Asianet Suvarna News Asianet Suvarna News

ಸಾಲ ನೀಡದ್ದಕ್ಕೆ ಮಾಲೀಕನನ್ನೆ ಕೊಲೆ ಮಾಡಿದ ಚಾಲಕ

ಸಾಲ ನೀಡದ್ದಕ್ಕೆ ಮಾಲಿಕನನ್ನೇ ಕೊಲೆ ಮಾಡಿದ ಘಟನೆ  ಹಾಸನದಲ್ಲಿ ನಡೆದಿದೆ. ಟ್ರ್ಯಾಕ್ಟರ್ ಚಾಲಕ ಈ ಕೃತ್ಯ ಎಸಗಿದ್ದಾರೆ. 

Tractor Driver Murder Owner in Hassan
Author
Bengaluru, First Published Jan 14, 2020, 10:39 AM IST

ಹಾಸನ [ಜ.14]:  ಸಾಲ ನೀಡದ್ದಕ್ಕೆ ಚಾಲಕನೊಬ್ಬ ಮಾಲೀಕನನ್ನು ಕೊಲೆ ಮಾಡಿರುವ ಘಟನೆ ಅರಸೀಕೆರೆ ತಾಲೂಕಿನ ಜಾವಗಲ್‌ನಲ್ಲಿ  ನಡೆದಿದೆ. 

ವಡ್ಡರಹಟ್ಟಿಯ ನಾಗೇಶ್‌ ಸಿದ್ಧಾಬೋವಿ (47) ಕೊಲೆಯಾದ ಮಾಲೀಕ. ಟ್ರ್ಯಾಕ್ಟರ್‌ ಚಾಲಕ ರಂಗಸ್ವಾಮಿ ಮಾಲೀಕರಾದ ನಾಗೇಶ್‌ ಬಳಿ 2 ಸಾವಿರ ರು. ಸಾಲ ಕೇಳಿದ್ದನು. 

ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಮೊದಲು ಮೃತ ನಾಗೇಶ್‌, ರಂಗಸ್ವಾಮಿ ಮೇಲೆ ಕೈ ಮಾಡಿದ್ದಾನೆ. ಇದರಿಂದ ಕುಪಿತಗೊಂಡ ರಂಗಸ್ವಾಮಿ ಚೂಪಾದ ಹಾರೆಯಿಂದ ಮಾಲೀಕನ ಪಕ್ಕೆಲುಬಿಗೆ ಚುಚ್ಚಿದ್ದಾನೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತೀವ್ರವಾಗಿ ಗಾಯಗೊಂಡ ನಾಗೇಶ್‌, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅರಸೀಕೆರೆ ತಾಲೂಕು ಜಾವಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ರಂಗಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.

Follow Us:
Download App:
  • android
  • ios