Asianet Suvarna News Asianet Suvarna News

Daily Horoscope: ಮಿಥುನಕ್ಕೆ ಅಪಘಾತ ಭೀತಿ, ತುಲಾ ರಾಶಿಗೆ ಪ್ರಲೋಭನೆ ತರುವುದು ಪಜೀತಿ

14 ಮೇ 2022, ಶನಿವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಈ ರಾಶಿಗೆ ಖರ್ಚು ಹೆಚ್ಚು

Dina Bhavishya of May 14th 2022 in Kannada SKR
Author
Bangalore, First Published May 14, 2022, 5:00 AM IST | Last Updated May 14, 2022, 7:04 AM IST

ಮೇಷ(Aries): ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚುತ್ತದೆ. ವ್ಯಾಪಾರಗಳಲ್ಲಿ ಕೊಂಚ ಲಾಭಕ್ಕೆ ತೃಪ್ತಿ ಪಡಬೇಕಾಗುವುದು. ಹಳೆಯ ಪಶ್ಚಾತ್ತಾಪಗಳನ್ನು ಬದಿಗೊತ್ತದೇ ಮುಂದೆ ಹೋಗುವುದು ಕಷ್ಟ. ಮೊದಲು ತಪ್ಪುಗಳಿಗೆ ಕಾಯಕಲ್ಪ ಮಾಡಿಕೊಳ್ಳಿ. ಅಶ್ವತ್ಥ ಕಟ್ಟೆಯಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ ಪ್ರಾರ್ಥಿಸಿ. 

ವೃಷಭ(Taurus): ಸಂದರ್ಭಗಳಿಗೆ ಅನುಗುಣವಾಗಿ ವರ್ತಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಯಾವುದಾದರೂ ವಿಷಯ ನಿಮ್ಮಿಂದ ಸಾಧ್ಯವಿಲ್ಲವೆಂದಾದರೆ ಅದನ್ನು ಬಾಯಿ ಬಿಟ್ಟು ಹೇಳಿ. ಕುಟುಂಬ ಸದಸ್ಯರ ವಿಶ್ವಾಸವನ್ನು ಗಳಿಸುವಿರಿ. ಶನಿ ಸ್ಮರಣೆ ಮಾಡಿ. 

ಮಿಥುನ(Gemini): ನೀತಿ ನಿಯಮಗಳನ್ನು ಯಾವ ವಿಷಯದಲ್ಲೂ ನಿರ್ಲಕ್ಷಿಸಬೇಡಿ. ವಾಹನ ಚಾಲಕರು ಎಚ್ಚರಿಕೆಯ ಚಾಲನೆ ಅಗತ್ಯ. ಅಪಾಯಕಾರಿ ಪ್ರಯತ್ನಗಳನ್ನು ತಪ್ಪಿಸಿ. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ . ಪ್ರೀತಿಯ ವಿಷಯಗಳಲ್ಲಿ ಆತುರ ಪಡಬೇಡಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಕಟಕ(Cancer): ಮನಸ್ಸಲ್ಲೇ ಮಂಡಿಗೆ ತಿನ್ನಬೇಡಿ. ನಿಮಗೆ ಬೇಕಾದುದನ್ನು ಕೇಳಿ ಪಡೆದುಕೊಳ್ಳಿ. ಪಡೆಯಲು ಬೇಕಾದ ಪರಿಶ್ರಮ ಹಾಕಿ. ಹಿರಿಯರು ನೀಡಿದ ಸಲಹೆಗಳನ್ನು ಪರಿಗಣಿಸಿ. ನಿಮ್ಮ ನೈತಿಕತೆಯನ್ನು ಕಾಪಾಡಿಕೊಳ್ಳಿ. ತಾಯಿಯ ಆಸೆ ಈಡೇರಿಸಿ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

ಸಿಂಹ(Leo): ನಿರುದ್ಯೋಗಿಗಳು ಸಂಪೂರ್ಣ ಸಿದ್ಧತೆಯೊಂದಿಗೆ ಮುಂದುವರಿಯಿರಿ. ಅನುಭವಿಗಳ ಸಲಹೆಗಳಿಗೆ ಗಮನ ಕೊಡಿ. ಕುಟುಂಬದ ಸದಸ್ಯರ ಬೆಂಬಲವಿರುತ್ತದೆ ಮತ್ತು ನಿಮ್ಮನ್ನು ಘನತೆಯಿಂದ ನಡೆಸಿಕೊಳ್ಳಲಾಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಕಪ್ಪು ವಸ್ತುಗಳನ್ನು ದಾನ ಮಾಡಿ. 

ಆದಾಯ ಹೆಚ್ಚಿಸುವ ಏಕಮುಖಿ ರುದಾಕ್ಷಿ, ಈ ರಾಶಿಗೆ ಧಾರಣೆಯ ವಿಶೇಷ ಫಲ

ಕನ್ಯಾ(Virgo): ಗಂಟೆಗಟ್ಟಲೆ ಕೆಲಸ  ಮಾಡುತ್ತಾ ಕೂರುವ ಬದಲು ಸ್ಮಾರ್ಟ್ ಆಗಿ ಯೋಚಿಸಿ ಮಾಡಿದರೆ ಸಮಯ ಉಳಿಯುತ್ತದೆ. ಅದನ್ನು ಬೇರೆ ಕೆಲಸಗಳಿಗೆ ಉಪಯೋಗಿಸಬಹುದು. ಈ ಬಗ್ಗೆ ಗಮನ ಹರಿಸಿ. ದಾಂಪತ್ಯದಲ್ಲಿ ಕೊರಗು ಹೆಚ್ಚುವುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ಕಿರಿಕಿರಿ ಇರಲಿದೆ. ಭಜರಂಗ ಬಾಣ ಹೇಳಿ. 

ತುಲಾ(Libra): ಯಾವುದಾದರೂ ಪ್ರಲೋಭನೆಗೆ ಒಳಗಾಗುವ ಸಂಭವವಿದೆ. ಇದರಿಂದ ಒಳಿತಾಗುವುದಿಲ್ಲ. ಈ ಬಗ್ಗೆ ಎಚ್ಚರ ವಹಿಸಿ. ಅಪರಿಚಿತರಿಂದ ದೂರವಿರಿ ಮತ್ತು ವಿನಮ್ರತೆ, ಸಭ್ಯತೆ ಕಾಪಾಡಿಕೊಳ್ಳಿ. ವಾತಾವರಣ ಸಂಬಂಧಿ ಅನಾರೋಗ್ಯಗಳು ಕಾಡುವುವು. ಶನಿ ಬೀಜ ಮಂತ್ರ ಹೇಳಿ. 

ವೃಶ್ಚಿಕ(Scorpio): ವ್ಯಾಪಾರದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿ. ಲಾಭ ಹೆಚ್ಚಿಸಲು ಏನು ಮಾಡಬಹುದೆಂಬ ಬಗ್ಗೆ ಯೋಚನೆ ಹರಿಸಿ.  ಜಂಕ್ ಫುಡ್ ಅನ್ನು ತಪ್ಪಿಸಿ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ವಿಳಂಬ ಧೋರಣೆಯು ಇತರರಿಗೆ ಸಮಸ್ಯೆಯಾಗಿರಬಹುದು. ಶನಿ ಗಾಯತ್ರಿ ಮಂತ್ರ ಹೇಳಿಕೊಳ್ಳಿ. 

ಧನುಸ್ಸು(Sagittarius): ತಾಳ್ಮೆ ಕಳೆದುಕೊಳ್ಳಬೇಡಿ. ಆರೋಗ್ಯಕ್ಕಾಗಿ ಉತ್ತಮ ಆಹಾರಕ್ರಮಕ್ಕೆ ಬದಲಾಗಬೇಕು. ದೂರದೃಷ್ಟಿಯಿಂದ ಹೊಸ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಕಲಿಕೆಗಳು ಫಲಪ್ರದವಾಗಲಿವೆ. ಮಕ್ಕಳಿಂದ ಸಂತಸ ಹೆಚ್ಚಲಿದೆ. ಹಣಕಾಸಿನ ನಿರ್ವಹಣೆ ಬಗ್ಗೆ ಎಚ್ಚರಿಕೆ ವಹಿಸಿ. ಎಳ್ಳು ದಾನ ಮಾಡಿ. 

ಶುಕ್ರ ಗೋಚಾರದಿಂದ ಈ ರಾಶಿಯವರಿಗೆ ಶುಭವೋ ಶುಭ..

ಮಕರ(Capricorn): ದೂರದೃಷ್ಟಿ ಹೆಚ್ಚಾಗಲಿದೆ. ಕೆಲಸವು ಅತ್ಯುತ್ತಮವಾಗಿರುತ್ತದೆ. ಯಶಸ್ಸಿನ ಶೇಕಡಾವಾರು ಹೆಚ್ಚಾಗಿರುತ್ತದೆ. ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಇನ್ಯಾರೋ ಬೇಕಾಬಿಟ್ಟಿ ಖರ್ಚು ಮಾಡುವುದು ನೋಡಿ ಪ್ರಲೋಭನೆಗೊಳಗಾಗಿ ವೃಥಾ ಧನವ್ಯಯ ಮಾಡಬೇಡಿ. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ಕುಂಭ(Aquarius): ಪೋಷಕರ ಕೆಲಸದಲ್ಲಿ ಆಸಕ್ತಿ ವಹಿಸುವಿರಿ. ಸಂಬಂಧಗಳು ಸುಧಾರಿಸುತ್ತವೆ. ಆತ್ಮೀಯರಿಗೆ ಸಮಯ ಕೊಡುವಿರಿ. ಕೌಶಲ್ಯಗಳು ಅವಕಾಶ ಗಿಟ್ಟಿಸುತ್ತವೆ. ಮನೆಯ ಸಣ್ಣಪುಟ್ಟ ಸಮಸ್ಯೆಗಳನ್ನು ಕಡೆಗಣಿಸಿದರೆ ಮಾನಸಿಕವಾಗಿ ನೆಮ್ಮದಿ. ಶನಿ ದೇವಾಲಯಕ್ಕೆ ಭೇಟಿ ನೀಡಿ. 

ಮೀನ(Pisces): ಕೆಲಸದ ವೇಗವು ನಿರೀಕ್ಷೆಗಿಂತ ಉತ್ತಮವಾಗಿರುತ್ತದೆ. ನಂಬಿಕೆಯಿಂದ ಮುನ್ನಡೆಯುವಿರಿ. ಪ್ರಯಾಣದ ಸಾಧ್ಯತೆ ಇರುತ್ತದೆ. ಉತ್ತಮವಾಗಿ ಕಾರ್ಯ ನಿರ್ವಹಿಸುವಿರಿ. ಗಂಭೀರ ವಿಷಯಗಳಲ್ಲಿ ಆಸಕ್ತಿ ಇರುತ್ತದೆ. ಕೆಲಸದ ವಿಷಯದಲ್ಲಿ ಕಿರಿಕಿರಿ ಹೆಚ್ಚಬಹುದು. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 
 

Latest Videos
Follow Us:
Download App:
  • android
  • ios