ಚಾಲಕ ಹಾಗೂ ಸ್ನೇಹಿತನ ಜೊತೆ ತಮ್ಮ ಐ20 ಕಾರಿನಲ್ಲಿ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅರ್ಜುನ್ ದೇವ್ ಅವರ ಮೇಲೆ ರಾಡ್'ನಿಂದ ಹಲ್ಲೆ ನಡೆಸಲು ಅರ್ಜುನ್ ಪ್ರಾಣಾಪಾಯದಿಂದ ಪಾರಾಗಿದ್ದು,ಕಾರಿಗೆ ಸ್ವಲ್ಪ ಮಟ್ಟಿನ ಹಾನಿಯಾಗಿದೆ.

ರಾಮನಗರ(ಮೇ.30): ಯುಗಪುರುಷ ಚಿತ್ರದ ನಾಯಕ ಅರ್ಜುನ್ ದೇವ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ ರಾಮನಗರದ ಬಳಿ ನಡೆದಿದೆ.

Add Asianetnews Kannada as a Preferred SourcegooglePreferred

ಚಾಲಕ ಹಾಗೂ ಸ್ನೇಹಿತನ ಜೊತೆ ತಮ್ಮ ಐ20 ಕಾರಿನಲ್ಲಿ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅರ್ಜುನ್ ದೇವ್ ಅವರ ಮೇಲೆ ರಾಡ್'ನಿಂದ ಹಲ್ಲೆ ನಡೆಸಲು ಅರ್ಜುನ್ ಪ್ರಾಣಾಪಾಯದಿಂದ ಪಾರಾಗಿದ್ದು,ಕಾರಿಗೆ ಸ್ವಲ್ಪ ಮಟ್ಟಿನ ಹಾನಿಯಾಗಿದೆ.

ಅರ್ಜುನ್ ಅವರು ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಕೋರ್ಟ್'ಗೆ ತೆರಳುತ್ತಿದ್ದರು. 'ಯುಗಪುರುಷ' ಅರ್ಜುನ್ ದೇವ್ ಅವರ ಮೊದಲ ಕನ್ನಡ ಚಿತ್ರವಾಗಿದ್ದು, ಇನ್ನಷ್ಟೆ ಬಿಡುಗಡೆಯಾಗಬೇಕಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.