Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಧನಾಗಮನ, ಕೆಲಸಗಳೂ ಪೂರ್ಣಗೊಳ್ಳಲಿವೆ!

21 ಅಕ್ಟೋಬರ್ 2020 ಬುಧವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 21 October 2020 in kannada pod
Author
Bangalore, First Published Oct 21, 2020, 7:03 AM IST

ಮೇಷ: ಪಕ್ಕದ ಮನೆಯವರ ಕಷ್ಟಕ್ಕೆ ನೆರವಾಗುವಿರಿ. ಮಹಿಳೆಯರು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಶುಭ ಫಲ

ವೃಷಭ: ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ ಬೆಳೆಸಿಕೊಳ್ಳಿ. ನಿಮ್ಮಲ್ಲಿರುವ ಶಕ್ತಿಯ ಅರಿವು ನಿಮಗಾಗಲಿದೆ. ಮಕ್ಕಳಿಗೆ ಶುಭದಿನ.

ಮಿಥುನ: ನಿಮ್ಮ ನಡುವಿನ ಗೆಳೆಯರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಕೈಲಾದ ಸಹಾಯ ಮಾಡಿ. ಮತ್ತೊಬ್ಬರನ್ನು ಹಗುರವಾಗಿ ಕಾಣದಿರಿ.

ಕಟಕ: ಧನಾಗಮನವಾಗಲಿದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣವಾಗಲಿವೆ. ಅನಾವಶ್ಯಕ ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡಬೇಡಿ.

ಸಿಂಹ - ನಿಮ್ಮ ಬುದ್ಧಿ ನಿಮಗೇ ಕೈಕೊಡಲಿದೆ, ಗುರುಗಳ ಮಾರ್ಗದರ್ಶನ ಪಡೆಯಿರಿ, ಸಾಲದಿಂದ ದೂರವಿರಿ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ಕನ್ಯಾ - ಲಾಭ ಸಮೃದ್ಧಿ, ವೃತ್ತಿಯಲ್ಲಿ ಅನುಕೂಲ, ಸಮಾಧಾನ ಇರಲಿದೆ, ನಾರಾಯಣ ಸ್ಮರಣೆ ಮಾಡಿ

ತುಲಾ - ಹಣಕಾಸಿನಲ್ಲಿ ಎಚ್ಚರಿಕೆ ಇರಲಿ, ಕುಟುಂಬದೊಂದಿಗೆ ಕಲಹ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಕುಲದೇವತಾಪ್ರಾರ್ಥನೆ ಮಾಡಿ

ವೃಶ್ಚಿಕ - ದೇಹಸ್ಥಿತಿ ವ್ಯತ್ಯಾಸವಾಗಲಿದೆ, ಮಂಗಳಕಾರ್ಯಗಳ ಚಾಲನೆ, ಅನುಕೂಲದ ವಾತಾವರಣ, ಪಿತೃದೇವತೆಗಳ ಸ್ಮರಣೆ ಮಾಡಿ

ಕನ್ನಡ ನೆಲದ ಹಂಪಿಗೂ ಮತ್ತು ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ!

 

ಧನುಸ್ಸು - ದಾಂಪತ್ಯದಲ್ಲಿ ಕಲಹ, ಧರ್ಮಕಾರ್ಯಗಳಿಗೆ ಅಡ್ಡಿ, ವಿವೇಕ ಜಾಗೃತವಾಗಲಿದೆ, ದಕ್ಷಿಣಾಮೂರ್ತಿ ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಕೊಂಚ ಅಸಮಧಾನ ಇರಲಿದೆ,. ಸಂಜೀವಿನಿ ಯಂತ್ರ ಧಾರಣೆ ಮಾಡಿ

ಕುಂಭ - ದಾಂಪತ್ಯದಲ್ಲಿ ಏರುಪೇರು, ಮಕ್ಕಳಿಂದ ಅಹಿತಕರ ಮಾತು, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ

ಮೀನ - ಪ್ರಯಾಣದಲ್ಲಿ ತೊಂದರೆ, ಕೃಷಿಕರಿಗೆ ಕೊಂಚ ಆತಂಕ, ಅಸಮಧಾನವೂ ಇರಲಿದೆ, ಈಶ್ವರ ಪ್ರಾರ್ಥನೆ ಮಾಡಿ

Follow Us:
Download App:
  • android
  • ios