09 ಸಪ್ಟೆಂಬರ್ 2020 ಬುಧವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ - ಮಾನಸಿಕ ಅತಂತ್ರತೆ ಉಂಟಾಗಲಿದೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ತ್ರೀಯರ ಸಹಕಾರ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಕುಲದೇವತಾ ಪ್ರಾರ್ಥನೆ ಮಾಡಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೃಷಭ ದೇಹಬಲವಿರಲಿದೆ, ಮನಸ್ಸು ಚಂಚಲವಾಗಲಿದೆ, ಭಯದ ವಾತಾವರಣ, ಅದೃಷ್ಟ ಹೀನತೆ, ಗುರು ಪ್ರಾರ್ಥನೆ ಮಾಡಿ

ಮಿಥುನ - ಸ್ವಲ್ಪ ಸಮಾಧಾನದಿಂದಿರಬೇಕು, ದಿನಚರಿ ಏರುಪೇರಾಗಲಿದೆ, ವಿಷ್ಣು ಪ್ರಾರ್ಥನೆ ಮಾಡಿ

ಕಟಕ - ಸ್ತ್ರೀಯರು ಎಚ್ಚರವಾಗಿರಬೇಕು, ಕೆಲಸದಲ್ಲಿ ಎಚ್ಚರಿಕೆ ಇರಲಿ, ಮನಸ್ಸಿಗೆ ಬೇಸರ, ದುರ್ಗಾ ಪ್ರಾರ್ಥನೆ ಮಾಡಿ

ಸಿಂಹ: ತಂದೆ ತಾಯಿಯ ಮಾತಿನಂತೆ ನಡೆದುಕೊಳ್ಳಿ. ಅತಿಯಾದ ಸಿಟ್ಟು ನಿಮ್ಮನ್ನೇ ಮೊದಲು ಸುಡುವುದು. ಪ್ರವಾಸ ಹೊರಡಲಿದ್ದೀರಿ

ಕನ್ಯಾ: ಆತ್ಮೀಯರು ಇಂದು ಇಡೀ ದಿನ ನಿಮ್ಮೊಂದಿಗೆ ಇರಲಿದ್ದಾರೆ. ಸಣ್ಣ ಸಣ್ಣ ವಿಚಾರಗಳಿಗೂ ತಲೆ ಕೆಡಿಸಿಕೊಂಡು ಕೂರುವುದು ಬೇಡ.

ತುಲಾ: ನಿಂದನೆಗಳು ಬರುವುದು ಸಹಜ. ಹಾಗೆಂದು ಅವುಗಳಿಗೆ ಹೆದರಿಕೊಂಡು ಕೂರುವುದು ಬೇಡ. ಬದುಕು ಬಂದ ಹಾಗೆ ಸ್ವೀಕಾರ ಮಾಡಿ

ವೃಶ್ಚಿಕ: ನಿಮ್ಮ ಉತ್ಸಾಹವೇ ಇಂದು ನಿಮ್ಮನ್ನು ಹೊಸ ಅವಕಾಶದ ಬಳಿ ಕರೆದೊಯ್ಯಲಿದೆ. ಮತ್ತೊಬ್ಬರಿಗೆ ಕಿರಿಕಿರಿ ಮಾಡದಿರಿ.

ಧನುಸ್ಸು: ಅನಿರೀಕ್ಷಿತವಾಗಿ ಗೆಳೆಯರೊಂದಿಗೆ ಪ್ರವಾಸ ಹೊರಡಿಲಿದ್ದೀರಿ. ಕ್ಷುಲ್ಲಕ ಕಾರಣಗಳಿಗೆ ಚಿಂತೆ ಮಾಡುತ್ತಾ ಕೂರುವುದು ಬೇಡ. ಶುಭ ಫಲ.

ಮಕರ: ಕರ್ತವ್ಯದಲ್ಲಿ ಲೋಪ ಬರದಂತೆ ಎಚ್ಚರ ವಹಿಸಿ. ಪ್ರಶಂಸೆ ಬೇಕು ಎಂದರೆ ಕಠಿಣವಾದ ಪರಿಶ್ರಮ ಹಾಕಲೇಬೇಕು. ಧೈರ್ಯ ಇರಲಿ

ಕುಂಭ: ಖರ್ಚಿನ ಮೇಲೆ ಹಿಡಿತ ಇರಲಿ. ಎಲ್ಲರನ್ನೂ ಪ್ರೀತಿಯಿಂದ ಕಾಣುವಿರಿ. ನಿಮ್ಮದಲ್ಲದ ವಿಚಾರಗಳಿಗೆ ನೀವು ಚಿಂತೆ ಮಾಡದಿರಿ.

ಮೀನ: ಆರ್ಥಿಕ ಪ್ರಗತಿ. ಸಂಸಾರದಲ್ಲಿ ಸಂತೋಷ ಇರಲಿದೆ. ಇಡೀ ದಿನ ಸಂಭ್ರಮದಿಂದ ಕೂಡಿರಲಿದೆ. ಅಂದುಕೊಂಡಿದ್ದು ಆಗಲಿದೆ.