ಪಬ್ ಜಿ ಆಡಲು ಇಂಟರ್ನೆಟ್ ಇಲ್ಲ ಎಂದು ಆತ್ಮಹತ್ಯೆ/ ಹುಚ್ಚಾಟ ಬ್ಯಾನ್ ಆಗುವುದಕ್ಕೆ ಮೂರು ದಿನ ಮುನ್ನ ಆತ್ಮಹತ್ಯೆ/  ಹಾವೇರಿ ತಾಲೂಕಿನ ಸಂಗೂರ ಗ್ರಾಮದ ತೇಜಸ್ ಶಿಡ್ಲಾಪುರ (17) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ

ಹಾವೇರಿ(ಸೆ. 10) ಪಬ್ ಜಿ ಆಡಬೇಡ ಎಂದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವು ಕಂಡಿದ್ದಾನೆ. ಹಾವೇರಿ ತಾಲೂಕಿನ ಸಂಗೂರ ಗ್ರಾಮದ ತೇಜಸ್ ಶಿಡ್ಲಾಪುರ (17) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. 

Add Asianetnews Kannada as a Preferred SourcegooglePreferred

ಪಬ್ ಜಿ ಆಡಬೇಡ ಎಂದು ಪೋಷಕರು ಸಾಕಷ್ಟು ಸಲ ಬುದ್ದಿ ಹೇಳಿದ್ದರೂ ಯುವಕ ಕೇಳಿರಲಿಲ್ಲ. ಆದ್ದರಿಂದ ಪೋಷಕರು ಮೊಬೈಲ್ ಗೆ ಇಂಟರ್ನೆಟ್ ಹಾಕಿಸಿರಲಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಯುವಕ ತೋಟದ ಮನೆಗೆ ಹೋಗಿ ಬೆಳೆಗಳಿಗೆ ಸಿಂಪಡಿಸಲು ಇಟ್ಟಿದ್ದ ರಾಸಾಯನಿಕ ಔಷಧ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದ. 

ಕೊನೆಗೂ ಪಬ್‌ಜಿ ಬ್ಯಾನ್‌ ಆಗಲು ಏನು ಕಾರಣ

ಘಟನೆ ನಡೆದ ವಿಷಯ ತಿಳಿದ ಪೋಷಕರು ಆತನನ್ನು ಆ. 31 ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದರೆ ಯುವಕ ಗುರುವಾರ ಮೃತಪಟ್ಟಿದ್ದಾನೆ.

ಕೇಂದ್ರ ಸರ್ಕಾರ ಸೆ. 2 ರಂದು ಪಬ್ ಜಿ ಸೇರಿದಂತೆ 118 ಅಪ್ಲಿಕೇಶನ್ ಗಳನ್ನು ಬ್ಯಾನ್ ಮಾಡಿತ್ತು. ಅಂದರೆ ಪಬ್ ಜಿ ಬ್ಯಾನ್ ಗೂ ಮೂರು ದಿನ ಮುನ್ನ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.