Asianet Suvarna News Asianet Suvarna News

34 ಜನರಿಗೆ ಒಟ್ಟು 72 ಲಕ್ಷ ಮೋಸ ಮಾಡಿದ್ದ ವ್ಯಕ್ತಿಗೆ ಕೋರ್ಟ್‌ ನೀಡ್ತು ಡಿಫರೆಂಟ್‌ ಶಿಕ್ಷೆ!

34 ಜನರಿಗೆ ಸೇರಿ ಆ ವ್ಯಕ್ತಿ ಒಟ್ಟು 72 ಲಕ್ಷ ರೂಪಾಯಿ ಮೋಸ ಮಾಡಿದ್ದ. ಆದರೆ, ಇದಕ್ಕೆ ಮಧ್ಯಪ್ರದೇಶದ ಸಾಗರ್‌ ಕೋರ್ಟ್‌ ತೀರಾ ಭಿನ್ನವಾದ ಶಿಕ್ಷೆಯನ್ನು ನೀಡಿದೆ.
 

in Madhya Pradesh Sagar 170 years in jail for cheating 72 lakhs for cheating 34 people san
Author
First Published Jun 29, 2023, 5:14 PM IST

ನವದೆಹಲಿ (ಜೂ.29): ಮಧ್ಯಪ್ರದೇಶದ ಸಾಗರದಲ್ಲಿ 34 ಮಂದಿಗೆ ವಂಚಿಸಿದ ಆರೋಪಿಗೆ ನ್ಯಾಯಾಲಯ ಒಂದಲ್ಲ ಎರಡಲ್ಲ ಬರೋಬ್ಬರಿ 170 ವರ್ಷ ಶಿಕ್ಷೆ ವಿಧಿಸಿದೆ. ಈ 34 ಜನರಿಗೆ ಸೇರಿ ಒಟ್ಟಾರೆ 72 ಲಕ್ಷ ರೂಪಾಯಿ ವಂಚಿಸಿ ಆರೋಪಿ ಪರಾರಿಯಾಗಿದ್ದ.ಈ ಎಲ್ಲಾ ಪ್ರಕರಣಗಳಲ್ಲಿ 5-5 ವರ್ಷಗಳ ಶಿಕ್ಷೆಯನ್ನು ನೀಡಿದ ನ್ಯಾಯಾಲಯವು, ಈ ಎಲ್ಲಾ ಶಿಕ್ಷೆಗಳು ಒಂದೊಂದಾಗಿ ಪ್ರಾರಂಭವಾಗುತ್ತವೆ. ಅಂದರೆ ಒಂದು ಪ್ರಕರಣದ ಶಿಕ್ಷೆ ಮುಗಿದ ನಂತರ ಇನ್ನೊಂದು ಪ್ರಕರಣದ ಶಿಕ್ಷೆ ಆರಂಭವಾಗುತ್ತದೆ. ಇನ್ನು ಆರೋಪಿಯಾಗಿರುವ ನಾಸಿರ್ ಮೊಹಮ್ಮದ್ ಅಲಿಯಾಸ್ ನಾಸಿರ್ ರಜಪೂತ್‌ಗೆ ದಂಡವನ್ನೂ ವಿಧಿಸಲಾಗಿದೆ. ಪ್ರತಿ ಸಂತ್ರಸ್ತರಿಗೆ 10-10 ಸಾವಿರ ರೂಪಾಯಿಯಂತೆ ಒಟ್ಟು 3.40 ಲಕ್ಷ ರೂಪಾಯಿ ನೀಡಬೇಕು ಎನ್ನಲಾಗಿದೆ. ಸರ್ಕಾರದ ಪರವಾಗಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಮಬಾಬು ರಾವತ್ ಅವರು ಪ್ರಕರಣದಲ್ಲಿ ವಾದ ಮಂಡಿಸಿದರು. ಕಂಟೋನ್ಮೆಂಟ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು ನಾಲ್ಕು ವರ್ಷಗಳ ಹಿಂದಿನ ವಂಚನೆ ಪ್ರಕರಣದ ಕುರಿತು ತೀರ್ಪು ನೀಡಿದ 8 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಬ್ದುಲ್ಲಾ ಅಹ್ಮದ್, ಅಪರಾಧಿ 34 ಜನರಿಗೆ ವಂಚಿಸಿದ್ದಾರೆ ಎಂದು ಹೇಳಿದರು. ಪ್ರತಿ ಸಂತ್ರಸ್ಥರಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಶಿಕ್ಷೆಗೆ ಒಳಗಾಗುವುದು ಅವಶ್ಯಕ, ಏಕೆಂದರೆ ಪ್ರತಿ ಸಂತ್ರಸ್ಥರಿಗೆ ಸಂಬಂಧಿಸಿದಂತೆ ಆರೋಪಿಯು ಮಾಡಿದ ಅಪರಾಧ ವಿಭಿನ್ನವಾಗಿದೆ ಎಂದಿದ್ದಾರೆ.

ಆರೋಪಿ ನಾಸಿರ್ ಮೊಹಮ್ಮದ್ ಗುಜರಾತ್ ನ ತಾಪಿ ಜಿಲ್ಲೆಯ ನಿವಾಸಿ. ಸಾಗರದ ಭೈಸಾ ಪಹಾಡಿ ಗ್ರಾಮಕ್ಕೆ ಬಂದು ಬಾಡಿಗೆಗೆ ಮನೆ ತೆಗೆದುಕೊಂಡು ಜವಳಿ ಕಾರ್ಖಾನೆಯ ಮಾಲೀಕ ಎಂದು ಹೇಳಿಕೊಂಡಿದ್ದ. ವಿಯೆಟ್ನಾಂ, ದುಬೈ, ಕಾಂಬೋಡಿಯಾದಲ್ಲಿ ತಮ್ಮ ಮಕ್ಕಳೇ ನಡೆಸುತ್ತಿರುವ ಗಾರ್ಮೆಂಟ್ ಫ್ಯಾಕ್ಟರಿಗಳಿವೆ ಎಂದು ಗ್ರಾಮಸ್ಥರಿಗೆ ಹೇಳುತ್ತಿದ್ದರು. ಈ ಹಳ್ಳಿಯಲ್ಲೂ ಕಾರ್ಖಾನೆಯನ್ನು ಸ್ಥಾಪಿಸಲು ಅವರು ಬಯಸಿದ್ದೇನೆ, ಅದರಲ್ಲೂ ನೀವು ಪಾರ್ಟ್‌ನರ್‌ಗಳಾಗಬಹುದು ಎಂದಿದ್ದ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಲಹೆ ನೀಡಿದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಮಬಾಬು ರಾವತ್, ಆಗಸ್ಟ್ 2020 ರಲ್ಲಿ, ಕ್ಯಾಂಟ್‌ನ ಭೈನ್ಸಾ ಗ್ರಾಮದ ಸುಮಾರು 3 ಡಜನ್ ಜನರು ಗುಜರಾತ್‌ನ ನಾಸಿರ್ ಮೊಹಮ್ಮದ್ ಅಲಿಯಾಸ್ ನಾಸಿರ್ ರಜಪೂತ್ ಒಂದು ವರ್ಷದ ಹಿಂದೆ ನಮ್ಮ ಗ್ರಾಮದಲ್ಲಿ ವಾಸಿಸುತ್ತಿದ್ದರು ಎಂದು ದೂರಿದ್ದಾರೆ. 

ನಾಲ್ಕು ವರ್ಷಗಳ ಹಿಂದೆ ದೂರು ದಾಖಲಾಗಿತ್ತು: 2019ರ ಅಕ್ಟೋಬರ್ 12 ರಂದು ಭೈಂಸಾ ಮತ್ತು ಸದರ್ ಗ್ರಾಮದ ಜನರು ಸಾಗರ ಎಸ್ಪಿಗೆ ತಮಗೆ ಆಗಿರುವ ವಂಚನೆಯ ಕುರಿತು ದೂರು ನೀಡಿದ್ದರು ಎಂದು ಜಿಲ್ಲಾ ಪ್ರಾಸಿಕ್ಯೂಷನ್ ಮಾಧ್ಯಮ ಪ್ರಭಾರಿ ಸೌರಭ್ ದಿಮ್ಹಾ ತಿಳಿಸಿದ್ದಾರೆ. 11 ತಿಂಗಳ ಹಿಂದೆ ನಾಸಿರ್ ಮೊಹಮ್ಮದ್ ಈ ಪ್ರದೇಶದಲ್ಲಿ ವಾಸಕ್ಕೆ ಬಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಮೊದಲು ಎಲ್ಲರ ವಿಶ್ವಾಸ ಗಳಿಸಿದ್ದ ಈತ ತಾನು ಗುಜರಾತ್‌ ನಿವಾಸಿ ಎಂದು ಹೇಳಿಕೊಂಡಿದ್ದ. ಗುಜರಾತ್‌ನಲ್ಲಿರುವ ತನ್ನ ಬಂಗಲೆಯನ್ನು 7 ಕೋಟಿ 85 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಆದರೆ ತೆರಿಗೆಯಿಂದಾಗಿ ಮಧ್ಯಪ್ರದೇಶಕ್ಕೆ ಬರುವ ಹಣವನ್ನು ಆರ್‌ಬಿಐ ನಿಷೇಧಿಸಿದೆ. ತೆರಿಗೆಯನ್ನು ಕಡಿತಗೊಳಿಸಿದ ನಂತರ, ನನ್ನ ಸಂಪೂರ್ಣ ಮೊತ್ತವು ಬ್ಯಾಂಕ್ ಆಫ್ ಬರೋಡಾದ ಖಾತೆಗೆ ಬರಲಿದೆ. ಅದರ ಬೆನ್ನಲ್ಲಿಯೇ ಕಾರ್ಖಾನೆ ಸ್ಥಾಪನೆಯಾಗಲಿದೆ ಎಂದು ತಿಳಿಸಿದ್ದ.

ಬೆಂಗಳೂರು: ಮಾಲಿಕನ ಸಿಗಲಿಲ್ಲವೆಂದು ಮ್ಯಾನೇಜರ್‌ ಅಪಹರಿಸಿದ್ದವರ ಸೆರೆ

ಆರ್‌ಬಿಐ ನಾನು ಹೇಳಿದ ಮೊತ್ತವನ್ನು ತೆರಿಗೆಯ ಹೆಸರಿನಲ್ಲಿ ಹಿಡಿದಿಟ್ಟುಕೊಂಡಿದೆ. ವಿಶ್ವಾಸವನ್ನು ಗಳಿಸುವ ಸಲುವಾಗಿ  ಆತ ತನ್ನ ಬ್ಯಾಂಕ್‌ನ ಪಾಸ್‌ಬುಕ್‌ನಲ್ಲಿ ಇದ್ದ ಮೊತ್ತವನ್ನು ತೋರಿಸಿದ್ದ. ವಿಶ್ವಾಸಕ್ಕೆ ಬಂದ ಜನರು ಅವರಿಗೆ ತಮ್ಮ 1 ರಿಂದ 6 ಲಕ್ಷ ರೂಪಾಯಿ ಹಣವನ್ನು ನೀಡಿದರು, ಪ್ರತಿಯಾಗಿ ಆತ ಚೆಕ್‌ಗಳನ್ನು ನೀಡಿದ್ದ. ಆದರೆ, ಇದನ್ನು ಬ್ಯಾಂಕ್ ತಿರಸ್ಕರಿಸಿತು. 2020 ರಲ್ಲಿ, ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ, ಪೊಲೀಸರು ನಾಸಿರ್‌ನನ್ನು ಕರ್ನಾಟಕದ ಗುಲ್ಬರ್ಗಾದಿಂದ ಬಂಧಿಸಿದರು. 420 ಪ್ರಕರಣದಲ್ಲೀಗ ನ್ಯಾಯಾಲಯ 170 ವರ್ಷ ಶಿಕ್ಷೆ ಹಾಗೂ 3 ಲಕ್ಷ 40 ಸಾವಿರ ದಂಡವನ್ನೂ ವಿಧಿಸಿದೆ.

ವಯಸ್ಸು ಮೂವತ್ತು ದಾಟಿದ್ರೂ ಮದುವೆಗೆ ಹೆಣ್ಣು ಸಿಗದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!

Latest Videos
Follow Us:
Download App:
  • android
  • ios