Asianet Suvarna News Asianet Suvarna News

ಮೂವರು ಮಕ್ಕಳನ್ನು ನರ್ಮದಾಗೆ ಎಸೆದು ಪ್ರಿಯಕರನೊಂದಿಗೆ ಮಹಿಳೆ ಆತ್ಮಹತ್ಯೆ

Crime News: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಸಹಾಯದಿಂದ ತನ್ನ ಮೂವರು ಮಕ್ಕಳನ್ನು ನರ್ಮದಾ ಕಾಲುವೆಗೆ ಎಸೆದಿದ್ದು ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜಾರಾತ್‌ನಲ್ಲಿ ನಡೆದಿದೆ

Woman throws her three children in Narmada canal with help of lover later commits suicide in Gujarat mnj
Author
First Published Sep 2, 2022, 8:06 PM IST

ಗುಜರಾತ್‌ (ಸೆ. 02): ಮಹಿಳೆಯೊಬ್ಬಳು ತನ್ನ ಪ್ರಿಯಕರನ ಸಹಾಯದಿಂದ ತನ್ನ ಮೂವರು ಮಕ್ಕಳನ್ನು ನರ್ಮದಾ ಕಾಲುವೆಗೆ ಎಸೆದಿದ್ದು ಬಳಿಕ  ಪ್ರಿಯಕರನೊಂದಿಗೆ ಉತ್ತರ ಗುಜರಾತ್‌ನ ಥರಾಡ್ ತಾಲೂಕಿನ ಕಾಲುವೆಗೆ ಹಾರಿ ಬುಧವಾರ ರಾತ್ರಿ‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.  “ಗುರುವಾರ ಮುಂಜಾನೆ ನರ್ಮದಾ ಕಾಲುವೆಯ ಮೂಲಕ ಹಾದುಹೋದ ಜನರು ಗೋಡೆಯ ಮೇಲೆ ಮೊಬೈಲ್ ಫೋನ್ ಮತ್ತು ತೇಲುತ್ತಿರುವ ಎರಡು ಮಕ್ಕಳ ಶವಗಳನ್ನು ಗಮನಿಸಿದರು, ಮತ್ತು ಅವರು ಈ ಬಗ್ಗೆ ನನಗೆ ತಿಳಿಸಿದರು. ನಾನು ತಕ್ಷಣ ಪೊಲೀಸರಿಗೆ ತಿಳಿಸಿ ಅಗ್ನಿಶಾಮಕ ತಂಡ ಮತ್ತು ಗ್ರಾಮದ ಮುಳಗು ತಜ್ಞರನ್ನು ಕರೆಸುವಂತೆ ತಿಳಿಸಿದೆ" ಎಂದು ಚಂದಾರ್ ಗ್ರಾಮದ ಮಾಜಿ ಸರಪಂಚ್ ಮಾಫಾಜಿ ಪಟೇಲ್ ಹೇಳಿದ್ದಾರೆ. 

“ಒಂದು ಸೆಲ್ ಫೋನ್ ನಿರಂತರವಾಗಿ ರಿಂಗ್‌ ಆಗುತಿತ್ತು, ಮತ್ತು ನಾನು ಅದಕ್ಕೆ ಉತ್ತರಿಸಿದಾಗ, ಮುಕ್ತಾಬೆನ್ ಠಾಕೂರ್ ಮತ್ತು ಅವರ ಮೂವರು ಮಕ್ಕಳು ವಾವ್ ತಾಲೂಕಿನ ದೇಥಾಲಿ ಗ್ರಾಮದಿಂದ ನಾಪತ್ತೆಯಾಗಿದ್ದಾರೆ ಮತ್ತು ಅವರ ಕುಟುಂಬದ ಸದಸ್ಯರು ಅವರ ಇರುವಿಕೆಯ ಬಗ್ಗೆ ವಿಚಾರಿಸಲು ಕರೆ ಮಾಡುತ್ತಿದ್ದಾರೆ ಎಂದು ನಾನು ಕಂಡುಕೊಂಡೆ. ಮೀನುಗಾರರು ಕಾಲುವೆಯಿಂದ ಎರಡು ದೇಹಗಳನ್ನು ಹೊರತೆಗೆದಿದ್ದಾರೆ ಎಂದು ನಾನು ಕರೆ ಮಾಡಿದವರಿಗೆ ಹೇಳಿದೆ." ಎಂದು ಮಾಫಾಜಿ ಪಟೇಲ್ ತಿಳಿಸಿದ್ದಾರೆ. 

ಮುಕ್ತಾಬೆನ್ ಅವರ ಮಾವ ಸ್ಥಳಕ್ಕೆ ಬಂದಾಗ, ಮಹಿಳೆ ಈಶ್ವರಭಾಯ್ ಅವರನ್ನು ಮದುವೆಯಾಗಿದ್ದಾರೆ ಮತ್ತು ಅವರಿಗೆ ಮೂರು ಮಕ್ಕಳಿದ್ದಾರೆ, ಅವರಲ್ಲಿ ಒಂದು ಹೆಣ್ಣು ಮಗು ಎಂದು ಪಟೇಲ್‌ಗೆ ತಿಳಿಸಿದರು. ಕಳೆದ ಕೆಲವು ತಿಂಗಳಿಂದ ಈಶ್ವರಭಾಯಿ ಕೂಲಿ ಕೆಲಸ ಮಾಡುತ್ತಿದ್ದು, ಗಾಂಧಿನಗರಕ್ಕೆ ಸಮೀಪದಲ್ಲಿಯೇ ಕೆಲಸ ಮಾಡುತ್ತಿದ್ದರು. 15 ದಿನಗಳ ಹಿಂದೆ ಗ್ರಾಮಕ್ಕೆ ಹಿಂದಿರುಗುವ ಮೊದಲು, ಮುಕ್ತಾಬೆನ್ ಮತ್ತು ಮಕ್ಕಳು ಅವರೊಂದಿಗೆ ವಾಸಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ. 

ಸ್ನೇಹಿತನೊಂದಿಗೆ ಲಾಡ್ಜ್‌ಗೆ ಹೋಗಿದ್ದ ಮೈಸೂರಿನ ಬಿಸಿಎ ವಿದ್ಯಾರ್ಥಿನಿ ದುರಂತ ಅಂತ್ಯ

ಮುಕ್ತಾಬೆನ್ ಅವರು ಧರಾಧಾರ ಗ್ರಾಮದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಸರಪಂಚ್ ಹೇಳಿದ್ದಾರೆ."ಮುಕ್ತಾಬೆನ್ ತನ್ನ ಪ್ರೇಮಿ ಮತ್ತು ಮಕ್ಕಳೊಂದಿಗೆ ಪರಾರಿಯಾಗಿದ್ದಾಳೆ ಎಂದು ಠಾಕೂರ್ ಕುಟುಂಬ ಭಾವಿಸಿದೆ. ಅವರು ಸಹಬಾಳ್ವೆ ನಡೆಸಲು ಸಾಧ್ಯವಾಗದ ಕಾರಣ ಅವರು ಮೊದಲು ಮಕ್ಕಳನ್ನು ಕಾಲುವೆಗೆ ಎಸೆದಿರಬೇಕು ಮತ್ತು ನಂತರ ಅವರು ತಮ್ಮ ಜೀವನವನ್ನು ಕೊನೆಗೊಳಿಸಲು ಒಟ್ಟಿಗೆ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು. ಸಂಜೆಯ ವೇಳೆಗೆ ಮೂರನೇ ಮಗುವಿನ ಮೃತದೇಹವೂ ಪತ್ತೆಯಾಗಿದೆ. ಸದ್ಯ ಅಗ್ನಿಶಾಮಕ ದಳ ಮತ್ತು ಡೈವರ್‌ಗಳು ಮಹಿಳೆ ಹಾಗೂ ವ್ಯಕ್ತಿಯ ಹುಡುಕಾಟ ನಡೆಸುತ್ತಿದ್ದಾರೆ" ಎಂದು ಸರಪಂಚ ತಿಳಿಸಿದ್ದಾರೆ. 

Follow Us:
Download App:
  • android
  • ios