ಬೀದರ್‌ ಜಿಲ್ಲೆಯ ಹುಮನಾಬಾದ ತಾಲೂಕಿನ ಧುಮ್ಮನಸೂರ ಗ್ರಾಮದ ನಿವಾಸಿ ಜಗನ್ನಾಥ ತುಕಾರಾಮ ಮೇತ್ರೆ ಅವರ ಹೊಲದ ದನಗಳ ಕೊಟ್ಟಿಗೆಯಲ್ಲಿದ್ದ 40 ಸಾವಿರ ಮೌಲ್ಯದ ಎತ್ತು ಹಾಗೂ 20 ಸಾವಿರ ಮೌಲ್ಯದ ಆಕಳು ಕಳ್ಳತನವಾಗಿತ್ತು. 

ಹುಮನಾಬಾದ(ಜು.06): ಜೂ.26ರಂದು ಧುಮ್ಮನಸೂರ ಗ್ರಾಮದ ಹೊಲದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಎತ್ತು ಹಾಗೂ ಆಕಳನ್ನು ಕಳವು ಮಾಡಿದ್ದ 3 ಆರೋಪಿಗಳನ್ನು ಹುಮನಾಬಾದ ಪೊಲೀಸ್‌ ಠಾಣೆ ಸಿಬ್ಬಂದಿ ಬಂಧಿಸಿ, ಕಳುವಾಗಿದ್ದ ಎತ್ತು, ಆಕಳನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.

Add Asianetnews Kannada as a Preferred SourcegooglePreferred

ಹುಮನಾಬಾದ ತಾಲೂಕಿನ ಧುಮ್ಮನಸೂರ ಗ್ರಾಮದ ನಿವಾಸಿ ಜಗನ್ನಾಥ ತುಕಾರಾಮ ಮೇತ್ರೆ ಅವರ ಹೊಲದ ದನಗಳ ಕೊಟ್ಟಿಗೆಯಲ್ಲಿದ್ದ 40 ಸಾವಿರ ಮೌಲ್ಯದ ಎತ್ತು ಹಾಗೂ 20 ಸಾವಿರ ಮೌಲ್ಯದ ಆಕಳು ಕಳ್ಳತನ ಮಾಡಲಾಗಿದೆ ಎಂದು ಹುಮನಾಬಾದ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. 

Kodagu crimes: ಪಾನಮತ್ತನಾಗಿ ಪತ್ನಿ, ಮಗುವಿನ ಮೇಲೆ ಹಲ್ಲೆ: ಬಂಧನ

ದೂರಿನ ಹಿನ್ನಲೆ ಎಸ್‌ಪಿ ಚೆನ್ನಬಸವಣ್ಣ ಲಂಗೋಟಿ, ಎಎಸ್‌ಪಿ ಮಹೇಶ ಮೇಘಣ್ಣನವರ್‌, ಹುಮನಾಬಾದ ಹಿರಿಯ ಸಹಾಯಕ ಪೊಲೀಸ್‌ ಅಧೀಕ್ಷಕ ಶಿವಾಂಶು ರಜಪುತ್‌, ಹುಮನಾಬಾದ ಸಿಪಿಐ ಶರಣಬಸಪ್ಪಾ ಕೋಡ್ಲಾ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗ ಪಿಎಸ್‌ಐ ಸುರೇಶ ಹಜ್ಜರ್ಗಿ, ಪಿಎಸ್‌ಐ ಮಂಜನಗೌಡ ಪಾಟೀಲ್‌ ಸಿಬ್ಬಂದಿಗಳಾದ ಭಗವಾನ ಬಿರಾದಾರ, ಬಾಬುರಾಯ ಕೋರೆ, ಮಹೇಶಕುಮಾರ, ಶೀಲಸಾಗರ, ಬಸವಂತರೆಡ್ಡಿ, ಬಾಲಾಜಿ ಪಿಚರಾಟೆ, ಸೂರ್ಯಕಾಂತ ದಾಂಡೆಕರ್‌ ತಂಡವು ಆರೋಪಿ ಪತ್ತೆ ಕಾರ್ಯ ಚುರುಕುಗೊಳಿಸಿ, 4 ದಿವಸಗಳಲ್ಲಿಯೇ ಪ್ರಕರಣ ಭೇಧಿಸಿ, 3 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.