Asianet Suvarna News Asianet Suvarna News

ಬೆಂಗಳೂರು; ಅನ್‌ಲಾಕ್‌ ಆಗ್ತಿದ್ದಂತೆ ಸರಗಳ್ಳರ ಹಾವಳಿ, ಬೈಕ್‌ನಲ್ಲಿ ಬರ್ತಾರೆ ಹುಷಾರ್

* ಅನ್ ಲಾಕ್ ಆಗ್ತಿದ್ದಂತೆ ಸರಗಳ್ಳರ ಹಾವಳಿ
*  ಒಂದೇ ದಿನ ನಗರದ ಎರಡು ಕಡೆ ಸರಗಳ್ಳತನ.
* ಜಯನಗರ ಮತ್ತು ಕೊಡಿಗೆಹಳ್ಳಿಯಲ್ಲಿ ಸರ ಎಗರಿಸಿದ ಖದೀಮರು
* ಕೊಡಿಗೆಹಳ್ಳಿಯಲ್ಲಿ ವೃದ್ದೆಯ ಸರ ಕಸಿದು ಪರಾರಿಯಾದ ಕಳ್ಳರು

Unlock  2 Bike-Borne Men Snatch Gold Chain From Woman Bengaluru mah
Author
Bengaluru, First Published Jun 21, 2021, 10:11 PM IST

ಬೆಂಗಳೂರು(ಜೂ. 21)  ಅನ್ ಲಾಕ್ ಆಗ್ತಿದ್ದಂತೆ ಆಕ್ಟೀವ್ ಆದ ಸರಗಳ್ಳರು ರಾಜಧಾನಿಯಲ್ಲಿ ಕೈಚಳಕ ತೋರಿಸಲು ಆರಂಭಿಸಿದ್ದಾರೆ. ಒಂದೇ ದಿನ ನಗರದ ಎರಡು ಕಡೆ ಸರಗಳ್ಳತನವಾಗಿದೆ.  ಜಯನಗರ ಮತ್ತು ಕೊಡಿಗೆಹಳ್ಳಿಯಲ್ಲಿ ಸರ ಎಗರಿಸಿದ ಖದೀಮರು ಪರಾರಿಯಾಗಿದ್ದಾರೆ.

ಕೊಡಿಗೆಹಳ್ಳಿಯಲ್ಲಿ ವೃದ್ದೆಯ ಸರ ಅಪಹರಣ ಮಾಡಿದ್ದಾರೆ. ಬೆಳಗ್ಗೆ 8.30ರ ಸುಮಾರಿಗೆ ಲಕ್ಷ್ಮಿ  ಎಂಬುವರು ಓಡಾಡುತ್ತಿದ್ದಾಗ  ಬೈಕ್ ನಲ್ಲಿ ಬಂದಿದ್ದ ಇಬ್ಬರು ಸರಗಳ್ಳರು ಕೈಚಳಕ ತೋರಿಸಿದ್ದಾರೆ. ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಗಳ್ಳತನ ಕಾಡ್ತಿದ್ದ ಇರಾನಿ ಗ್ಯಾಂಗ್ ಸಿಕ್ಕಿಬಿತ್ತು

ಜಯನಗರ ಸಾಕಮ್ಮ ಗಾರ್ಡನ್ ಬಳಿಯಿಂದ ಮತ್ತೊಂದು ಪ್ರಕರಣ ವರದಿಯಾಗಿದೆ ರಾಜೇಶ್ವರಿ ಎಂಬುವರ 72 ಗ್ರಾಂ ಮಾಂಗಲ್ಯ ಸರ ಕದ್ದೊಯ್ದಿದ್ದಾರೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ಸರಗಳ್ಳರ ಕೃತ್ಯ ಇದಾಗಿದ್ದು ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆಯಾಗಿದೆ. 

Follow Us:
Download App:
  • android
  • ios