Asianet Suvarna News Asianet Suvarna News

Daily Horoscope: ಹನುಮ ಜಯಂತಿಯ ಈ ದಿನ ಯಾರಿಗೆಲ್ಲ ಇರಲಿದೆ ಭಜರಂಗಿಯ ಕೃಪೆ?

16 ಏಪ್ರಿಲ್ 2022, ಶನಿವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮಾಡಿದ್ದುಣ್ಣೋ ಮಹರಾಯ ಎಂಬ ಸ್ಥಿತಿ ಈ ರಾಶಿಯದ್ದು

Daily horoscope of April 16th 2022 in Kannada SKR
Author
Bangalore, First Published Apr 16, 2022, 5:00 AM IST | Last Updated Apr 16, 2022, 7:20 AM IST

ಮೇಷ(Aries): ವಿಷಯವನ್ನು ವೈಭವೀಕರಿಸದೇ ಇದ್ದ ಹಾಗೆ ನೋಡಲು ಪ್ರಯತ್ನಿಸಿ, ಆಗ ದಾಂಪತ್ಯ ಚೆನ್ನಾಗಿರಲಿದೆ. ನಿರೀಕ್ಷಿಸದ ಲಾಭಗಳು ಹುಡುಕಿಕೊಂಡು ಬರಲಿವೆ. ಮಕ್ಕಳ ದೆಸೆಯಿಂದ ಕೊಂಚ ಇರಿಸುಮುರಿಸಾಗುವ ಸಾಧ್ಯತೆ ಇದೆ. ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ.

ವೃಷಭ(Taurus): ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಖರ್ಚಿನ ಕಡೆಗೆ ಗಮನ ಇರಲಿ. ದೂರ ಪ್ರಯಾಣದ ಸಾಧ್ಯತೆ ಇದ್ದು, ವಾಹನದಲ್ಲಿ ಎಚ್ಚರಿಕೆ ವಹಿಸಿ. ನಿದ್ರಾಹೀನತೆ ಕಾಡಬಹುದು. ದೈಹಿಕ ಚಟುವಟಿಕೆ ಹೆಚ್ಚಿಸಿ. ಭಜರಂಗ ಬಾಣ ಪಠಿಸಿ.

ಮಿಥುನ(Gemini): ಬಹಳ ವರ್ಷಗಳಿಂದ ಯಾವುದೋ ಯೋಜನೆಯಲ್ಲಿ ಸಿಲುಕಿಕೊಂಡ ಹಣ ಕೈ ಸೇರುವುದು. ಯಾವುದೋ ವಿಚಾರಕ್ಕೆ ಅನವಶ್ಯಕ ಸಮಯ ವ್ಯರ್ಥ ಮಾಡುತ್ತಿದ್ದೀರಿ. ಹಣೆಬರಹದಂತೆ ಆಗುವುದು ಎಂದುಕೊಂಡು ಒಂದು ನಿರ್ಧಾರ ತೆಗೆದುಕೊಳ್ಳಿ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

ಕಟಕ(Cancer): ವಾಹನಗಳು ದುರಸ್ತಿಗೆ ಬರಬಹುದು. ಮನೆಯ ಕೆಲ ವಸ್ತುಗಳು ರಿಪೇರಿಗೆ ಬಂದು ತಲೆನೋವಾಗಬಹುದು. ಇದರಿಂದ ಕೆಲಸಕಾರ್ಯಗಳು ವಿಳಂಬವಾಗಲಿವೆ. ಜಂಭದ ಮಾತುಗಳಿಗೆ ಬೆಲೆ ತೆರಬೇಕಾಗುತ್ತದೆ. ನಿಮ್ಮ ಮೇಲೆ ಶತ್ರುಗಳು ಕತ್ತಿ ಮಸೆಯಬಹುದು. ಶನಿ ಸ್ಮರಣೆ ಮಾಡಿ. 

ಸಿಂಹ(Leo): ನಿಮ್ಮ ಹಳೆಯ ಶ್ರಮದ ಪ್ರತಿಫಲ ಈಗ ಸಿಗಲಿದೆ. ಶಿಕ್ಷಣದ ಮಹತ್ವ ಅರಿವಾಗುವುದು. ಗೃಹನಿರ್ಮಾಣ ಕಾರ್ಯಭಾರಗಳು ಚುರುಕು ಪಡೆಯುವುವು. ಸಂಗಾತಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಲಿದೆ. ಮಕ್ಕಳೊಂದಿಗೆ ಸಮಯ ಕಳೆಯುವಿರಿ. ಅವಿವಾಹಿತರಿಗೆ ಕಂಕಣಬಲವಿದೆ. ಆಂಜನೇಯನಿಗೆ ವೀಳ್ಯದ ಹಾರ ಅರ್ಪಿಸಿ.

Hanuman Jayanti 2022: ನಿಮ್ಮ ನೆಂಟರಿಷ್ಟರಿಗೆ ಹೀಗೆ ಶುಭಾಶಯ ಹೇಳಿ..

ಕನ್ಯಾ(Virgo): ಅವಿವಾಹಿತರಿಗೆ ಕಂಕಣ ಬಲವಿದೆ. ನಿಮ್ಮ ಕನಸಿನ ಸಂಗಾತಿ ವಾಸ್ತವದಲ್ಲೂ ಹಾಗೇ ಇರಲು ಸಾಧ್ಯವಿಲ್ಲ ಎಂದರಿತು ಕೆಲವು ಹೊಂದಾಣಿಕೆ ಮಾಡಿಕೊಂಡರೆ ಒಳಿತಾಗಲಿದೆ. ಕುಟುಂಬದೊಂದಿಗೆ ಪ್ರವಾಸ ತೆರಳಲಿರುವಿರಿ. ಮಕ್ಕಳ ಮನೋವಿಕಾಸದ ಕಡೆ ಗಮನ ವಹಿಸಿ. ರಾಮಧ್ಯಾನ ಮಾಡಿ. 

ತುಲಾ(Libra): ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ವಹಿಸುವಿರಿ. ಇಚ್ಛಾಶಕ್ತಿಯನ್ನು ಇಟ್ಟುಕೊಂಡು ನಡೆದರೆ ಖಂಡಿತ ನೀವು ಅಂದುಕೊಂಡದ್ದು ಸಾಧ್ಯವಾಗಲಿದೆ. ಆದಾಯ ನಷ್ಟಕ್ಕೆ ಚಿಂತೆ ಮಾಡುತ್ತಾ ಕೂರುವುದು ಬೇಡ. ಮುಂದೆ ಲಾಭಗಳಿವೆ. ಅಶ್ವತ್ಥ ಎಲೆಯಲ್ಲಿ ರಾಮ ನಾಮ ಬರೆದು ಆಂಜನೇಯನಿಗೆ ಅರ್ಪಿಸಿ. 

ವೃಶ್ಚಿಕ(Scorpio): ಶಿಸ್ತುಬದ್ಧ ಸಮಯ ಪಾಲನೆ ಮಾಡದಿದ್ದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ. ಆಗಬೇಕಾದ ಕೆಲಸಗಳಿಗೆ ಮೀನಾಮೇಷ ಎಣಿಸಬೇಡಿ. ಬೇಗ ನಿರ್ಧಾರ ತೆಗೆದುಕೊಳ್ಳಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಮಕ್ಕಳ ವಿಚಾರಕ್ಕೆ ನೋವಾಗಬಹುದು. ಕೆಂಪು ಹೂಗಳನ್ನು ಹನುಮನಿಗೆ ಅರ್ಪಿಸಿ.

ಶನಿವಾರ ಬಂದ Hanuman Jayanti; ಇಂದು ಹೀಗೆ ಮಾಡಿ ಶನಿ, ರಾಹು ಕಾಟದಿಂದ ತಪ್ಪಿಸಿಕೊಳ್ಳಿ

ಧನುಸ್ಸು(Sagittarius): ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯಗಳು ಸಲೀಸಾಗಿ ಪೂರ್ಣಗೊಳ್ಳಲಿವೆ. ಮನರಂಜನೆಗಾಗಿ ವ್ಯಯಿಸುವಿರಿ. ಆರೋಗ್ಯದ ಕೆಲವು ಸಮಸ್ಯೆಗಳು ಆತಂಕ ಹೆಚ್ಚಿಸುತ್ತವೆ. ಸಂಗಾತಿಯ ಸಹಕಾರ ಇರುತ್ತದೆ. ಬೇಸನ್ ಲಡ್ಡುಗಳನ್ನು ಹನುಮನಿಗೆ ನೈವೇದ್ಯ ಮಾಡಿ. 

ಮಕರ(Capricorn): ಶತ್ರುಗಳು ನಿಮ್ಮ ಮೇಲೆ ಮುಗಿಬೀಳುವ ಸಾಧ್ಯತೆ ಇದೆ. ಸಣ್ಣ ಸಣ್ಣ ಖರ್ಚುಗಳನ್ನು ಮಾಡುವುದಕ್ಕೆ ಹೆದರುವ ನೀವು ದೊಡ್ಡ ಪ್ರಮಾಣದ ಖರ್ಚು ಮಾಡುವ ಪ್ರಮೇಯ ಬರುತ್ತದೆ. ಮನಸ್ಸಿನ ನೋವನ್ನು ಮತ್ತೊಬ್ಬರೊಂದಿಗೆ ಹೇಳಿಕೊಳ್ಳಿರಿ. ನಯವಂಚಕರ ಬಗ್ಗೆ ಎಚ್ಚರ ಇರಲಿ. ಮಂಗಗಳಿಗೆ ಆಹಾರ ನೀಡಿ. 

ಕುಂಭ(Aquarius): ಆತುರದ ನಿರ್ಧಾರವೊಂದರಿಂದ ದುಃಖ ಅನುಭವಿಸುವಿರಿ.  ನನಗೇ ಗೊತ್ತು, ನಾನೇ ಎಲ್ಲ, ಎಲ್ಲರೂ ನನ್ನನ್ನು ಗೌರವಿಸಬೇಕು ಎಂಬ ಹುಂಬತನ ಬಿಡಿ. ಇಲ್ಲದಿದ್ದಲ್ಲಿ ಹೆಚ್ಚು ವಾರತ್ವ ಕಟ್ಟಿಕೊಳ್ಳಲು ಸಿದ್ಧರಾಗಿ. ಇತರರ ಬಗ್ಗೆ ಸಹಾನುಭೂತಿ ಬೆಳೆಸಿಕೊಳ್ಳಿ. ಶ್ರೀರಾಮ ದೇವಾಲಯಕ್ಕೆ ಭೇಟಿ ನೀಡಿ. 

ಮೀನ(Pisces): ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು. ನಷ್ಟಭೀತಿಯಿಂದ ಆತಂಕ. ಕುಟುಂಬದಲ್ಲಿ ಸಂತಸ. ನಿಮ್ಮ ಬಹುದಿನಗಳ ನಂಬಿಕೆಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಮನಸ್ಸು ಆಧ್ಯಾತ್ಮದತ್ತ ವಾಲುವ ಸಾಧ್ಯತೆ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

Latest Videos
Follow Us:
Download App:
  • android
  • ios