ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದ ನವರಸ ನಾಯಕ ಜಗ್ಗೇಶ್ ಸುದೀಪ್ ರೊಂದಿಗೆ ಮಾತಿನ ಮಂಟಪವನ್ನೇ ಕಟ್ಟಿದರು. ತಮ್ಮ ಜೀವನದ ಘಟನೆಗಳನ್ನು ತಮ್ಮದೆ ಶೈಲಿಯಲ್ಲಿ ಹೇಳುತ್ತ ಬಂದ ಜಗ್ಗೇಶ್ ಸುದೀಪ್ ಅವರನ್ನು ಹಾಡಿ ಹೊಗಳಿದರು. ಸೆಲೆಬ್ರಿಟಿಗಳ ಜೀವನ ಎದುರಿಸುವ ಕಷ್ಟ ನಷ್ಟಗಳನ್ನು ಹಂಚಿಕೊಂಡರು.

ಬಿಗ್ ಬಾಸ್ ವೇದಿಕೆಯಲ್ಲಿ ನವರಸ ನಾಯಕ ಜಗ್ಗೇಶ್ ಸೆಲೆಬ್ರಿಟಿ ಜೀವನ ಯಾರಿಗೂ ಬೇಡ.. ಅಭಿಮಾನವಿದ್ದರೆ ಕೈ ಮಾಡಿ, ಹಾಯ್ ಮಾಡಿ ..ಕಣ್ಣು ಹೊಡೆಯಿರಿ ದಯವಿಟ್ಟು ಸೆಲ್ಫಿ ತೆಗೆದುಕೊಳ್ಳಲು ಮಾತ್ರ ಬರಬೇಡಿ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಲಾವಿದರನ್ನು ಕಂಡರೆ ಜನ ಮೆಚ್ಚಿ ಈ ಮೊಬೈಲ್ ಕಾಳದಲ್ಲಿ ಫೋಟೋ ತೆಗೆದುಕೊಳ್ಳಲು ಪ್ರತಿಯೊಬ್ಬರು ಬರುತ್ತಾರೆ. ಬಂದಿದ್ದು ಅಲ್ಲದೇ ಕ್ಯಾಮರಾ ಫೋಕಸ್ ಸರಿ ಮಾಡಿಕೊಳ್ಳುತ್ತಾರೆ. ದೊಡ್ಡ ಕಲಾವಿದನಿಗೆ ಪರ್ಸನಲ್ ಲೈಫೆ ಇಲ್ಲವಾಗಿದೆ.

ಮೊದಲು ಒಬ್ಬ ಸೆಲ್ಫಿ ತೆಗೆಯಲು ಬರುತ್ತಾನೆ. ಬೇಡ ಬೇಡ ಅಂದರೂ ಕೇಳಲ್ಲ. ಆಮೇಲೆ ಜನ ಗುಂಪು ಕಟ್ಟಿಕೊಳ್ಳುತ್ತಾರೆ. 5 ತಾಸು ಹಾಗೆ ನಿಂತುಕೊಳ್ಳಬೇಕಾದ ಅನಿವಾರ್ಯ ಎದುರಾಗುತ್ತದೆ. ಪೋಸ್ ಕೊಟ್ಟರೆ ಒಳ್ಳೆಯವ.. ಇಲ್ಲವಾದರೆ ಬೈಸಿಕೊಳ್ಳಬೇಕಾಗುತ್ತದೆ. ಸೆಲ್ಫಿ ಹೊಡತಕ್ಕೆ ಸಿಲುಕಿ ನಿಸರ್ಗದ ಕರೆಯನ್ನು ಪೂರೈಸಿಕೊಳ್ಳಬೇಕಾಗುತ್ತದೆ. ಎಂದು ತಮ್ಮ ಆತಂಕ-ನೋವು ತೊಡಿಕೊಂಡರು.