Asianet Suvarna News Asianet Suvarna News

ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಹತ್ಯೆ ಕೇಸ್‌: ಎಸ್‌ಡಿಪಿಐನ 15 ಅಪರಾಧಿಗಳಿಗೆ ಮರಣದಂಡನೆ

8 ಅಪರಾಧಿಗಳು ನೇರವಾಗಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಹಾಗೂ, ಉಳಿದ ವ್ಯಕ್ತಿಗಳು ಕ್ರಿಮಿನಲ್ ಪಿತೂರಿಯಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದ್ದಾರೆ.

kerala court sentences 15 convicts to death for murder of bjp leader ranjith sreenivasan ash
Author
First Published Jan 30, 2024, 1:50 PM IST

ತಿರುವನಂತಪುರಂ (ಜನವರಿ 30, 2024): 2021 ರ ಡಿಸೆಂಬರ್‌ನಲ್ಲಿ ಬಿಜೆಪಿ ಮುಖಂಡ ಮತ್ತು ವಕೀಲ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ನ್ಯಾಯಾಲಯವು 15 ಅಪರಾಧಿಗಳಿಗೆ ಮರಣದಂಡನೆ ವಿಧಿಸಿದೆ. ಮಾವೇಲಿಕರದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜನವರಿ 20 ರಂದು ನೀಡಿದ ತೀರ್ಪಿನಲ್ಲಿ ಎಸ್‌ಡಿಪಿಐಗೆ ಸಂಬಂಧಿಸಿದ 15  ಜನ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ ಎಂದು ತೀರ್ಪು ನೀಡಿದೆ. 

ಈ ಪೈಕಿ 8 ಅಪರಾಧಿಗಳು ನೇರವಾಗಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಹಾಗೂ, ಉಳಿದ ವ್ಯಕ್ತಿಗಳು ಕ್ರಿಮಿನಲ್ ಪಿತೂರಿಯಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದ್ದಾರೆ. ಶಿಕ್ಷೆಗೊಳಗಾದ ವ್ಯಕ್ತಿಗಳಲ್ಲಿ ನಿಜಾಮ್, ಅಜ್ಮಲ್, ಅನೂಪ್, ಎಂ.ಡಿ. ಅಸ್ಲಾಂ, ಸಲಾಂ, ಅಬ್ದುಲ್ ಕಲಾಂ, ಸಫರುದ್ದೀನ್, ಮುನ್ಶಾದ್, ಜಜೀಬ್, ನವಾಜ್, ಶೆಮೀರ್, ನಜೀರ್, ಜಾಕಿರ್ ಹುಸೇನ್, ಶಾಜಿ ಮತ್ತು ಶಮ್ನಾಜ್ ಸೇರಿದ್ದಾರೆ ಎಂದು ತಿಳಿದುಬಂದಿದೆ.

BREAKING: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಮತ್ತಷ್ಟು ಸಂಕಷ್ಟ: ಸೈಫರ್ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ

ಡಿಸೆಂಬರ್ 19, 2021 ರಂದು, ರಂಜಿತ್ ಶ್ರೀನಿವಾಸನ್ ರನ್ನು ಅಲಪ್ಪುಳದ ವೆಲ್ಲಕ್ಕಿನಾರ್ ಬಳಿಯ ನಿವಾಸದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ದಾಳಿಕೋರರು ರಂಜಿತ್ ತಾಯಿ, ಹೆಂಡತಿ ಮತ್ತು ಮಗಳ ಸಮ್ಮುಖದಲ್ಲಿ ಮನೆಗೆ ದಾಳಿ ಮಾಡಿದ್ದರು. ಅದೇ ವರ್ಷದ ಡಿಸೆಂಬರ್ 18 ರಂದು ಅಲಪ್ಪುಳದ ಮನ್ನಂಚೇರಿಯಲ್ಲಿ ಮಾರಣಾಂತಿಕ ಹಲ್ಲೆಗೊಳಗಾದ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಕೆಎಸ್ ಶಾನ್ ಹತ್ಯೆಗೆ ಪ್ರತೀಕಾರವಾಗಿ ಈ ದಾಳಿಯನ್ನು ಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.

ಅಲಪ್ಪುಝ ಡಿವೈಎಸ್ಪಿ ಎನ್.ಆರ್.ಜಯರಾಜ್ ಈ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಿ, 1,000 ಕ್ಕೂ ಹೆಚ್ಚು ದಾಖಲೆಗಳನ್ನು ಮತ್ತು 100 ಕ್ಕೂ ಹೆಚ್ಚು ಪ್ರಮುಖರನ್ನು ಸಾಕ್ಷ್ಯವಾಗಿ ಹಾಜರುಪಡಿಸಿ ಆರೋಪಪಟ್ಟಿ ಸಲ್ಲಿಸಿದರು. ಪುರಾವೆಗಳಲ್ಲಿ ಫಿಂಗರ್‌ಪ್ರಿಂಟ್‌, ವೈಜ್ಞಾನಿಕ ಸಂಶೋಧನೆ, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಗೂಗಲ್ ನಕ್ಷೆಗಳ ಸಹಾಯದಿಂದ ಸಿದ್ಧಪಡಿಸಲಾದ ಮಾರ್ಗ ನಕ್ಷೆಗಳು ಸೇರಿವೆ.

18 ವರ್ಷದೊಳಿಗಿನ ಹುಡುಗಿ ಮದುವೆಯಾಗಿದ್ದಕ್ಕೆ 20 ವರ್ಷ ಜೈಲು ಶಿಕ್ಷೆ

ಪ್ರಕರಣದ ಗಂಭೀರ ಸ್ವರೂಪದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ನ್ಯಾಯಾಲಯದ ಆವರಣದ ಸುತ್ತಲೂ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹೆಚ್ಚಿನ ಭದ್ರತೆಯಲ್ಲಿ ಆರೋಪಿಗಳನ್ನು ಸುರಕ್ಷಿತವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಾಸಿಕ್ಯೂಷನ್ ಪ್ರಕರಣದ ಅಸಾಧಾರಣ ಸ್ವರೂಪವನ್ನು ಒತ್ತಿಹೇಳಿತು, ಗರಿಷ್ಠ ಶಿಕ್ಷೆ ವಿಧಿಸಲು ನ್ಯಾಯಾಲಯವನ್ನು ಮನವಿ ಮಾಡಿಕೊಂಡಿತ್ತು. ಅದರಂತೆ, ಆರೋಪಿಗಳು ಈಗ ಅಪರಾಧಿಗಳಾಗಿದ್ದು, ಮರಣದಂಡನೆ ವಿಧಿಸಲಾಗಿದೆ. 

ರಂಜಿತ್ ಮೃತ ದೇಹವು ಸುಮಾರು 56 ಗಾಯಗಳನ್ನು ಹೊಂದಿದ್ದು, ಅವರ ಮುಖವನ್ನು ಗುರುತಿಸಲಾಗದಂತೆ ಮಾಡಲಾಗಿತ್ತು. ಈ ಪ್ರಕರಣ ಅಸಾಧಾರಣ ಅಪರೂಪ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯದಲ್ಲಿ ವಾದ ಮಂಡಿಸಿತು. ಪ್ರಕರಣದಲ್ಲಿ ಅತ್ಯಂತ ನಿಷ್ಪಕ್ಷಪಾತ ತನಿಖೆ ನಡೆಸಲಾಗಿದೆ. ಪೊಲೀಸರು ಎಲ್ಲಾ ಪುರಾವೆಗಳನ್ನು ಸಂಪೂರ್ಣವಾಗಿ ಸಂಗ್ರಹಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನ ಮೊಬೈಲ್ ಫೋನ್‌ನಲ್ಲಿ ಹಿಟ್ ಲಿಸ್ಟ್ ಪತ್ತೆಯಾಗಿದ್ದು, ಈ ಪೈಕಿ ರಂಜಿತ್ ಶ್ರೀನಿವಾಸನ್ ಮೊದಲ ಹೆಸರಿದೆ ಎಂದು ಪ್ರಾಸಿಕ್ಯೂಟರ್ ಪ್ರತಿಪಾದಿಸಿದ್ದರು.

ಕರೆಯದೇ ಇಲ್ಲಿ ಮದ್ವೆಗೆ ಹೋದ್ರೆ, ಜೈಲು ಶಿಕ್ಷೆ, ಮುಂದೇನು ಗತಿ?

Follow Us:
Download App:
  • android
  • ios