷ್ಟೇ ಅಲ್ಲ, ಐಶಾರಾಮಿಯನ್ನು ಅನುಭವಿಸಲು ಅನುಗ್ರಹ ನೀಡುವ ಶುಕ್ರ ಗ್ರಹದ ದಿನವೂ ಹೌದು. ಈ ದಿನ ನೀವು ಮಾಡಬೇಕಾದ ಹಾಗೂ ಮಾಡಬಾರದ ಕೆಲಸಗಳೇನು ಗೊತ್ತಾ?

To stay away from poverty do these measures on Friday skr
Author
First Published Nov 10, 2022, 5:52 PM IST

ಲಕ್ಷ್ಮಿ ದೇವಿಯ ಶುಕ್ರನ ಸಂಬಂಧವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಶುಕ್ರವಾರ ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಶುಕ್ರ ಮತ್ತು ಲಕ್ಷ್ಮೀ ಇಬ್ಬರೂ ಸಂಪತ್ತನ್ನು ಕರುಣಿಸುವವರು. ಈ ದಿನ, ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ತಾಯಿಯು ಸಂತೋಷಗೊಂಡರೆ, ಅವಳು ತನ್ನ ಸ್ಥಳೀಯರಿಗೆ ವಿಶೇಷ ಆಶೀರ್ವಾದವನ್ನು ನೀಡುತ್ತಾಳೆ. ಆದರೆ ಶುಕ್ರವಾರದಂದು ಮಾಡಿದ ಸಣ್ಣ ತಪ್ಪು ಕೂಡಾ ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ, ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಪೂಜಿಸುವಾಗ, ನೀವು ಮರೆಯದೆ ಈ ಕೆಲಸವನ್ನು ಮಾಡಬಾರದು. ಶುಕ್ರವಾರದಂದು ಯಾವ ಕಾರ್ಯಗಳನ್ನು ಮಾಡುವುದನ್ನು ತಪ್ಪಿಸಬೇಕು ತಿಳಿಸುತ್ತೇವೆ.

  • ಈಶಾನ್ಯ ಮತ್ತು ಉತ್ತರ ದಿಕ್ಕಿನಲ್ಲಿ ಕಸ ಇತ್ಯಾದಿಗಳನ್ನು ಎಂದಿಗೂ ಇಡಬೇಡಿ. ಇದು ಮಾತಾ ಲಕ್ಷ್ಮಿ ಮತ್ತು ಭಗವಾನ್ ಕುಬೇರನ ಸ್ಥಳವಾಗಿದೆ.
  • ಮಹಿಳೆಗೆ ಅಪ್ಪಿತಪ್ಪಿಯೂ ಅವಮಾನಿಸಬೇಡಿ. ಅದರಲ್ಲೂ ಮನೆಯ ಹೆಣ್ಣುಮಕ್ಕಳು ಸಂತೋಷದಿಂದಿದ್ದರೆ ಲಕ್ಷ್ಮೀ ಸಂತೋಷವಾಗಿರುತ್ತಾಳೆ. ಶುಕ್ರವಾರದಂದು ಮಾತ್ರವಲ್ಲ, ಪ್ರತಿ ದಿನವೂ ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಮತ್ತು ಯಾವುದೇ ಮಹಿಳೆಯನ್ನು ನಿಂದಿಸಬಾರದು.
  • ಶುಕ್ರವಾರದಂದು ಮಾಂಸ, ಮದ್ಯ ಸೇವಿಸಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
  • ಶುಕ್ರವಾರ ಯಾರಿಗೂ ಸಾಲದ ಮೇಲೆ ಸಕ್ಕರೆ ನೀಡಬಾರದು. ಜ್ಯೋತಿಷ್ಯದ ಪ್ರಕಾರ, ಸಕ್ಕರೆಯು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ ಮತ್ತು ಶುಕ್ರನನ್ನು ಭೌತಿಕ ಸಂತೋಷ ಮತ್ತು ಸಮೃದ್ಧಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಸಾಲದ ಮೇಲೆ ಸಕ್ಕರೆಯನ್ನು ನೀಡುವುದು ಶುಕ್ರ ಗ್ರಹವನ್ನು ದುರ್ಬಲಗೊಳಿಸುತ್ತದೆ ಮತ್ತು ಮನೆಯಲ್ಲಿ ಬಡತನವನ್ನು ತರುತ್ತದೆ.
  • ಶುಕ್ರವಾರ ಯಾರ ಬಗ್ಗೆಯೂ ಹೆಮ್ಮೆ ಅಥವಾ ಅಹಂಕಾರವನ್ನು ತೋರಿಸಬಾರದು. ತಾಯಿ ಲಕ್ಷ್ಮಿಯು ಅಹಂಕಾರಿಗಳ ಮೇಲೆ ಕೆಟ್ಟ ದೃಷ್ಟಿಯನ್ನು ಹೊಂದಿರುತ್ತಾಳೆ. ಆದ್ದರಿಂದ, ಶುಕ್ರವಾರದಂದು ಅಂತಹ ಯಾವುದೇ ಕೆಲಸವನ್ನು ಮಾಡುವುದನ್ನು ತಪ್ಪಿಸಿ.
  • ಅಡುಗೆ ಮನೆಯಲ್ಲೂ ತಾಯಿ ಲಕ್ಷ್ಮಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಅಡಿಗೆಮನೆ ತುಂಬಾ ಸ್ವಚ್ಛವಾಗಿರಬೇಕು. ಅದರಲ್ಲೂ ಶುಕ್ರವಾರದಂದು ಅಡುಗೆಮನೆಯಲ್ಲಿ ಕೊಳಕು ಪಾತ್ರೆಗಳನ್ನು ಇಡುವುದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ.

    Vastu Tips: ವಿವಾಹಿತ ಮಹಿಳೆ ಈ ದಿಕ್ಕಲ್ಲಿ ಕಾಲಿಟ್ಟು ಮಲಗಿದ್ರೆ ಹಣ ನಷ್ಟವಾಗುತ್ತೆ!

ಶುಕ್ರವಾರ ಮಾಡಬೇಕಾದ ಕೆಲಸಗಳು(Friday Dos)

  • ಶುಕ್ರವಾರದ ಉಪವಾಸವನ್ನು ಆಚರಿಸುವುದರಿಂದ ಲಕ್ಷ್ಮಿಯ ಆಶೀರ್ವಾದ ಸಿಗುತ್ತದೆ. ಈ ದಿನ ಬೆಳಿಗ್ಗೆ ಮತ್ತು ಸಂಜೆ ಲಕ್ಷ್ಮಿಯನ್ನು ಪೂಜಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
  • ಈ ದಿನ, ಈ ಮಂತ್ರಗಳನ್ನು ಪಠಿಸಿ- 'ಓಂ ಶುಂ ಶುಕ್ರಾಯ ನಮಃ' ಅಥವಾ 'ಓಂ ಹಿಮಕುಂದಮೃಣಾಲಾಭಂ ದೈತ್ಯಾನಂ ಪರಮಂ ಗುರುಂ ಸರ್ವಶಾಸ್ತ್ರಪ್ರವಕ್ತರಂ ಭಾರ್ಗವಂ ಪ್ರಣಮಮಯಹಂ'.
  • ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಿ, ಲಕ್ಷ್ಮಿಯು ಬಿಳಿ ಬಣ್ಣವನ್ನು ಹೆಚ್ಚು ಇಷ್ಟಪಡುತ್ತಾಳೆ. ನೀವ ಕೂಡಾ ಬಿಳಿ ಬಟ್ಟೆ ಧರಿಸಿ. ಶುಕ್ರವಾರದಂದು ಬಿಳಿ ವಸ್ತುಗಳನ್ನು ದಾನ ಮಾಡುವುದರಿಂದ ಜೀವನದಲ್ಲಿ ಸಮೃದ್ಧಿ ಉಂಟಾಗುತ್ತದೆ.
  • ಶುಕ್ರವಾರದಂದು ಇರುವೆ ಮತ್ತು ಹಸುಗಳಿಗೆ ಹಿಟ್ಟು ತಿನ್ನಿಸುವುದರಿಂದ ಅದೃಷ್ಟ ಹೆಚ್ಚಾಗುತ್ತದೆ.
  • ಶುಕ್ರವಾರದಂದು ಲಕ್ಷ್ಮಿ ದೇವಿಯ ಜೊತೆಗೆ ಗಣಪತಿಯನ್ನು ಪೂಜಿಸಬೇಕು. ಮಾ ಲಕ್ಷ್ಮಿ ಸಂಪತ್ತನ್ನು ಆಶೀರ್ವದಿಸಿದರೆ, ಗಣೇಶನು ವ್ಯಕ್ತಿಗೆ ಎದುರಾಗುವ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತಾನೆ. ಶುಕ್ರವಾರದಂದು ಗಣೇಶ ಮತ್ತು ಲಕ್ಷ್ಮಿಗೆ ಪೂಜೆ ಮಾಡುವಾಗ, ತೆಂಗಿನಕಾಯಿಯನ್ನು ಅವರ ಮುಂದೆ ಇರಿಸಿ. ರಾತ್ರಿ ಗಣೇಶ ದೇವಸ್ಥಾನದಲ್ಲಿ ತೆಂಗಿನಕಾಯಿ ಇಟ್ಟು ಬನ್ನಿ. ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.

    Astrology Tips : ಅಶ್ವತ್ಥ ಮರಕ್ಕೆ ಅಪ್ಪಿತಪ್ಪಿಯೂ ಈ ಸಮಯದಲ್ಲಿ ಪೂಜೆ ಮಾಡ್ಬೇಡಿ

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
Follow Us:
Download App:
  • android
  • ios