ಸ್ನೇಹಿತೆ ಸಹಾಯಕ್ಕೆ ಬಂದ ಕಿರುತೆರೆ ನಟನ ಬಂಧನ
ಕಿರುತೆರೆ ಖ್ಯಾತ ನಟನ ಬಂಧನ | ಸ್ನೇಹಿತೆ ಸಹಾಯಕ್ಕೆ ಮುಂದಾದ ನಟ | ಸಲೂನ್ ಶಾಪ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ನಟ
ಸಲೂನ್ ಶಾಪ್ ನವರು ಅಸಭ್ಯವಾಗಿ ಮುಟ್ಟಿದ್ದಕ್ಕಾಗಿ ಚಾಕುವಿನಿಂದ ಹಲ್ಲೆ ನಡೆಸಿದ ಕಿರುತೆರೆ ನಟ ಹಾಗೂ ಅವನ ಸ್ನೇಹಿತೆಯನ್ನು ಅರೆಸ್ಟ್ ಮಾಡಲಾಗಿದೆ.
ಬಾಲಿವುಡ್ ಕಿರುತೆರೆ ನಟ ಅಭಿಮನ್ಯು ಚೌಧರಿ ಎಂಬುವವರ ಸ್ನೇಹಿತೆ ಸಲೂನ್ ಶಾಪ್ ಗೆ ಹೋಗಿದ್ದರು. ಅಲ್ಲಿನ ಸಿಬ್ಬಂದಿ ತಲೆಗೆ ಮಸಾಜ್ ಮಾಡುವಾಗ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆಕೆ ಕರೆ ಮಾಡಿ ಅಭಿಮನ್ಯುಗೆ ತಿಳಿಸಿದ್ದಾರೆ. ಸಲೂನ್ ಗೆ ಬಂದ ಆತ ಅವರನ್ನು ಚಾಕುವಿನಿಂದ ಥಳಿಸಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲ್ಲೆ ನಡೆಸಿದ ಅಭಿಮನ್ಯು ಹಾಗೂ ಅವರ ಸ್ನೇಹಿತೆಯನ್ನು ಬಂಧಿಸಲಾಗಿದೆ.
ಅಭಿಮನ್ಯು ಮನಮೋಹಿನಿ ಎಂಬ ಧಾರಾವಾಹಿಯಲ್ಲಿ ನಟಿಸಿದ್ದಾರೆ.