Asianet Suvarna News Asianet Suvarna News

ಸುಖಾಸುಮ್ಮನೆ ವಾಹನ ತಡೆಯದಂತೆ ಮತ್ತೊಮ್ಮೆ DG-IGP ಆದೇಶ, ಎಲ್ಲಾ SPಗಳಿಗೆ ಖಡಕ್ ಸೂಚನೆ

ರಾಜ್ಯದ ಜನತೆಗೆ ಪೊಲೀಸ್ ಇಲಾಖೆಯಿಂದ ಗುಡ್ ನ್ಯೂಸ್ ಸಿಕ್ಕಿದ್ದು, ವಾಹನ ತಡೆಯೋ ವಿಚಾರಕ್ಕೆ DG-IGP ಮತ್ತೊಂದು ಆದೇಶ ಹೊರಡಿಸಿದ್ದಾರೆ.

Karnataka dg igp praveen sood issues second order on Police random check of vehicles rbj
Author
Bengaluru, First Published Jul 16, 2022, 10:43 PM IST

ಬೆಂಗಳೂರು, (ಜುಲೈ.16): ದಾಖಲೆಗಳ ಪರಿಶೀಲನೆಗಾಗಿ ಸುಖಾಸುಮ್ಮನೆ ವಾಹನ ತಡೆಯದಂತೆ ಕರ್ನಾಟಕ DG-IGP ಪ್ರವೀಣ್ ಸೂದ್ ಮತ್ತೊಮ್ಮೆ ಆದೇಶ ಹೊರಡಿಸಿದ್ದಾರೆ.

ವಾಹನ ತಡೆಯೋ ವಿಚಾರಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿಗೆ ಆದೇಶ ಹೊರಡಿಸಿರುವ ಪ್ರವೀಣ್ ಸೂದ್ ಅವರು ಸುಖಾಸುಮ್ಮನೆ ವಾಹನಗಳನ್ನ ನಿಲ್ಲಿಸದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಎಸ್​​ಪಿ‌ಗಳಿಗೆ ಖಡಕ್ ಸೂಚನೆ ನೀಡಿದ್ಧಾರೆ. ಪದೇ ಪದೇ ಜನರಿಂದ ದೂರುಗಳು ಬರುತ್ತಿವೆ. ಕೇವಲ ಡಾಕ್ಯುಮೆಂಟ್ ಪರಿಶೀಲನೆಗೆ ಗಾಡಿ ನಿಲ್ಲಿಸಬೇಡಿ ಎಂದಿದ್ದಾರೆ.

Bengaluru News: ವಾಹನ ಸವಾರರನ್ನು ಅನಾವಶ್ಯಕ ತಡೆದು ನಿಲ್ಲಿಸದಂತೆ ಡಿಜಿ & ಐಜಿಪಿ ಸೂಚನೆ

ಡಾಕ್ಯುಮೆಂಟ್ ಪರಿಶೀಲನೆಗೆ ವಾಹನ ಸವಾರರನ್ನ ನಿಲ್ಲಿಸಬೇಡಿ, ಡ್ರಿಂಕ್ & ಡ್ರೈವ್ ಮಾಡೋರನ್ನ ಮಾತ್ರ ಪರಿಶೀಲನೆ ಮಾಡಿ, ಕಣ್ಣಿಗೆ ಕಾಣುವಂತ ಅಪರಾಧ ಕಂಡು ಬಂದರೆ ಮಾತ್ರ ವಾಹನ ನಿಲ್ಲಿಸಿ, ಪಟ್ಟಣ ಮತ್ತು ಹೆದ್ದಾರಿಗಳಲ್ಲಿ ಎಲ್ಲಾ ಕಡೆ ಈ ಸೂಚನೆ ಅನುಸರಿಸಬೇಕು. ಸೂಚನೆಯನ್ನು ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಬೆಂಗಳೂರು ಸೇರಿ ಎಲ್ಲಾ ಜಿಲ್ಲೆಗಳಿಗೂ ಈ ಆದೇಶ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಕಾನೂನು ಪಾಲಿಸುವವರ ಕಷ್ಟ ತಪ್ಪಿಸಲು ಸಮಯ ಇದು. ಕಣ್ಣಿಗೆ ಕಾಣಿಸೋ ಹಾಗೆ ಅಪರಾದ ಮಾಡಿದ್ರೆ ತಡೆದು ಪರಿಶೀಲಿಸಿ.
 ದುರಾದೃಷ್ಟಕ್ಕೆ ಈ ಆದೇಶ ನಿರ್ಭಯದಿಂದ ಧಿಕ್ಕರಿಸಲಾಗ್ತಿದೆ. ಪಟ್ಟಣ ಮತ್ತು ಹೆದ್ದಾರಿಗಳಲ್ಲಿ ಎಲ್ಲಾ ಕಡೆ ಸೂಚನೆ ಅನುಸರಿಸಬೇಕು.
 ಈ ಸೂಚನೆ ಕೆಳ ಹಂತದ ವರೆಗೆ ತಲುಪಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ಹಿಂದೆಯೂ ಸಹ ಪ್ರವೀಣ್ ಸೂದ್ ಅವರು ರಾಜ್ಯದಲ್ಲಿ ವಾಹನ ತಡೆಯೋ ವಿಚಾರಕ್ಕೆ ಬೆಂಗಳೂರು ಪೊಲೀಸರಿಗೆ ಆದೇಶಿಸಿದ್ದರು. ಇದೀಗ ರಾಜ್ಯದ ಎಲ್ಲಾ ಎಸ್‌ಪಿಗಳಿಗೆ ಸೂಚನೆ ಕೊಟ್ಟಿದ್ದಾರೆ.

Follow Us:
Download App:
  • android
  • ios