Asianet Suvarna News Asianet Suvarna News

ಫಿನಾಯಿಲ್‌ ಮಾರೋ ನೆಪದಲ್ಲಿ ಮನೆ​ಮಂದಿ ಮೂರ್ಛೆ​ಗೊ​ಳಿಸಿ ಲೂಟಿ!

ಫಿನಾಯಿಲ್‌ ಮಾರೋ ನೆಪದಲ್ಲಿ ಮನೆ​ಮಂದಿ ಮೂರ್ಛೆ​ಗೊ​ಳಿಸಿ ಲೂಟಿ| ವಿಜ​ಯ​ಪು​ರ​ದಲ್ಲಿ 2.20 ಲಕ್ಷ ಮೌಲ್ಯದ ಚಿನ್ನಾ​ಭ​ರಣ ಕಳವು

Vijayapura Thieves Looted The House After Making The People Unconscious
Author
Bangalore, First Published Aug 4, 2020, 3:45 PM IST

ವಿಜಯಪುರ(ಆ.04): ಇಲ್ಲಿನ ಶಾಂತಿ​ನ​ಗರ ಬಡಾ​ವ​ಣೆ​ಯ​ಲ್ಲೊಂದು ಬೆಚ್ಚಿ​ಬೀ​ಳಿ​ಸುವ ಕಳ್ಳ​ತನ ಪ್ರಕ​ರಣ ಬೆಳ​ಕಿಗೆ ಬಂದಿ​ದೆ. ಫಿನಾಯಿಲ್‌ ಮಾರುವ ನೆಪದಲ್ಲಿ ಮನೆಗೆ ಬಂದ ಯುವ​ತಿ​ಯೊ​ಬ್ಬಳು ಮನೆ​ಮಂದಿ​ಯ ಪ್ರಜ್ಞೆ ತಪ್ಪಿಸಿ .2.20 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಪರಾ​ರಿ​ಯಾ​ಗಿ​ದ್ದಾ​ಳೆ.

ಉಜ್ವಲಾ ಎಂಬ ಸಂಸ್ಥೆಯ ಮುಖ್ಯಸ್ಥ ವಾಸುದೇವ ತೋಳಬಂದಿ ಹಾಗೂ ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ಸುನಂದಾ ತೋಳಬಂದಿ ಮನೆಯಲ್ಲಿ ಭಾನು​ವಾರ ಈ ಘಟನೆ ನಡೆ​ದಿ​ದ್ದು, ತಡ​ವಾಗಿ ಬೆಳ​ಕಿಗೆ ಬಂದಿ​ದೆ.

ಫಿನಾ​ಯಿಲ್‌ ಕಂಪ​ನಿಯ ಸೇಲ್ಸ್‌​ಗ​ಲ್‌​ರ್‍ ಎಂದು ಹೇಳಿ​ಕೊಂಡು ಯುವತಿಯೊಬ್ಬಳು ಮನೆ ಬಳಿ ಬಂದಿದ್ದಾಳೆ. ಆಗ ತೋಳಬಂದಿ ದಂಪತಿ ಪುತ್ರ ಕೇಶವ ಅವರು ತಾವು ಈಗಾ​ಗಲೇ ಬೇರೆ ಕಂಪ​ನಿಯ ನೆಲ​ಶು​ಚಿ​ಗೊ​ಳಿ​ಸುವ ರಾಸಾ​ಯ​ನಿಕ ಬಳ​ಲು​ತ್ತಿ​ರು​ವು​ದಾಗಿ ತಿಳಿ​ಸಿ​ದ್ದಾ​ರೆ. ಈ ವೇಳೆ ಯುವತಿಯು ಫಿನಾಯಿಲ್‌ ವಾಸನೆ ವಿಶೇ​ಷ​ವಾ​ಗಿದೆ ಎಂದು ಹೇಳಿ ಬಾಟಲಿಯನ್ನು ಆತ​ನ

ಮೂಗಿಗೆ ಹಿಡಿದಿದ್ದಾಳೆ. ಆಗ ಕೇಶವ ಮೂರ್ಛೆ ಹೋಗಿ ಬಿದ್ದಿದ್ದಾರೆ. ಈ ಸಂದ​ರ್ಭ​ದಲ್ಲಿ ಮನೆ​ಯೊ​ಳಗೆ ನುಗ್ಗಿದ ಯುವತಿ ಆ ವೇಳೆ ನಿದ್ದೆ​ಯ​ಲ್ಲಿದ್ದ ಸುನಂದಾ, ವಾಸುದೇವ ಅವರಿಗೂ ಮಂಪರು ಬರುವ ಔಷಧ ಮೂಗಿಗೆ ಹಿಡಿದು ಮೂರ್ಛೆ ಹೋಗು​ವಂತೆ ಮಾಡಿ​ದ್ದಾ​ಳೆ. ಬಳಿಕ ತಿಜೋರಿಯಲ್ಲಿದ್ದ 40 ಗ್ರಾಂ. ಚಿನ್ನಾಭರಣ, 220 ಗ್ರಾಂ ಬೆಳ್ಳಿ ಆಭರಣ ಮತ್ತು ಎರಡು ಮೊಬೈಲ್‌ ದೋಚಿಕೊಂಡು ಪರಾರಿಯಾಗಿದ್ದಾಳೆ.

ಮನೆಯ ನಾಯಿಗೂ ಯುವ​ತಿ ವಿಷವಿಕ್ಕಿದ್ದು, ರಾತ್ರಿ ಮೃತಪಟ್ಟಿದೆ. ಯುವತಿ ಒಬ್ಬಳೇ ಮನೆ​ಯೊ​ಳಗೆ ನುಗ್ಗಿ ಈ ಕೃತ್ಯ ಎಸ​ಗಿ​ದಳೇ ಅಥವಾ ಆಕೆಯೊಂದಿಗೆ ಖದೀ​ಮರ ತಂಡವೇ ಇತ್ತೇ ಎಂಬುದು ತನಿ​ಖೆಯ ಬಳಿ​ಕ​ವಷ್ಟೇ ಗೊತ್ತಾ​ಗ​ಬೇ​ಕಿ​ದೆ.

Follow Us:
Download App:
  • android
  • ios