ಈ ರಾಶಿಯವರು ಎಚ್ಚರದಿಂದ ಇರುವುದು ಒಳಿತು
26 ಮಾರ್ಚ್ 2020ರ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಒಳಿತು? ಹೀಗಿದೆ ಇಂದಿನ ಭವಿಷ್ಯ
ಮೇಷ: ನೆರವು ಕೇಳಿ ಬಂದವರಿಗೆ ನೆರವು ನೀಡುವಿರಿ. ಸಂತೋಷವಾಗಿ ಇರುವುದಕ್ಕಿಂತ ಬೇರೆ ಭಾಗ್ಯವಿಲ್ಲ. ದೇವರ ಮೇಲೆ ನಂಬಿಕೆ ಇರಲಿ.
ವೃಷಭ: ಆರೋಗ್ಯವೇ ಭಾಗ್ಯ. ಎಲ್ಲರೊಂದಿಗೂ ಆತ್ಮೀಯವಾಗಿ ಇರಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ. ಅತಿ ಆಸೆ ಬೇಡ.
ಮಿಥುನ: ಕೆಟ್ಟದ್ದು ಕಂಡರೂ ಕಾಣದಂತೆ ಇದ್ದು ಬಿಡಿ. ನಿಮ್ಮ ಮೇಲೆ ಮನೆಯವರು ಇಟ್ಟುಕೊಂಡಿರುವ ನಂಬಿಕೆಗೆ ದ್ರೋಹ ಮಾಡಿದಿರಿ.
ಕಟಕ : ಚರ್ಮದ ಕಾಯಿಲೆ, ಶಾರೀರಿಕ ನೋವು, ತುಳಸಿದಳ ಸೇವಿಸಿ
ಇಂಥಾ ಕಷ್ಟದ ಟೈಮ್ನಲ್ಲೂ ಅದೃಷ್ಟವಿರುವ ಐದು ರಾಶಿಗಳು
ಸಿಂಹ : ದುಸ್ವಪ್ನ, ರೋಗಭಯ, ಶಾರೀರಿಕ ಸಮಸ್ಯೆ, ಶನೇಶ್ವರನ ಆರಾಧನೆ ಮಾಡಿ
ಕನ್ಯಾ : ಗಂಡ ಹೆಂಡತಿಯಲ್ಲಿ ಮನಸ್ತಾಪ, ಅಶಾಂತಿ, ತೊಗರಿಕಾಳಿನ ದಾನ ಮಾಡಿ
ತುಲಾ : ಮನೆಯಲ್ಲಿ ಜಗಳ, ನೆರೆಯವರಿಂದ ಕಿರಕಿರಿ, ಗಣಗಹೋಮಮಾಡಿಸಿ
ವೃಶ್ಚಿಕ : ಶುಭದಿನ, ಸಾಡೇಸಾಥ್ ತೊಂದರೆ ಬಾಧಿಸಲಿದೆ, ಸುಂದರಕಾಂಡ ಪಾರಾಯಣ ಮಾಡಿ
ಕೊರೋನಾ ಮಹಾಮಾರಿ ಓಡಿಸಲು ಶೃಂಗೇರಿ ಶ್ರೀಗಳಿಂದ ದೇವಿ ಸ್ತೋತ್ರ
ಧನಸ್ಸು: ಮೊಬೈಲ್ನ ಒಳಗೇ ಹೋಗಿರುತ್ತೀರಿ. ಅದು ಅಷ್ಟೇನು ಸೂಕ್ತವಲ್ಲ. ಅದರಿಂದ ನಿಮ್ಮಲ್ಲಿನ ದೃಷ್ಠಿದೋಷಕ್ಕೆ ಹೆಚ್ಚಿನ ಹಾನಿಯಾಗಲಿದೆ.
ಮಕರ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಒಳ್ಳೆಯ ಅವಕಾಶಗಳಿವೆ. ಹೋರಾಟ ಫಲ ನೀಡಲಿದೆ. ಆಶಾಭಾವನೆ ಇರಲಿ. ಚಿಂತೆ ದೂರಾಗಲಿದೆ.
ಕುಂಭ: ನಾಡು-ನುಡಿಗಳ ಬಗ್ಗೆ ನಿಮ್ಮ ಕಾಳಜಿಯು ಅಮೋಘವಾದದ್ದು. ಅದರತ್ತ ನಿಮ್ಮ ನಡೆಯು ನಿಮ್ಮ ಜೀವನಕ್ಕೂ ಹೆಚ್ಚು ಸಹಕಾರಿಯಾಗಲಿದೆ.
ಮೀನ: ನೀವಂದುಕೊಂಡ ಕೆಲಸಗಳು ನಿರ್ವಿಘ್ನವಾಗಿ ನೆರವೇರಲಿವೆ. ಆದರೂ ಹೊರಗಿನ ತಿಂಡಿ ತಿನ್ನುವ ಕ್ರಮ ಅಷ್ಟೇನು ಒಳಿತಲ್ಲ. ಜೋಕೆ.