Asianet Suvarna News Asianet Suvarna News

ಹಾಸನ ನಗರಸಭೆ ಜೆಡಿಎಸ್‌ ಸದಸ್ಯನ ಬರ್ಬರ ಹತ್ಯೆ: ಬೆಚ್ಚಿಬಿದ್ದ ಜನತೆ

*  ಜೆಡಿಎಸ್‌ ನಗರಸಭಾ ಸದಸ್ಯ ಪ್ರಶಾಂತ್‌ ಹತ್ಯೆಗೊಳಗಾದವರು
*  ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ
*   ಹಾಡಹಗಲೇ ದುಷ್ಕರ್ಮಿಗಳ ಅಟ್ಟಹಾಸ 
 

Hassan CMC JDS Member Brutal Murder grg
Author
Bengaluru, First Published Jun 2, 2022, 7:02 AM IST

ಹಾಸನ(ಜೂ.02): ಆಟೋದಲ್ಲಿ ಬಂದ ಹಂತಕರು ಹಾಡಹಗಲೇ ನಗರಸಭಾ ಸದಸ್ಯರೊಬ್ಬರನ್ನು ಬರ್ಬರವಾಗಿ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬುಧವಾರ ನಗರದಲ್ಲಿ ನಡೆದಿದೆ. ಘಟನೆಯಿಂದ ಇಡೀ ಹಾಸನ ಬೆಚ್ಚಿಬಿದ್ದಿದೆ. 

ನಗರದ 16ನೇ ವಾರ್ಡ್‌ ಶಾಂತಿನಗರದ ಜೆಡಿಎಸ್‌ ನಗರಸಭಾ ಸದಸ್ಯ ಪ್ರಶಾಂತ್‌ ಹತ್ಯೆಗೊಳಗಾದವರು. ಪ್ರಶಾಂತ್‌ ತಮ್ಮ ತಮ್ಮ ಮನೆಗೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ನಗರದ ಜವೇನಹಳ್ಳಿ ಮಠದ ಸಮೀಪ ಆಟೋದಲ್ಲಿ ಹಿಂಬಾಲಿಸಿಕೊಂಡು ಬಂದ ಹಂತಕರು ಅಡ್ಡಗಟ್ಟಿ ಮನಸೋಯಿಚ್ಛೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಅವರ ಎರಡೂ ಮುಂಗೈಗಳು ತುಂಡಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಹತ್ಯೆಗೀಡಾಗಿರುವ ಪ್ರಶಾಂತ್‌ ತಂದೆ ಹಾ.ರಾ.ನಾಗರಾಜ್‌ ಕೂಡ ನಗರಸಭೆ ಸದಸ್ಯರಾಗಿದ್ದವರು.

ಗಂಡನನ್ನು ಬಿಟ್ಟು ಮತ್ತೊಬ್ಬನೊಂದಿಗೆ ವಾಸಿಸುತ್ತಿದ್ದ ಮಹಿಳೆ, ಈಗ ಇಬ್ಬರೂ ಶವವಾಗಿ ಪತ್ತೆ!

ಅವರು ಕೂಡ 2005ರಲ್ಲಿ ಕೊಲೆಗೀಡಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಗ್ಯಾರಳ್ಳಿ ತಮ್ಮಯ್ಯನನ್ನು ಒಂದು ವರ್ಷದ ಬಳಿಕ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಹಾ.ರಾ.ನಾಗರಾಜ್‌ ಪುತ್ರರಾದ ಪ್ರಶಾಂತ್‌, ಮಯೂರ ಸೇರಿ ಅವರ ಬೆಂಬಲಿಗರ ಮೇಲೆ ಬಂದಿತ್ತು.
 

Follow Us:
Download App:
  • android
  • ios