Asianet Suvarna News Asianet Suvarna News

ಅಪ್ರಾಪ್ತರಿಂದ ನಡಿತು ಕೋಲ್ಡ್‌ ಬ್ಲಡ್ ಮರ್ಡರ್‌: ಕೊಲೆ ಮಾಡಿದ ರೀತಿಗೆ ಪೊಲೀಸರೇ ಶಾಕ್

ಮೂವರು ಅಪ್ರಾಪ್ತ ಬಾಲಕರು ಸೈಕಲ್ ಚೈನ್‌ನಿಂದ ಕುತ್ತಿಗೆ ಬಿಗಿದು ತಮ್ಮ ಸ್ನೇಹಿತನನ್ನೇ ಭೀಕರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಶಿಯೋನಿ ಜಿಲ್ಲೆಯಿಂದ ವರದಿ ಆಗಿದೆ. ಬಾಲಕರಿಂದಲೇ ನಡೆದ ಈ ಭೀಕರ ಹತ್ಯೆ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ.

MP Three minors killed their friend by strangling him with cycle chain police are shocked by the way the murder was done akb
Author
First Published May 16, 2023, 7:33 PM IST

ಭೋಪಾಲ್: ಮೂವರು ಅಪ್ರಾಪ್ತ ಬಾಲಕರು ಸೈಕಲ್ ಚೈನ್‌ನಿಂದ ಕುತ್ತಿಗೆ ಬಿಗಿದು ತಮ್ಮ ಸ್ನೇಹಿತನನ್ನೇ ಭೀಕರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಶಿಯೋನಿ ಜಿಲ್ಲೆಯಿಂದ ವರದಿ ಆಗಿದೆ. ಬಾಲಕರಿಂದಲೇ ನಡೆದ ಈ ಭೀಕರ ಹತ್ಯೆ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ನಿರ್ಜನ ಪ್ರದೇಶಕ್ಕೆ 12 ವರ್ಷದ ಬಾಲಕನ ಕರೆದ ಮೂವರು ಅಪ್ರಾಪ್ತ ಬಾಲಕರು ಆತನ ಕತ್ತನ್ನು ಸೈಕಲ್ ಚೈನ್‌ನಿಂದ ಬಿಗಿದು ಕೊಲೆ ಮಾಡಿ ಬಳಿಕ ಆತನ ತಲೆಯನ್ನು ಕಲ್ಲಿನಿಂದ ಜಜ್ಜಿ, ಕುತ್ತಿಗೆಯನ್ನು ಚಾಕುವಿನಿಂದ ಭೀಕರವಾಗಿ ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ 11 ವರ್ಷದ ಬಾಲಕ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಹಳೆಯ ಸಣ್ಣ ವಿಚಾರವೊಂದಕ್ಕೆ ಮೂವರು ಅಪ್ರಾಪ್ತರ ಮಧ್ಯೆ ಗಲಾಟೆ ನಡೆದು ಈ ಕೊಲೆ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

ಮೂವರಲ್ಲಿ ಓರ್ವ 16 ವರ್ಷ ಪ್ರಾಯದವನಾದರೇ ಮತ್ತೊಬ್ಬ 14 ಹಾಗೂ ಇನ್ನೊಬ್ಬ 11 ವರ್ಷದ ಪ್ರಾಯದವನಾಗಿದ್ದಾನೆ.  ಶಿನೋಯ್ ಜಿಲ್ಲೆಯಿಂದ (Seoni district) 28 ಕಿಲೋ ಮೀಟರ್ ದೂರದಲ್ಲಿರುವ ಮಗರ್ಕಥಾ (Magarkatha) ಗ್ರಾಮದ  ನಿರ್ಜನ ಪ್ರದೇಶಕ್ಕೆ ಈ ಮೂವರು 12 ವರ್ಷದ ಅಪ್ರಾಪ್ತ ಬಾಲಕನನ್ನು ಕರೆಸಿಕೊಂಡಿದ್ದಾರೆ. ನಂತರ ಆತನನ್ನು ಸೈಕಲ್ ಚೈನ್‌ನಿಂದ ಬಿಗಿದಿದ್ದಾರೆ. ಈ ವೇಳೆ ಬಾಲಕ ಜೋರಾಗಿ ಅಳಲು ಶುರು ಮಾಡಿದ ವೇಳೆ ಈ ದುರುಳ ಬಾಲಕರು ಆತನ ತಲೆಗೆ ಕಲ್ಲು ಎತ್ತಿ ಹಾಕಿದ್ದಾರೆ. ನಂತರ ಆತನ ಕುತ್ತಿಗೆಯನ್ನು ಕುರಿ ಕತ್ತರಿಸಲು ಬಳಸುವಂತಹ ಹರಿತವಾದ ಚಾಕುವಿನಿಂದ ಸೀಳಿದ್ದಾರೆ ಎಂದು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರಸನ್ನ ಶರ್ಮಾ ಹೇಳಿದ್ದಾರೆ. 

Davanagere: ಆಸ್ತಿ ವಿಚಾರಕ್ಕೆ ಆಸ್ಪತ್ರೆಯಲ್ಲೇ ಅಣ್ಣನಿಗೆ ಚಾಕು ಹಾಕಿ ಕೊಲೆ ಮಾಡಿದ ತಮ್ಮ

ನಂತರ ಎಲ್ಲರೂ ಸೇರಿ ಶವವನ್ನು ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸಿದ್ದು, ಮನೆಯೊಂದರ ಸಮೀಪದ ಕಲ್ಲುಗಳ ರಾಶಿಗಳ ಮೇಲೆ ಎಸೆದು ಹೋಗಿದ್ದಾರೆ. ನಂತರ ಮಹಿಳೆಯೊಬ್ಬರು ಈ ಚೀಲದಿಂದ ರಕ್ತ ಸೋರುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಬಾಲಕನ ಶವ ನೋಡಿ ಶಾಕ್ ಆಗಿದ್ದರು. 

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳನ್ನು ಬಾಲಾಪರಾಧಿಗಳ ಗೃಹಕ್ಕೆ ಕಳುಹಿಸಿದೆ. ಈ ಮೂವರು ಅಪ್ರಾಪ್ತರು ವೃತ್ತಿಪರ ಕೊಲೆಗಡುಕರಂತೆ ಬಾಲಕನ ಕೊಲೆ ಮಾಡಿದ್ದು ನೋಡಿ ಪೊಲೀಸರೇ ಆಘಾತಕ್ಕೊಳಗಾಗಿದ್ದು, ತನಿಖೆ ನಡೆಯುತ್ತಿದೆ. 


ಕಾಂಗ್ರೆಸ್‌ ವಿಜಯೋತ್ಸವ ವೇಳೆ ಗಲಾಟೆ: ಬಿಜೆಪಿ ಕಾರ‍್ಯಕರ್ತನ ಕೊಲೆ!

Follow Us:
Download App:
  • android
  • ios