ಪ್ರಯಾಣಿಕರು ಮರೆತು ಹೋದ ಬ್ಯಾಗ್, ಚಿನ್ನಾಭರಣವನ್ನು ಹಿಂದಿರುಗಿಸಿದ ಅನೇಕ ಪ್ರಕರಣಗಳನ್ನು ನೋಡಿದ್ದೇವೆ. ಅದೇ ರೀತಿ ಹುಬ್ಬಳ್ಳಿಯ ಆಟೋ ಚಾಳಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಹುಬ್ಬಳ್ಳಿ[ಫೆ.28] ಆಟೋದಲ್ಲಿ ಮರೆತು ಹೋಗಿದ್ದ ಬ್ಯಾಗ್ ಅನ್ನು ಮಾಲೀಕರಿಗೆ ಹಿಂದಿರುಗಿಸಿ ಹುಬ್ಬಳ್ಳಿಯ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಚಾಲಕ ಚನ್ನಪ್ಪ ಛಲವಾದಿ ಮಾಲಕಿ ಪಾರ್ವತಮ್ಮ ಪಾಪುಗೋಳ ಅವರಿಗೆ ಹಿಂದಿರುಗಿಸಿದ್ದಾರೆ.
Add Asianetnews Kannada as a Preferred Source

ಪಾರ್ವತಮ್ಮ ಹುಬ್ಬಳ್ಳಿಯ ವಿಶಾಲ ನಗರದ ನಿವಾಸಿ. ನಗರದ ಅಕ್ಷಯ ಪಾರ್ಕನಿಂದ ಆಟೋ ಬಾಡಿಗೆ ಪಡೆದು ಮನೆಗೆ ತೆರಳಿದ್ದರು. ನಗದು, ಚಿನ್ನಾಭರಣದವಿದ್ದ ಬ್ಯಾಗ್ ಅನ್ನು ಆಟೋದಲ್ಲೇ ಮರೆತಿದ್ದರು. ನಂತರ ಬ್ಯಾಗ್ ಅನ್ಗೋನು ಗೋಕುಲ ರೋಡ್ ಪೊಲೀಸರಿಗೆ ತಲುಪಿಸಿದ್ದ ಚಾಲಕ ಸಂಬಂಧಿಸಿದವರಿಗೆ ತಲುಪಿಸಲು ಕೇಳಿಕೊಂಡರು.
ಹುಬ್ಬಳ್ಳಿಯಲ್ಲಿ ಯುವರಾಜ್ ಕುಮಾರ್ ಸ್ಟೆಪ್ಸ್
ಪೊಲೀಸರು ಮತ್ತು ನಾಗರಿಕರು ಆಟೋ ಚಾಲಕರನ್ನು ಶ್ಲಾಘಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ.

