Asianet Suvarna News Asianet Suvarna News

ಹಣಕ್ಕಾಗಿ ಅಪಹರಣ ನಾಟಕವಾಡಿ ಹೆತ್ತವರನ್ನೇ ಬೆಚ್ಚಿ ಬೀಳಿಸಿದ ಬಾಲಕ..!

ತಿರುಪತಿ ಲಾಡ್ಜ್‌ವೊಂದರಿಂದ ವಿಡಿಯೋ ಮೆಸೆಜ್‌| 5 ಲಕ್ಷ ರು. ನೀಡುವಂತೆ ಬೇಡಿಕೆ| ಬಾಲಕನಿಂದ ಹೈಡ್ರಾಮಾ|ಬಾಲ​ಕನ್ನು ಸುರ​ಕ್ಷಿ​ತ​ವಾಗಿ ರಾಮ​ನ​ಗ​ರಕ್ಕೆ ಕರೆ​ತಂದು ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ಎದುರು ಹಾಜರು ಪಡಿ​ಸಿ​ದ ಪೊಲೀ​ಸರು| 

Young Boy Created Kidnap Drama to His Parents for Money grg
Author
Bengaluru, First Published Nov 9, 2020, 8:19 AM IST

ರಾಮ​ನ​ಗ​ರ/ಕನಕಪುರ(ನ.09): ಬಾಲಕನೊಬ್ಬ ಹೆತ್ತ​ವ​ರಿಂದಲೇ ಹಣ ಪೀಕಲು ಅಪಹರಣದ ನಾಟಕವಾಡಿ ಪೋಲಿಸರ ಕೈಗೆ ಸಿಕ್ಕಬಿದ್ದಿ​ರುವ ಘಟನೆ ರಾಮನಗರ ಕನಕಪುರ ನಗರದಲ್ಲಿ ನಡೆ​ದಿ​ದೆ. ನಗ​ರದ ಮೇಗಳ ಬೀದಿ ವಾಸಿಯೊಬ್ಬರ ಪುತ್ರ ಅಪ​ಹ​ರ​ಣದ ನಾಟ​ಕ​ವಾ​ಡಿ​ದ​ವನು. ಇದೀಗ ಆತ​ನನ್ನು ಪೊಲೀ​ಸರು ವಶಕ್ಕೆ ಪಡೆದು ವಿಚಾ​ರ​ಣೆಗೆ ಒಳಪಡಿ​ಸಿ​ದ್ದಾ​ರೆ. ತಮಿ​ಳು​ನಾಡು ಮೂಲದ ಬಟ್ಟೆ ವ್ಯಾಪಾರಿ, ನಗ​ರದ ಬೂದಿ​ಕೆರೆ ರಸ್ತೆಯಲ್ಲಿ ಅಂಗಡಿ ಇಟ್ಟಿ​ದ್ದಾರೆ. ಇವರ ಪುತ್ರ 10ನೇ ತರ​ಗ​ತಿ​ಯಲ್ಲಿ ವ್ಯಾಸಂಗ ಮಾಡು​ತ್ತಿ​ದ್ದನು.

ತಿರುಪತಿಗೆ ಪ್ರಯಾಣ:

ನ.6ರಂದು ಸಂಜೆ ಬಾಲಕ ಜೆರಾಕ್ಸ್‌ ಗಾಗಿ ಮನೆ​ಯಿಂದ ದ್ವಿಚಕ್ರ ವಾಹ​ನ​ದಲ್ಲಿ ಹೊರ​ಟ್ಟಿ​ದ್ದಾನೆ. ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾನೆ. ಬೆಂಗಳೂರಿನಿಂದ ತಿರು​ಪತಿ ಬಸ್‌ ಹಿಡಿದು ನ.7ರಂದು ತಿರು​ಪ​ತಿಗೆ ತೆರಳಿ ಲಾಡ್ಜ್‌ ವೊಂದ​ರಲ್ಲಿ ರೂಮ್‌ ಬಾಡಿಗೆ ಪಡೆದು ತಂಗಿ​ದ್ದಾನೆ.

ಮಗ ಮನೆಗೆ ಹಿಂದಿ​ರು​ಗ​ಲಿ​ಲ್ಲ​ವೆಂದು ಆತಂಕ​ಕೊಂಡ ಪೋಷ​ಕರು ಕನ​ಕ​ಪುರ ನಗರ ಪೊಲೀಸ್‌ ಠಾಣೆ​ಯಲ್ಲಿ ನ.7ರಂದು ಬೆಳಗ್ಗೆ ನಾಪತ್ತೆ ಪ್ರಕ​ರಣ ದಾಖ​ಲಿ​ಸಿ​ದ್ದಾರೆ. ಇದೇ ವೇಳೆಗೆ ಶೌಚ​ಗೃ​ಹ​ದಲ್ಲಿ ಬಾಲಕನನ ಕೈ, ಕಾಲು ಮತ್ತು ಬಾಯಿಗೆ ವೈರ್‌ ನಿಂದ ಕಟ್ಟಿ​ರುವ ಅರೆ ಬೆತ್ತ​ಲೆ​ ಸ್ಥಿತಿ​ಯಲ್ಲಿರುವ ವಿಡಿ​ಯೋ, ಫೋಟೋ​ಗಳು ಹಾಗೂ 5 ಲಕ್ಷ ರುಪಾಯಿ ನೀಡು​ವಂತೆ ಬೇಡಿಕೆ ಇಟ್ಟಿ​ರುವ ಸಂದೇಶ ಆತನ ಪಕ್ಕದ ಮನೆ ವ್ಯಕ್ತಿ ಮೊಬೈಲ್‌ಗೆ ಬಂದಿವೆ.

ಯುವತಿ ಕಿಡ್ನಾಪ್ ಮಾಡಲು ಬಂದ ಯುವಕ, ಪ್ಲಾನ್ ಫೇಲ್ ಆದಾಗ ಕೊಂದೇ ಬಿಟ್ಟ!

ಬಾಲಕನ ಪತ್ತೆಗೆ ವಿಶೇಷ ತಂಡ:

ಆ ವ್ಯಕ್ತಿ ಫೋಟೋ​ಗ​ಳನ್ನು ಪೋಷ​ಕ​ರಿಗೆ ತೋರಿ​ಸಿದ ನಂತರ ಪೊಲೀ​ಸರ ಗಮ​ನಕ್ಕೆ ತಂದಿ​ದ್ದಾರೆ. ಇದು ಮೇಲ್ನೋ​ಟಕ್ಕೆ ಬಾಲ​ಕ​ನನ್ನು ಅಪ​ಹಣ ಮಾಡಿ​ರುವ ಕೃತ್ಯ​ದಂತೆ ಕಂಡು ಬಂದಿತು. ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ಗಿರೀಶ್‌ ಅವರ ಮಾರ್ಗ​ಸೂ​ಚಿ​ಯಂತೆ ಅಪರ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ರಾಮ​ರಾ​ಜನ್‌ ಹಾಗೂ ವೃತ್ತ ನಿರೀ​ಕ್ಷಕ ಪ್ರಕಾಶ್‌ ಪ್ರಕ​ರ​ಣದ ಸಂಪೂರ್ಣ ಮಾಹಿತಿ ಕಲೆ ಹಾಕಿ​ದರು. ಆನಂತರ ಅಪರಾಧಿ​ಗಳ ಪತ್ತೆ​ಗಾಗಿ ಸಬ್‌ ಇನ್ಸ್‌ಪೆಕ್ಟರ್‌ ಅನಂತ​ರಾಮ್‌ ಹಾಗೂ ಲಕ್ಷ್ಮ​ಣ​ಗೌಡ ನೇತೃ​ತ್ವ​ದಲ್ಲಿ ವಿಶೇಷ ತಂಡ​ವನ್ನು ರಚಿ​ಸ​ಲಾ​ಯಿತು.

ಈ ತಂಡ ಮೊಬೈಲ್‌ಗೆ ಬಾಲ​ಕನ ಫೋಟೋ​ಗಳು ಎಲ್ಲಿಂದ ಬಂದಿವೆ ಎಂಬು​ದನ್ನು ಪರಿ​ಶೀ​ಲಿ​ಸಿ​ದಾಗ ತಿರು​ಪ​ತಿಯ ಸ್ಥಳ ಪತ್ತೆ​ಯಾ​ಗಿದೆ. ಇದರ ಜಾಡು ಹಿಡಿದು ಕಾರ್ಯಾ​ಚ​ರ​ಣೆಗೆ ಇಳಿದ ವಿಶೇಷ ತಂಡ ನೇರ​ವಾಗಿ ತಿರು​ಪ​ತಿಗೆ ತೆರ​ಳಿದೆ. ಮೊಬೈಲ್‌ ನೆಟ್‌ವರ್ಕ್ನ ಆಧಾ​ರದ ಮೇಲೆ ತಿರು​ಪ​ತಿಯ ಲಾಡ್ಜ್‌ ಮೇಲೆ ತಂಡ ದಾಳಿ ನಡೆ​ಸಿತು.

ಹಣಕ್ಕಾಗಿ ಕಿಡ್ನಾಪ್‌ ನಾಟಕ:

ಲಾಡ್ಜ್‌ ನ ಕೊಠ​ಡಿ​ಯಲ್ಲಿ ಬಾಲಕ ಒಬ್ಬನೇ ಇರು​ವು​ದನ್ನು ಕಂಡು ಪೊಲೀ​ಸರು ಒಂದು ಕ್ಷಣ ಆಶ್ಚ​ರ್ಯ​ಗೊಂಡಿ​ದ್ದಾರೆ. ಅಲ್ಲಿಯೇ ಆತ​ನನ್ನು ವಿಚಾ​ರಣೆ ನಡೆ​ಸಿ​ದಾಗ ಪೋಷ​ಕ​ರಿಂದ ಹಣ ಪಡೆ​ಯುವ ಸಲು​ವಾಗಿ ಸ್ನೇಹಿ​ತರ ಜತೆ​ಗೂ​ಡಿ ಅಪ​ಹ​ರ​ಣದ ನಾಟ​ಕ​ವಾ​ಡಿ​ದ್ದಾಗಿ ತಪ್ಪೋ​ಪ್ಪಿ​ಕೊಂಡಿ​ದ್ದಾ​ನೆ. ಇದು ಪೊಲೀ​ಸರನ್ನು ಮಾತ್ರ​ವ​ಲ್ಲದೆ ಅವನ ಪೋಷ​ಕರು ಬೆಚ್ಚಿ ಬೀಳು​ವಂತೆ ಮಾಡಿದೆ. ಪೊಲೀ​ಸರು ಬಾಲ​ಕನ್ನು ಸುರ​ಕ್ಷಿ​ತ​ವಾಗಿ ರಾಮ​ನ​ಗ​ರಕ್ಕೆ ಕರೆ​ತಂದು ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ಗಿರೀಶ್‌ ಅವರ ಎದುರು ಹಾಜ​ರು ಪಡಿ​ಸಿ​ದರು. ಆನಂತರ ಹೆಚ್ಚಿನ ವಿಚಾ​ರ​ಣೆ​ಗಾಗಿ ಕನ​ಕ​ಪುರ ನಗರ ಪೊಲೀಸ್‌ ಠಾಣೆಗೆ ಕರೆ​ದೊ​ಯ್ದಿ​ದ್ದಾ​ರೆ.
 

Follow Us:
Download App:
  • android
  • ios