Asianet Suvarna News Asianet Suvarna News

ರಾಯಚೂರು: ರಾಯರ ಮಠದ ಶ್ರೀಗ​ಳಿಂದ ದೀಕ್ಷೆ ಸ್ವೀಕಾರ

ಚಾತು​ರ್ಮಾಸ್ಯ ದೀಕ್ಷೆ ಸ್ವೀಕಾರ ಹಿನ್ನೆ​ಲೆ​ಯಲ್ಲಿ ಶ್ರೀಮ​ಠ​ದಲ್ಲಿ ವಿವಿಧ ಧಾರ್ಮಿಕ ಕಾರ್ಯ​ಕ್ರ​ಮ​ಗಳು ಜರು​ಗಿ​ದವು. ದೀಕ್ಷೆ ಸ್ವೀಕಾರಕ್ಕೂ ಪೂರ್ವ​ದಲ್ಲಿ ಶ್ರೀಗಳು ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ಹಾಗೂ ಶ್ರೀವಾದೀಂದ್ರ ತೀರ್ಥರು ಸೇರಿದಂತೆ ಶ್ರೀಮ​ಠ​ದ​ಲ್ಲಿ​ರುವ ಎಲ್ಲ ಯತಿಗಳ ಬೃಂದಾವನಳಿಗೆ ವಿಶೇಷ ಪೂಜೆ ನೆರವೇರಿಸಿದರು. ನಂತರ ಸ್ವಾಮಿ​ಗಳು ಮೂಲರಾಮದೇವರ ಸಂಸ್ಥಾನ ಪೂಜೆಯನ್ನು ನೆರ​ವೇ​ರಿ​ಸಿ​ದರು.

Dr Subudhendra Theertha Swamiji Received Deeksha at Raghavendra Matha in Mantralayam grg
Author
First Published Jul 16, 2023, 8:07 PM IST

ರಾಯಚೂರು(ಜು.16):  ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ತಮ್ಮ 11ನೇ ಚಾತುರ್ಮಾಸ ದೀಕ್ಷೆಯನ್ನು ಶನಿವಾರ ಸ್ವೀಕರಿಸಿದರು.

ಚಾತು​ರ್ಮಾಸ್ಯ ದೀಕ್ಷೆ ಸ್ವೀಕಾರ ಹಿನ್ನೆ​ಲೆ​ಯಲ್ಲಿ ಶ್ರೀಮ​ಠ​ದಲ್ಲಿ ವಿವಿಧ ಧಾರ್ಮಿಕ ಕಾರ್ಯ​ಕ್ರ​ಮ​ಗಳು ಜರು​ಗಿ​ದವು. ದೀಕ್ಷೆ ಸ್ವೀಕಾರಕ್ಕೂ ಪೂರ್ವ​ದಲ್ಲಿ ಶ್ರೀಗಳು ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ಹಾಗೂ ಶ್ರೀವಾದೀಂದ್ರ ತೀರ್ಥರು ಸೇರಿದಂತೆ ಶ್ರೀಮ​ಠ​ದ​ಲ್ಲಿ​ರುವ ಎಲ್ಲ ಯತಿಗಳ ಬೃಂದಾವನಳಿಗೆ ವಿಶೇಷ ಪೂಜೆ ನೆರವೇರಿಸಿದರು. ನಂತರ ಸ್ವಾಮಿ​ಗಳು ಮೂಲರಾಮದೇವರ ಸಂಸ್ಥಾನ ಪೂಜೆಯನ್ನು ನೆರ​ವೇ​ರಿ​ಸಿ​ದರು.

ವಚನದ ಕಟ್ಟುಗಳಿದ್ದ ಪಲ್ಲಕ್ಕಿ ಹೊತ್ತ ಮಹಿಳೆಯರು: ಮೆರವಣಿಗೆಗೆ ಶ್ರೀಗಳಿಂದ ಚಾಲನೆ

ಚಾತುರ್ಮಾಸದ ನಿಮಿತ್ತ ಶ್ರೀಮ​ಠ​ದಲ್ಲಿ ನಿರಂತ​ರ​ವಾ​ಗಿ ಆಧಾತ್ಮಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದೇ ವೇಳೆ ಕುಂದಾಪುರದ ಶ್ರೀವ್ಯಾಸರಾಜ ಮಠದ ಪೀಠಾಧಿಪತಿ ಲಕ್ಷೀಂದ್ರ ತೀರ್ಥರು ಮಂತ್ರಾ​ಲ​ಯ​ದ​ಲ್ಲಿ​ಯೇ ಚಾತುರ್ಮಾಸದ ದೀಕ್ಷೆಯನ್ನು ಆಚರಿಸಿದರು. ಈ ಸಂದ​ರ್ಭ​ದಲ್ಲಿ ಶ್ರೀಮಠದ ವಿದ್ವಾಂಸ​ರು,​ ಪಂಡಿ​ತ​ರು, ಅಧಿಕಾರಿ, ಸಿಬ್ಬಂದಿ ಸೇರಿ​ದಂತೆ ವಿವಿಧ ವಿವಿಧ ಭಾಗಗಳಿಂದ ಭಕ್ತರು ಭಾಗ​ವ​ಹಿ​ಸಿ​ದ್ದರು.

Follow Us:
Download App:
  • android
  • ios