ಚಿತ್ರರಂಗದಿಂದ ಲೂಸ್ ಮಾದ ದೂರ ಉಳಿದಿದ್ಯಾಕೆ?
ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ನಾಯಕರ ಎಂಟ್ರಿ ಕೊಡ್ತಾ ಇದ್ದಾರೆ. ನಾನು ಸಿನಿಮಾ ಅಲ್ಲದೆ ಬೇರೆ ಬಿಸಿನೆಸ್ ಮಾಡ್ತಾ ಇದ್ದೀನಿ. ನನಗೆ ಸಿನಿಮಾದಿಂದ ಸ್ವಲ್ಪ ದೂರ ಇರುವುದಕ್ಕೆ ಬೇಜಾರಿಲ್ಲ. ಇನ್ಮುಂದೆ ಒಳ್ಳೆ ಕಥೆಗಳನ್ನ ಆಯ್ಕೆ ಮಾಡಿ ಸಿನಿಮಾ ಮಾಡ್ತಿನಿ ಎಂದು ಸುದ್ದಿಗೋಷ್ಟಿಯಲ್ಲಿ ಲೂಸ್ ಮಾದ ಹೇಳಿದ್ದಾರೆ.
ಬೆಂಗಳೂರು (ಜೂ. 25): ಕನ್ನಡ ಚಿತ್ರರಂಗದ ದೂರ ಉಳಿಯುತ್ತಿರುವ ಹಿನ್ನಲೆ ಬಗ್ಗೆ ಲೂಸ್ ಮಾದ ಯೋಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಅಮಿತಾಭ್ ಬಚ್ಚನ್, ರಜನಿಕಾಂತ್, ಕಮಲ್ ಹಾಸನ್ ಅಂತಹ ಸ್ಟಾರ್ ನಟರು ಕೂಡ ಫ್ಲಾಪ್ ಸಿನಿಮಾಗಳನ್ನ ಕೊಟ್ಟಿದ್ದಾರೆ ಅಂತಹದ್ರಲ್ಲಿ ನಾನು ಯಾಕೆ ಬೇಜಾರು ಮಾಡಿಕೊಳ್ಳಲಿ? ನನ್ನ ಸಕ್ಸಸ್ ಹಾಗೂ ಫ್ಲಾಪ್'ಗೆ ನಾನೇ ಕಾರಣ ಎಂದು ಲೂಸ್ ಮಾದ ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ನಾಯಕರ ಎಂಟ್ರಿ ಕೊಡ್ತಾ ಇದ್ದಾರೆ. ನಾನು ಸಿನಿಮಾ ಅಲ್ಲದೆ ಬೇರೆ ಬಿಸಿನೆಸ್ ಮಾಡ್ತಾ ಇದ್ದೀನಿ. ನನಗೆ ಸಿನಿಮಾದಿಂದ ಸ್ವಲ್ಪ ದೂರ ಇರುವುದಕ್ಕೆ ಬೇಜಾರಿಲ್ಲ. ಇನ್ಮುಂದೆ ಒಳ್ಳೆ ಕಥೆಗಳನ್ನ ಆಯ್ಕೆ ಮಾಡಿ ಸಿನಿಮಾ ಮಾಡ್ತಿನಿ ಎಂದು ಸುದ್ದಿಗೋಷ್ಟಿಯಲ್ಲಿ ಲೂಸ್ ಮಾದ ಹೇಳಿದ್ದಾರೆ.