ಕುರುಕ್ಷೇತ್ರ ಚಿತ್ರವನ್ನು ನಾಗಣ್ಣ ನಿರ್ದೇಶಿಸುತ್ತಿದ್ದು, ಈ ಸಿನಿಮಾದಲ್ಲಿ ನಟಿಸಿದ್ದರೆ ದರ್ಶನ್'ಅವರ 50ನೇ ಸಿನಿಮಾವಾಗುತ್ತಿತ್ತು.  

ಸ್ಯಾಂಡಲ್'ವುಡ್'ನ ಭಾರಿ ಬಜೆಟ್'ನ ಚಿತ್ರವೆಂದೆ ಪರಿಗಣಿಸಿರುವ ಕುರುಕ್ಷೇತ್ರ ಆರಂಭದಲ್ಲಿಯೇ ವಿಘ್ನ ಎದುರಾಗಿದೆ. ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾವು ಈ ಪೌರಾಣಿಕ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಲ ವರದಿಗಳ ಪ್ರಕಾರ ಸಿನಿಮಾದ ತಾರಾಗಣವನ್ನು ಅಂತಿಮಗೊಳಿಸದ ಕಾರಣದಿಂದ ಟೀಮ್ ಬಗ್ಗೆ ಬೇಸರಗೊಂಡಿದ್ದು, ಸಿನಿಮಾದಿಂದ ಹೊರಗುಳಿಯಲು ಕಾರಣ ಎಂದು ತಿಳಿದುಬಂದಿದೆ. ಕುರುಕ್ಷೇತ್ರ ಚಿತ್ರವನ್ನು ನಾಗಣ್ಣ ನಿರ್ದೇಶಿಸುತ್ತಿದ್ದು, ಈ ಸಿನಿಮಾದಲ್ಲಿ ನಟಿಸಿದ್ದರೆ ದರ್ಶನ್'ಅವರ 50ನೇ ಸಿನಿಮಾವಾಗುತ್ತಿತ್ತು.

ದರ್ಶನ್ ಈ ಸಿನಿಮಾದಲ್ಲಿ ನಟಿಸುವ ಸಲುವಾಗಿಯೇ ಫೋಟೊ ಶೂಟ್'ನಲ್ಲಿಯೂ ಭಾಗವಹಿಸಿದ್ದರು. ಪ್ರಸ್ತುತ ದರ್ಶನ್ ಅವರು ತಾರಕ್ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರೀಕರಣ ಕೂಡ ನಡೆಯುತ್ತಿದೆ. ಇದಕ್ಲಿಂತ ಮೊದಲು ರೆಬಲ್ ಸ್ಟಾರ್ ಅಂಬರೀಶ್ ಕೂಡ ತಾವು ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ತಿಳಿಸಿದ್ದರು. ಈಗ ದರ್ಶನ್ ಕೂಡ ಹೊರಗುಳಿದಿದ್ದಾರೆ.