Asianet Suvarna News Asianet Suvarna News

ನಿರುದ್ಯೋಗ ಸಮಸ್ಯೆಯೇ? ಈ ರೀತಿ ಮಾಡಿದ್ರೆ ಬಯಸಿದ ಉದ್ಯೋಗ ಪಕ್ಕಾ!

ಉದ್ಯೋಗವನ್ನು ಪಡೆಯುವುದು ಅಷ್ಟು ಸುಲಭವಲ್ಲ, ವಿಶೇಷವಾಗಿ ಇಂದು ಪ್ರತಿಯೊಬ್ಬರೂ ತುಂಬಾ ಸ್ಪರ್ಧಾತ್ಮಕರಾಗಿರುವಾಗ ಬಯಸಿದ ಉದ್ಯೋಗ ಹೋಗಲಿ, ಯಾವುದೋ ಒಂದು ಕೆಲಸ ಸಿಕ್ಕರೂ ಸಾಕು ಎಂದುಕೊಂಡರೂ ಸಿಗೋದಿಲ್ಲ. ನಿರುದ್ಯೋಗದಿಂದ ಕಂಗಾಲಾಗಿದ್ದರೆ ಈ ಜ್ಯೋತಿಷ್ಯದ ಕ್ರಮಗಳನ್ನು ಅನುಸರಿಸಿ. ನಿಮಗೆ ಶೀಘ್ರದಲ್ಲೇ ಕೆಲಸ ಸಿಗುತ್ತದೆ. 

These astrology tips will help to will get job soon skr
Author
First Published Dec 28, 2022, 6:40 PM IST

ಬಯಸಿದ ಉದ್ಯೋಗವನ್ನು ಪಡೆಯುವುದು ಪ್ರತಿಯೊಬ್ಬರ ಕನಸು. ಆದರೆ, ನಿರಂತರವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಹೆಚ್ಚುತ್ತಿರುವ ಸ್ಪರ್ಧಾತ್ಪಕ ಜಗತ್ತಿನಲ್ಲಿ ಜನರು ತಮ್ಮ ಇಚ್ಛೆಯಂತೆ ಉದ್ಯೋಗಗಳನ್ನು ಹುಡುಕುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಗಲು ರಾತ್ರಿ ಕೆಲಸಕ್ಕಾಗಿ ಬೇಟೆಯಾಡಿದರೂ ಅದೃಷ್ಟ ಜೊತೆಗೊಳಿಯುವುದಿಲ್ಲ. ಅನೇಕ ಬಾರಿ ಸಂದರ್ಶನದ ನಂತರವೂ ಜನರು ಕೆಲಸ ಪಡೆಯಲು ಸಾಧ್ಯವಾಗುವುದಿಲ್ಲ. 

ಇಂಥ ಸಂದರ್ಭದಲ್ಲಿ ಪ್ರಯತ್ನಕ್ಕೆ ಸಾಥ್ ನೀಡಲು ಅದೃಷ್ಟ, ದೇವರ ಆಶೀರ್ವಾದ ಬೇಕಾಗುತ್ತದೆ. ಇದಕ್ಕಾಗಿ ಜ್ಯೋತಿಷ್ಯದಲ್ಲಿ ಕೆಲ ಪರಿಹಾರಗಳನ್ನು ಹೇಳಲಾಗಿದೆ. ಇದರಿಂದ ಉದ್ಯೋಗದ ದಿಕ್ಕಿನಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಬಹುದು. ಈ ಕ್ರಮಗಳು ಅರ್ಹ ಅಭ್ಯರ್ಥಿಗೆ ಉದ್ಯೋಗವನ್ನು ಪಡೆಯಲು ಸಹಾಯ ಮಾಡುತ್ತದೆ. ಅಂಥ ಕ್ರಮಗಳು ಯಾವೆಲ್ಲ ತಿಳಿಸುತ್ತೇವೆ. 

  • ನೀವು ಬಯಸಿದ ಉದ್ಯೋಗಕ್ಕಾಗಿ ಕಾಯುತ್ತಿದ್ದರೆ, ಬಜರಂಗ ಬಲಿಯನ್ನು ನಿಯಮಿತವಾಗಿ ಪೂಜಿಸಿ. ನಿಮ್ಮ ಮನೆಯ ಗೋಡೆಯ ಮೇಲೆ ಹನುಮಂತ ಹಾರುವ ಫೋಟೋವನ್ನು ಹಾಕಿ.
  • ಸಂದರ್ಶನಕ್ಕೆ ಹೋಗುವಾಗ ಬೇಳೆ ಅಥವಾ ಹಿಟ್ಟಿನ ಪೇಡಾದಲ್ಲಿ ಬೆಲ್ಲವನ್ನು ಇಟ್ಟು ಹಸುವಿಗೆ ಆಹಾರ ನೀಡುವುದರಿಂದ ಕೆಲಸದ ದಾರಿಯೂ ಸುಲಭವಾಗುತ್ತದೆ. ನಿಮ್ಮ ಕೈಯಿಂದಲೇ ಹಸುವಿಗೆ ಈ ಆಹಾರವನ್ನು ನೀಡಿ ಆಶೀರ್ವಾದ ಪಡೆಯಿರಿ.
  • ಕೆಲಸದ ಬಗ್ಗೆ ಮಾತನಾಡಲು ಹೋಗಬೇಕಾದ ದಿನ ಸ್ನಾನದ ನೀರಿನಲ್ಲಿ ಸ್ವಲ್ಪ ಅರಿಶಿನವನ್ನು ಬೆರೆಸಿ.
  • ಪ್ರತಿ ಶನಿವಾರ ಶನಿದೇವನನ್ನು ಪೂಜಿಸಿ. ಇದರಿಂದ ಜೀವನೋಪಾಯಕ್ಕೆ ಬರುವ ತೊಂದರೆಗಳು ದೂರವಾಗುತ್ತವೆ. ಶನಿವಾರದಂದು ‘ಓಂ ಶನೈಶ್ಚರಾಯ ನಮಃ’ ಎಂದು 108 ಬಾರಿ ಜಪಿಸಿ.
  • ಮುಂಜಾನೆ ಹಕ್ಕಿಗಳಿಗೆ ಆಹಾರ ನೀಡುವುದರಿಂದ ಉದ್ಯೋಗ ಪಡೆಯುವಲ್ಲಿನ ಅಡೆತಡೆಗಳು ದೂರವಾಗುತ್ತವೆ. ಏಳು ಬಗೆಯ ಧಾನ್ಯಗಳನ್ನು ಬೆರೆಸಿ ಪ್ರತಿದಿನ ಪಕ್ಷಿಗಳಿಗೆ ಆಹಾರ ನೀಡಿ. ಕೆಲಸವನ್ನು ಪಡೆಯುವಲ್ಲಿ ಈ ಪರಿಹಾರವನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

    2022ರಲ್ಲಿ ಅತಿ ಹೆಚ್ಚು ಭಕ್ತರ ಭೇಟಿ ಕಂಡ 2ನೇ ದೇವಾಲಯ ತಿರುಪತಿ! ಅಚ್ಚರಿ ಹುಟ್ಟಿಸುತ್ತೆ ಭಕ್ತರ ಸಂಖ್ಯೆ!
     
  • ನೀವು ಸಂದರ್ಶನ ಅಥವಾ ಕೆಲಸದ ಬಗ್ಗೆ ಮಾತನಾಡಲು ಹೋಗುವಾಗ ಹಳದಿ ಬಟ್ಟೆ ಧರಿಸಿ ಅಥವಾ ಕೈಯ್ಯಲ್ಲಿ ಹಳದಿ ದಾರ ಧರಿಸಿ. ಅದು ಕೆಲಸವನ್ನು ಪಡೆಯುವ ಮಾರ್ಗವನ್ನು ಸುಲಭಗೊಳಿಸುತ್ತದೆ.
  • ಬೇಗ ಕೆಲಸ ಸಿಗಲು ಸುಲಭ ಉಪಾಯವೆಂದರೆ ಕಾಗೆಗಳಿಗೆ ಆಹಾರ. ನೀವು ಕಾಗೆಗಳಿಗೆ ಏನು ಬೇಕಾದರೂ ನೀಡಬಹುದಾದರೂ, ಬೇಯಿಸಿದ ಅನ್ನವನ್ನು ನೀಡುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಜ್ಯೋತಿಷ್ಯ ಪರಿಹಾರವು ಜಾತಕದಲ್ಲಿ ಶನಿಯ ದುಷ್ಪರಿಣಾಮಗಳನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ ಮತ್ತು ನಿಮಗೆ ಉತ್ತಮ ಅವಕಾಶಗಳನ್ನು ಪಡೆಯಲು ಸಹಾಯ ಮಾಡುತ್ತದೆ.
  • ಶನಿವಾರವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಆದ್ದರಿಂದ, ಪ್ರತಿದಿನ ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು ಶನಿ ದೇವರನ್ನು ಪೂಜಿಸಿ. ಅಲ್ಲದೆ, ಅಶ್ವತ್ಥ ಮರದ ಬುಡದಲ್ಲಿ ದೀಪ ಬೆಳಗಿಸಿ. ಜೊತೆಗೆ ಪವಿತ್ರ ಕೆಂಪು ದಾರವನ್ನು ತೆಗೆದುಕೊಳ್ಳಿ. ಅದನ್ನು ಮರದ ಸುತ್ತಲೂ ಮೂರು ಬಾರಿ ಸುತ್ತಿ ಕಟ್ಟಿ. ಮತ್ತು ನಿಮ್ಮ ಕನಸಿನ ಕೆಲಸಕ್ಕಾಗಿ ಹಾರೈಸಿ. ಈ ಪರಿಹಾರವು ನಿಜವಾಗಿಯೂ ತ್ವರಿತ ಫಲಿತಾಂಶಗಳನ್ನು ತೋರಿಸುತ್ತದೆ ಮತ್ತು ನೀವು ಒಂದರ ನಂತರ ಒಂದರಂತೆ ಅವಕಾಶದ ಬಾಗಿಲು ತೆರೆಯುವುದನ್ನು ನೋಡುತ್ತೀರಿ.

    3 ರಾಶಿಗಳಿಗೆ ಮಕರ ರಾಶಿಯಲ್ಲಿ ಲಕ್ಷ್ಮೀ ನಾರಾಯಣ ರಾಜಯೋಗದ ಅದೃಷ್ಟ
     
  • ತಮ್ಮ ಜಾತಕದಲ್ಲಿ ಶನಿ ದೇವರ ಉತ್ತಮ ಸ್ಥಾನವನ್ನು ಹೊಂದಿರದ ವ್ಯಕ್ತಿಯು ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ಯಶಸ್ವಿಯಾಗುವುದಿಲ್ಲ. ಶನಿದೇವನ ಮಹಾದಶಾ ನಿಮ್ಮ ವೃತ್ತಿಜೀವನದ ಮೇಲೆ ಪರಿಣಾಮ ಬೀರದಂತೆ ತಡೆಯಲು ಶನಿ ಸ್ತ್ರೋತ್ರವನ್ನು ಪಠಿಸಬೇಕು.
  • ಶನಿ ದೇವರು ಕಪ್ಪು ಬಣ್ಣವನ್ನು ಇಷ್ಟಪಡುತ್ತಾನೆ ಎಂದು ನಂಬಲಾಗಿದೆ ಮತ್ತು ಆದ್ದರಿಂದ ಉದ್ಯೋಗವನ್ನು ಹುಡುಕುತ್ತಿರುವ ಜನರು ಕಪ್ಪು ಬಣ್ಣದ  ಶೂಗಳು, ಹೊದಿಕೆಗಳು, ಹಾಳೆಗಳು ಅಥವಾ ಛತ್ರಿಗಳಂತಹ ಉಪಯುಕ್ತ ವಸ್ತುಗಳನ್ನು ಅಗತ್ಯವಿರುವವರಿಗೆ ದಾನ ಮಾಡಬೇಕು. ಈ ಪರಿಹಾರವು ಜಾತಕದಿಂದ ಶನಿ ದೋಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
Follow Us:
Download App:
  • android
  • ios