Asianet Suvarna News Asianet Suvarna News

ದಿ ವಿಲನ್ ಯಶಸ್ಸಿಗಾಗಿ ಕೋಣ ಬಲಿಕೊಟ್ಟು ವಿಕೃತ ಅಭಿಮಾನ

ಶಿವ​ರಾ​ಜ​ಕು​ಮಾರ, ಕಿಚ್ಚ ಸುದೀಪ್‌ ಅಭಿ​ನ​ಯದ ದಿ ವಿಲನ್‌ ಚಿತ್ರದ ಯಶ​ಸ್ಸಿಗೆ ಪ್ರಾರ್ಥಿಸಿ ಜಗಳೂರು ಪಟ್ಟ​ಣ​ದಲ್ಲಿ ಮೇಕೆ ಹಾಗೂ ಯಾವುದೋ ಊರಿ​ನಲ್ಲಿ ಕೋಣ ಬಲಿ ಕೊಟ್ಟು ಅದರ ರಕ್ತ​ದ ಅಭಿ​ಷೇ​ಕ​ವ​ನ್ನು ಚಿತ್ರದ ಪೋಸ್ಟ​ರ್‌ಗೆ ಸಿಡಿ​ಸುವ ಮೂಲಕ ವಿಕೃತ ಅಭಿ​ಮಾನ ಪ್ರದ​ರ್ಶಿ​ಸಿ​ದ್ದಾರೆ. 

Youths Sacrifice Buffalo For The Villain Success
Author
Bengaluru, First Published Oct 21, 2018, 7:14 AM IST

ದಾವ​ಣ​ಗೆರೆ :  ಶಿವ​ರಾ​ಜ​ಕು​ಮಾರ, ಕಿಚ್ಚ ಸುದೀಪ್‌ ಅಭಿ​ನ​ಯದ ದಿ ವಿಲನ್‌ ಚಿತ್ರದ ಯಶ​ಸ್ಸಿಗೆ ಪ್ರಾರ್ಥಿಸಿ ಜಗಳೂರು ಪಟ್ಟ​ಣ​ದಲ್ಲಿ ಮೇಕೆ ಹಾಗೂ ಯಾವುದೋ ಊರಿ​ನಲ್ಲಿ ಕೋಣ ಬಲಿ ಕೊಟ್ಟು ಅದರ ರಕ್ತ​ದ ಅಭಿ​ಷೇ​ಕ​ವ​ನ್ನು ಚಿತ್ರದ ಪೋಸ್ಟ​ರ್‌ಗೆ ಸಿಡಿ​ಸುವ ಮೂಲಕ ವಿಕೃತ ಅಭಿ​ಮಾನ ಪ್ರದ​ರ್ಶಿ​ಸಿ​ರುವ ವೀಡಿ​ಯೋ​ಗಳು ಈಗ ಸೋಷಿ​ಯಲ್‌ ಮೀಡಿ​ಯಾ​ಗ​ಳಲ್ಲಿ ವೈರಲ್‌ ಆಗಿದ್ದು, ಎಲ್ಲೆ​ಡೆ ತೀವ್ರ ಆಕ್ರೋಶ ವ್ಯಕ್ತ​ವಾ​ಗು​ತ್ತಿದೆ.

ದಿ ವಿಲನ್‌ ಕನ್ನಡ ಚಿತ್ರ​ರಂಗದ ಇಬ್ಬರು ದಿಗ್ಗಜ ನಟರ ಅಭಿ​ನ​ಯದ ಸಿನಿಮಾ. ಸಹ​ಜ​ವಾ​ಗಿಯೇ ಚಿತ್ರದ ಬಗ್ಗೆ ಸಾಕಷ್ಟುಕುತೂ​ಹಲ, ನಿರೀ​ಕ್ಷೆಯೂ ಇದ್ದು, ಇಂತಹ ಮಹ​ತ್ವಾ​ಕಾಂಕ್ಷೆಯ ಚಿತ್ರ ಯಶ​ಸ್ವಿ​ಯಾ​ಗ​ಲೆಂದು ಪ್ರಾರ್ಥಿಸಿ ಜಗ​ಳೂರು ನಟ​ರಾಜ ಥಿಯೇಟರ್‌ ಬಳಿ ಕಿಚ್ಚ ಸುದೀಪ್‌ ಅಭಿ​ಮಾ​ನಿ​ಗಳು ಮೇಕೆಯೊಂದ​ರ ತಲೆ​ಯನ್ನೇ ಕಡಿದು, ಅದರ ದೇಹ, ತಲೆ​ಯಿಂದ ಸಿಡಿದ ಬಿಸಿ ನೆತ್ತ​ರನ್ನು ಸುದೀಪ್‌ ಚಿತ್ರಕ್ಕೆ ಸಿ​ಡಿ​ಸುವ ಮೂಲಕ ವಿಕೃತ ಅಭಿ​ಮಾನ ವ್ಯಕ್ತ​ಪ​ಡಿ​ಸಿದ ವೀಡಿಯೋ ವೈರಲ್‌ ಆಗಿದೆ.

ಚಿತ್ರ ಬಿಡು​ಗ​ಡೆಯ ದಿನ​ದಂದು ಮೇಕೆ​ಯನ್ನು ಬಲಿ ಕೊಡ​ಲಾ​ಗಿದೆ. ಯುವ​ಕರ ತಂಡ​ವೊಂದು ಮೇಕೆ ಕಾಲು​ಗ​ಳನ್ನು ಹಿಡಿ​ದರೆ, ಮತ್ತೊಬ್ಬ ಯುವಕ ಟವ​ಲ್‌​ನಿಂದ ಮೇಕೆ ಮುಖದ ಭಾಗ​ವನ್ನು ಎಳೆದು ನಿಲ್ಲು​ತ್ತಾನೆ. ಆಗ ಲಾಂಗ್‌ ಹಿಡಿದ ಯುವ​ಕ​ನೊಬ್ಬ ಒಂದೇ ಹೊಡೆ​ತಕ್ಕೆ ಮೂಕ ಪ್ರಾಣಿಯ ದೇಹ​ದಿಂದ ರುಂಡವೇ ಕಿತ್ತು ಬರು​ವಂತೆ ಕತ್ತರಿಸಿ ಹಾಕು​ತ್ತಿ​ರು​ವುದು ಎಂತ​ಹ​ವರ ಮನ​ಸ್ಸನ್ನೂ ಒಂದು ಕ್ಷಣ ಚುರುಕು ಎನಿ​ಸು​ವಂತಿದೆ.

ಮೇಕೆ ಬಲಿ ಕೊಡು​ತ್ತಿ​ದಂತೆ ಅದರ ದೇಹ​ದಿಂದ ಚಿಮ್ಮು​ತ್ತಿದ್ದ ಬಿಸಿ ಬಿಸಿ ರಕ್ತ​ವನ್ನು ಯುವ​ಕ​ನೊಬ್ಬ ಪೋಸ್ಟ​ರ್‌​ನ​ಲ್ಲಿದ್ದ ಸುದೀಪ್‌ ಚಿತ್ರಕ್ಕೆ ಸಿಡಿಸಿ ಸಂಭ್ರ​ಮಿ​ಸಿದರೆ, ಲಾಂಗ್‌ ಹಿಡಿ​ದಿದ್ದ ಯುವಕ ಯಾವುದೋ ಯುದ್ಧ ಗೆದ್ದ​ವ​ನಂತೆ ವಿಕೃ​ತ​ವಾಗಿ ಸಂಭ್ರ​ಮಿ​ಸು​ತ್ತಿ​ರು​ವುದು, ಮತ್ತೊಬ್ಬ ಮೇಕೆ ರುಂಡ​ದಿಂದ ಚಿಮ್ಮು​ತ್ತಿ​ದ್ದರಕ್ತ​ವನ್ನು ಪೋಸ್ಟ​ರ್‌ಗೆ ಹಚ್ಚಿ ಸಂಭ್ರ​ಮಿ​ಸು​ತ್ತಿ​ರು​ವುದು ಈಗ ಎಲ್ಲೆಡೆ ತೀವ್ರ ಆಕ್ಷೇ​ಪಕ್ಕೂ ಗುರಿ​ಯಾ​ಗಿದೆ.

ಮತ್ತೊಂದು ವೈರಲ್‌ ಆಗಿ​ರುವ ವೀಡಿ​ಯೋ​ದಲ್ಲಿ ಉತ್ತರ ಕರ್ನಾ​ಟ​ಕದ ಯಾವುದೋ ಹಳ್ಳಿ​ಯಲ್ಲಿ ಕೋಣ​ವೊಂದನ್ನು ಯುವ​ಕರ ಗುಂಪು ದಿ ವಿಲನ್‌ ಚಿತ್ರದ ಪೋಸ್ಟರ್‌ ಮುಂದೆ ತಂದು ನಿಲ್ಲಿಸಿ, ನಂತರ ಅದನ್ನು ಎಲ್ಲರೂ ಸೇರಿ​ಕೊಂಡು ನೆಲಕ್ಕೆ ಕೆಲವು ಸಲ ಎತ್ತಿ ಹಾಕುವ ಮೂಲಕ ಒಂದಿಷ್ಟುಮೆತ್ತಗೆ ಮಾಡು​ತ್ತಾರೆ. ನಂತರ ಎಲ್ಲರೂ ಅದನ್ನು ಹಿಡಿ​ದು​ಕೊಂಡಾಗ ಯುವ​ಕ​ನೊಬ್ಬ ಅದರ ರುಂಡ​ವನ್ನು ಒಂದೇ ಹೊಡೆ​ತಕ್ಕೆ ಚೆಂಡಾ​ಡುವ ಮೂಲಕ ಚಿಮ್ಮಿ ಬಂದ ಕೋಣದ ಬಿಸಿ ನೆತ್ತ​ರಲ್ಲಿ ಸುದೀಪ್‌, ಶಿವ​ರಾ​ಜ​ಕು​ಮಾರ ಚಿತ್ರಕ್ಕೆ ರಕ್ತದ ಅಭಿ​ಷೇಕ ಮಾಡಿ ಘೋಷಣೆ ಕೂಗು​ತ್ತಾರೆ.

ಸಾಮಾ​ಜಿಕ ಜಾಲ ತಾಣ​ಗ​ಳಲ್ಲ ಹರಿ​ದಾ​ಡು​ತ್ತಿ​ರುವ ಇಂತಹ ವಿಕೃತ ಅಭಿ​ಮಾ​ನದ ಬಗ್ಗೆ ಸಾರ್ವ​ಜ​ನಿ​ಕ​ರಿಂದ ತೀವ್ರ ವಿರೋಧ ವ್ಯಕ್ತ​ವಾ​ಗು​ತ್ತಿದೆ. ತಮ್ಮ ನೆಚ್ಚಿನ ಅಭಿ​ಮಾ​ನಿ​ಗಳ ಬಗ್ಗೆ ಅಷ್ಟೊಂದು ಅಭಿ​ಮಾ​ನ​ವಿ​ದ್ದರೆ ಚಿತ್ರದ ಯಶ​ಸ್ಸಿ​ಗಾಗಿ ಅನಾಥ, ಅಂಧ, ವಿಶೇಷ ಮಕ್ಕಳು, ವೃದ್ಧಾ​ಶ್ರ​ಮ​ಗ​ಳಲ್ಲಿ ಅನ್ನ ಸಂತ​ರ್ಪಣೆ ಮಾಡಿ​ಸಲಿ. ಅದನ್ನು ಬಿಟ್ಟು, ಅಭಿ​ಮಾ​ನದ ಹೆಸ​ರಿ​ನಲ್ಲಿ ಮೂಕ ಪ್ರಾಣಿ​ಗ​ಳನ್ನು ಬಲಿ ಕೊಡುವ ಮೂಲಕ ವಿಕೃತ ಅಭಿ​ಮಾನ ಪ್ರದ​ರ್ಶಿ​ಸು​ವುದು ಸರಿ​ಯಲ್ಲ. ಹೀಗೆ ಅಜ್ಞಾ​ನಿ​ಗ​ಳಂತೆ ವರ್ತಿ​ಸು​ವುದು ಸರಿ​ಯ​ಲ್ಲ ಎಂಬ ಟೀಕೆ, ವಿರೋ​ಧ​ಗಳೂ ಕೇಳಿ ಬರು​ತ್ತಿವೆ.

ನಟ​ರಿಗೆ ಜನರ ಮನವಿ

ತಮ್ಮ ಚಿತ್ರ​ಗಳು ಬಿಡು​ಗ​ಡೆ​ಯಾ​ದಾಗ ಯಾವುದೇ ನಟ​ರಾ​ಗಿ​ದ್ದರೂ ಹೀಗೆ ಮೂಕ ಪ್ರಾಣಿ​ಗ​ಳನ್ನು ಅಮಾ​ನು​ಷ​ವಾಗಿ ಹತ್ಯೆ ಮಾಡ​ದಂತೆ ಅಭಿ​ಮಾ​ನಿ​ಗ​ಳಿಗೆ ಕಿವಿ​ಮಾತು ಹೇಳ​ಬೇಕು. ಚಿತ್ರದ ಯಶ​ಸ್ಸಿ​ಗಾಗಿ, ತಮ್ಮ ಮೆಚ್ಚಿನ ನಾಯ​ಕನ ಚಿತ್ರ ಚೆನ್ನಾಗಿ ಓಡಲಿ ಎಂಬ ಕಾರ​ಣಕ್ಕೆ ಹೀಗೆ ಮೂಕ ಪ್ರಾಣಿ​ಗಳನ್ನು ಅಮಾನ​ವೀ​ಯ​ವಾಗಿ ಹತ್ಯೆ ಮಾಡು​ವುದು ಸರಿ​ಯ​ಲ್ಲ​ವೆಂಬ ತಿಳಿ​ವ​ಳಿಕೆ ನೀಡುವ ಕೆಲಸ ಮಾಡಲಿ ಎಂಬು​ದಾಗಿ ಸಾರ್ವ​ಜ​ನಿ​ಕರು ಮನವಿ ಮಾಡಿ​ದ್ದಾರೆ.

Follow Us:
Download App:
  • android
  • ios