ಬಿಗ್ 3: ಮಕ್ಕಳಿಗೆ ಹರಕು ಸಮವಸ್ತ್ರ, ಯಾರ ಕೈಲಿದೆ ಸರ್ಕಾರದ ಸೂತ್ರ?
ಸರ್ಕಾರ ಮತ್ತು ಶಿಕ್ಷಣ ಇಲಾಖೆ ಪ್ರತಿ ವರ್ಷ ಮಕ್ಕಳ ವಿದ್ಯಾಭ್ಯಾಸಕ್ಕೆ ಕೋಟ್ಯಂತರ ರೂ. ಮೀಸಲಿಡುತ್ತದೆ. ಆದರೆ ಸರಕಾರ ನೀಡುತ್ತಿರುವ ಸಮವಸ್ತ್ರದ ಕತೆ ಮಾತ್ರ ಯಾರಿಗೂ ಬೇಡವಾಗಿದೆ. ಹಾಗಾದರೆ ಪರಿಸ್ಥಿತಿ ಹೇಗಿದೆ? ಯಾವ ಕಾರಣಕ್ಕೆ ಸರಕಾರಿ ಶಾಲೆಗೆ ತೆರಳುವ ಮಕ್ಕಳು ಹರಕು ಬಟ್ಟೆ ಧರಿಸಿ ತೆರಳುವಂತಾಗಿದೆ? ಇಲ್ಲಿದೆ ಸಂಪೂರ್ಣ ವಿವರ..
ಬೆಂಗಳೂರು[ಡಿ.18] ಸರಕಾರ ಮಾಡಿಕೊಂಡ ಟೆಂಡರ್ ಪ್ರಕ್ರಿಯೆಯೇ ಮಕ್ಕಳು ಹರಕು ಬಟ್ಟೆ ಧರಿಸಿ ತೆರಳುವ ಸ್ಥಿತಿ ನಿರ್ಮಾಣ ಮಾಡಿದೆ. ಸರಕಾರ ಎರಡು ಜತೆ ಬಟ್ಟೆ ನೀಡುತ್ತೇನೆ ಎಂದು ಹೇಳಿದ್ದರೂ ಮಕ್ಕಳಿಗೆ ಸಿಕ್ಕಿರುವುದು ಒಂದು ಜತೆ ಬಟ್ಟೆ ಮಾತ್ರ
ನೀಡಿರುವ ಕಳಪೆ ಬಟ್ಟೆ ಹರಿದು ಅದು ಯಾವ ಕಾಲವಾಗಿದೆಯೋ ಶಿಕ್ಷಣ ಇಲಾಖೆಗೆ ಗೊತ್ತಿಲ್ಲ. ಇದು ಒಂದೆರಡು ಶಾಲಾ ಮಕ್ಕಳ ಕತೆ ಅಲ್ಲ. ಎಲ್ಲ ಸರಕಾರಿ ಶಾಲೆಗಳ ಮಕ್ಕಳದ್ದೂ ಕಿತ್ತು ಹೋಗಿರುವ ಬಟ್ಟೆ ಧರಿಸಿಕೊಂಡು ಹೋಗುವಂತೆ ಆಗಿದೆ. ಸಂವಿಧಾನದ ಆಶಯವೇ ಎಲ್ಲಿ ಬಲಿಯಾಗುತ್ತಿದೆಯೋ ಎಂಬ ಆತಂಕ ಶುರು ಆಗಿದೆ.
"
"
"