* ಗದಗ ಜಿಲ್ಲೆಯ ಹುಲುಕೋಟಿ ಬಳಿ ಆತ್ಮಹತ್ಯೆ* ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ * ವಿಶ್ವನಾಥ ಸಾಸ್ವಿಹಳ್ಳಿ ಮಠ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಹೂವಿನಹಡಗಲಿ(ಮೇ.09): ಇಲ್ಲಿನ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ರೈಲ್ವೆಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

Add Asianetnews Kannada as a Preferred SourcegooglePreferred

ವಿಶ್ವನಾಥ ಸಾಸ್ವಿಹಳ್ಳಿ ಮಠ (59) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯಾಗಿದ್ದು, ಗದಗ ಜಿಲ್ಲೆಯ ಹುಲುಕೋಟಿ ಬಳಿ ಶುಕ್ರವಾರ ರಾತ್ರಿ 8.45ಕ್ಕೆ ಬರುವ ರೈಲ್ವೆಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

ದಾವಣಗೆರೆ : ಕೊರೋನಾ ಭಯದಲ್ಲಿ ರೈಲಿಗೆ ತಲೆಕೊಟ್ಟು ಪತ್ರಕರ್ತ ಆತ್ಮಹತ್ಯೆ

ಮೂಲತಃ ಗದಗ ಶಿರಹಟ್ಟಿ ತಾಲೂಕಿನ ಸಿಂಗ್ರಹಳ್ಳಿ ಗ್ರಾಮದವರಾಗಿದ್ದು, ಹೂವಿನಹಡಗಲಿಯಲ್ಲೇ ವಾಸವಾಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.