Asianet Suvarna News Asianet Suvarna News

ದಾಂಡೇಲಿ: ಅಕ್ರಮವಾಗಿ ನಾಡ ಬಂದೂಕು ತಯಾರಿಕೆ, ನಾಲ್ವರ ಬಂಧನ

ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಕಾಡಿನ ಪ್ರದೇಶಗಳಲ್ಲಿ ಅಕ್ರಮವಾಗಿ ನಾಡಬಂದೂಕು ತಯಾರಿಸಿ ಸಂಗ್ರಹಿಸಿಟ್ಟಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Illegal manufacture of land gun four arrested at dandeli uttarakannada rav
Author
First Published Mar 26, 2023, 12:45 PM IST

ದಾಂಡೇಲಿ (ಮಾ.26) : ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಕಾಡಿನ ಪ್ರದೇಶಗಳಲ್ಲಿ ಅಕ್ರಮವಾಗಿ ನಾಡಬಂದೂಕು ತಯಾರಿಸಿ ಸಂಗ್ರಹಿಸಿಟ್ಟಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಟ್ನಾಳ ಗ್ರಾಮ(Vitnal village)ದ ಇಸ್ಮಾಯಿಲ್‌ ಕುಟ್ಟ(31), ಬಸವರಾಜ ಹೆಸರಂಜಿ(25), ಗಾಂವಠಾಣ ನಿವಾಸಿ ಸುರೇಶ ಚೌಡು ಪಾರದೆ(33), ಜೋಯಿಡಾ ನಿವಾಸಿ ರವಿದಾಸ ವಾಸು ಆಚಾರಿ(39) ಬಂಧಿತ ಆರೋಪಿಗಳು.

18 ನಾಡ ಬಂದೂಕು ವಶ: ಇಬ್ಬರಿಗೆ ನ್ಯಾಯಾಂಗ ಬಂಧನ

ಬಂಧಿತರಿಂದ ಒಂದು ಡಬಲ್‌ ಬ್ಯಾರಲ್‌ ನಾಡ ಬಂದೂಕು(Double barrel gun), ಐದು ಸಿಂಗಲ್‌ ಬ್ಯಾರಲ್‌ ನಾಡ ಬಂದೂಕು, ಕಾಡತೋಸು (ಕಾರ್ಟೇೕಜ…) ಮೋಟಾರ್‌ ಸೈಕಲ್‌ ಕಬ್ಬಿಣದ ಏರಗನ್‌ ಪಾರ್ಚ್‌, ಸ್ಟೀಲ್‌ ರಾಡ್‌, ಸಣ್ಣ ಕಬ್ಬಿಣದ ಪೈಪ್‌, ನಾಡ ಬಂದೂಕು ತಯಾರಿಸಲು ಈಗಾಗಲೇ ಉಪಯೋಗಿಸಿದ ಕಟ್ಟಿಗೆಯ ಹಳೆಯ ತುಂಡುಗಳನ್ನು ವಶಪಡಿಸಿಕೊಂಡಿದ್ದು, ಇವರ ಮೇಲೆ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ದಾಂಡೇಲಿ(Dandeli) ಉಪ-ವಿಭಾಗದ ಡಿವೈಎಸ್ಪಿ ಶಿವಾನಂದ ಕಟಗಿ(DYSp Shivananda katagi) ಮಾರ್ಗದರ್ಶನದಲ್ಲಿ, ಸಿಪಿಐ ಬಿ.ಎಸ್‌. ಲೋಕಾಪುರ ನೇತೃತ್ವದಲ್ಲಿ ಪಿಎಸ್‌ಐಗಳಾದ ಕೃಷ್ಣಗೌಡ ಅರಕೇರಿ, ಪಿಎಸ್‌ಐ ಶಿವಾನಂದ ನಾವದಗಿ, ಎಎಸ್‌ಐ ಗಳಾದ ಮಹಾವೀರ ಕಾಂಬಳೆ, ವೆಂಕಟೇಶ ತಗ್ಗಿನ, ಬಸವರಾಜ ಒಕ್ಕುಂದ, ಪೊಲೀಸ ಸಿಬ್ಬಂದಿಗಳಾದ ದಯಾನಂದ ಲೊಂಡಿ, ಗಂಗಾಧರ ಹನಕಹಳ್ಳಿ, ಮಂಜುನಾಥ ಶೆಟ್ಟಿ, ರೇವಪ್ಪ ಬಂಕಾಪುರ, ರವಿ ಚೌಹಾಣ್‌, ಪ್ರದೀಪ ವರ್ದಿ, ಅಶೋಕ, ನಾಗನಗೌಡ ತಿಪ್ಪನಗೌಡ್ರು, ದಶರಥ ಲಕ್ಕಾಪುರ ದಾಳಿಯಲ್ಲಿ ಸಹಕರಿಸಿದ್ದಾರೆ.

ಚಾಮರಾಜನಗರ: ಕಾಡಿಗೆ ಅಕ್ರಮ ಪ್ರವೇಶಿಸಿದ್ದ ವೈದ್ಯ ಸೇರಿ ಮೂವರ ಬಂಧನ

ಅಕ್ರಮ ಮದ್ಯ ಸಾಗಾಟ, ಓರ್ವ ಬಂಧನ

ಕಾರವಾರ:  ತಾಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ ಮೂಲಕ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಮುಡಗೇರಿಯ ಅಂಗಡಿ ರೋಡ್‌ನ ನಿಜಾಮುದ್ದೀನ್‌ (ಬಾಬಜಿ) ಬುದ್ರುದ್ದೀನ್‌ ಖತೀಬ್‌ (42) ಆರೋಪಿಯಾಗಿದ್ದಾನೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದು, .36,300 ಮೌಲ್ಯದ ಗೋವಾ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಚಿತ್ತಾಕುಲ ಪೊಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios