Asianet Suvarna News Asianet Suvarna News

ಅಂತಾರಾಷ್ಟ್ರೀಯ ಕಂಪೆನಿ ಜಾಬ್‌ ಆಫರ್‌ ನೀಡಿ 50 ವರ್ಷದ ಟೆಕ್ಕಿಗೆ 24 ಲಕ್ಷ ಮಂಗಮಾಯ ಮಾಡಿದ ಖದೀಮರು!

ಪುಣೆಯ ಪ್ರಸಿದ್ಧ ಇಂಜಿನಿಯರಿಂಗ್ ಕಂಪನಿಯೊಂದರಲ್ಲಿ ಇಪ್ಪತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರಿಗೆ ಸೈಬರ್‌ ಕ್ರೈಂ ಮಾಡಿ ಖದೀಮರು 24 ಲಕ್ಷ ಪಂಗನಾಮ ಹಾಕಿದ್ದಾರೆ.

Cyber job scam Pune Man Scammed of Rs 24 Lakh in Fake Job Offer gow
Author
First Published Nov 8, 2023, 8:32 PM IST

ಪುಣೆ (ನ.8): ಪುಣೆಯ ಪ್ರಸಿದ್ಧ ಇಂಜಿನಿಯರಿಂಗ್ ಕಂಪನಿಯೊಂದರಲ್ಲಿ ಇಪ್ಪತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರಿಗೆ ಸೈಬರ್‌ ಕ್ರೈಂ ಮಾಡಿ ಖದೀಮರು 24 ಲಕ್ಷ ಪಂಗನಾಮ ಹಾಕಿದ್ದಾರೆ. ಇತ್ತೀಚೆಗೆ ಪ್ರಮುಖ ಅಂತಾರಾಷ್ಟ್ರೀಯ ಕಾರು ತಯಾರಕ ಕಂಪನಿಯೊಂದರ ಉನ್ನತ ಹುದ್ದೆಗಾಗಿ ದೂರವಾಣಿ ಸಂದರ್ಶನ ನಡೆಸಿದ್ದ ಟೆಕ್ಕಿ. ಹೆಚ್ಚಿನ ಸಂಬಳದ ಕೆಲಸಕ್ಕೆ ಅವರ ಆಯ್ಕೆಯನ್ನು ದೃಢೀಕರಿಸುವ ಅಭಿನಂದನಾ ಇಮೇಲ್ ಅನ್ನು ಕೂಡ ಸ್ವೀಕರಿಸಿದ್ದರು.

ಕಂಪನಿಯು ಅಧಿಕೃತ ಸಮವಸ್ತ್ರಕ್ಕಾಗಿ ಅವರ ಬಟ್ಟೆಯ ಅಳತೆಗಳನ್ನು ವಿನಂತಿಸಿತು. ಇದು ಟೆಕ್ಕಿಯ  ಉತ್ಸಾಹವನ್ನು ಹೆಚ್ಚಿಸಿತು, ಹೀಗಾಗಿ ಹೊಸ ಉದ್ಯೋಗದ ತಯಾರಿಗಾಗಿ ಅವರು ಸಂಪೂರ್ಣ ವೈದ್ಯಕೀಯ ಪರೀಕ್ಷೆಗೆ ಒಳಗಾದರು. ಆದರೆ ಇದು ಸೈಬರ್ ಕ್ರಿಮಿನಲ್‌ಗಳು ತನಗೆ ಮೋಸ ಮಾಡುತ್ತಿರುವುದು ಎಂಬ ಸುಳಿವು ಕೂಡ ಅವರಿಗಿರಲಿಲ್ಲ.

ಇದೇ ಮೊದಲ ಬಾರಿಗೆ ನಿಧಿಗಾಗಿ ದೇಶೀಯ ಸಾಲ ಮಾರುಕಟ್ಟೆಯತ್ತ ಮುಖ ಮಾಡಿದ ಮುಖೇಶ್ ಅಂಬಾನಿ

ಮಾರ್ಚ್ ಎರಡನೇ ವಾರದಲ್ಲಿ, ನೇಮಕಾತಿ ಏಜೆನ್ಸಿಯನ್ನು ಪ್ರತಿನಿಧಿಸುವ ಕಾರ್ಯನಿರ್ವಾಹಕ ಎಂದು ಹೇಳಿ ಮಹಿಳೆಯಿಂದ   ಕರೆ ಬಂತು. ಆದಷ್ಟು ಬೇಗ  ಪ್ರಯಾಣಿಸಲು ಅಸಮರ್ಥತೆ ಇದೆ ಎಂದಾಗ ವ್ಯಕ್ತಪಡಿಸಿದಾಗ,  ಫೋನ್ ಸಂದರ್ಶನವನ್ನು ಏರ್ಪಡಿಸಿದರು, ಅದಕ್ಕಾಗಿ ಅವರು 6,000 ರೂ. ವಿಧಿಸಿದರು. 

ಮಾರ್ಚ್ 17 ರಂದು, ಫೋನ್ ಸಂದರ್ಶನ ನಡೆಯಿತು, ಮತ್ತು ಒಂದು ವಾರದ ನಂತರ, ಅವರ ಆಯ್ಕೆಗಾಗಿ ಅವರನ್ನು ಅಭಿನಂದಿಸುವ ಇಮೇಲ್ ಸ್ವೀಕರಿಸಿದರು. ತರುವಾಯ, ಅವರ ಶೈಕ್ಷಣಿಕ ದಾಖಲೆಗಳು, ವೃತ್ತಿಪರ ಅನುಭವ ಪ್ರಮಾಣಪತ್ರಗಳು ಮತ್ತು ಇತರ ದಾಖಲೆಗಳನ್ನು ಒದಗಿಸುವಂತೆ ಕೇಳಲಾಯಿತು.

ಆಗ ವಂಚಕರು ಕಂಪನಿಯ ಸಮವಸ್ತ್ರಕ್ಕೆ ಅಳತೆ ಸೇರಿದಂತೆ 28 ಸಾವಿರ ರೂ. ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಪೂರ್ಣ ದೇಹ ತಪಾಸಣೆಗೆ ಹೆಚ್ಚುವರಿಯಾಗಿ 80,000 ರೂ. ವೇತನ ಮುಂಗಡಕ್ಕಾಗಿ ವಿಲಕ್ಷಣವಾದ ವಿನಂತಿಯನ್ನು ಅನುಸರಿಸಿ, ಅದಕ್ಕಾಗಿ ಅವರು 2.4 ಲಕ್ಷ ರೂ. ಕೇಳಿದರು.

ನಷ್ಟದ ಹಾದಿ, 26,936 ಕೋಟಿ ರೂ ಗೃಹೋಪಯೋಗಿ ಕಂಪನಿ ಮಾರಾಟಕ್ಕೆ ಮುಂದಾದ ಟಾಟಾ ಗ್ರೂಪ್!

ಮುಂದಿನ ಐದು ತಿಂಗಳುಗಳಲ್ಲಿ, ಸೈಬರ್ ಅಪರಾಧಿಗಳು ವಿವಿಧ ನೆಪದಲ್ಲಿ ಹಣ ಕೇಳುವುದನ್ನು ಮುಂದುವರೆಸಿದರು.  ಆದರೆ ಜಾಗತಿಕ ಕಾರು ತಯಾರಕ ಕಂಪೆನಿಯಲ್ಲಿ ಹೆಚ್ಚಿನ ವೇತನದ ಉದ್ಯೋಗ ಸ್ಥಾನವನ್ನು ಪಡೆದುಕೊಳ್ಳುವ ಆಶಯದೊಂದಿಗೆ ಹಣವನ್ನು ನೀಡುತ್ತಾ ಹೋದರು.

ಹೀಗೆ  ಸುಮಾರು 24 ಲಕ್ಷ ರೂಪಾಯಿಗಳನ್ನು ಹಲವಾರು ವಿಷಯಗಳಿಗೆ ಖದೀಮರು ಪಡೆದಿದ್ದಾರೆ. ಕೆಲವು ಕಡೆ ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆ ಮಾಡಿದ್ದರು. ಅನುಮಾನಗೊಂಡು ಸಂತ್ರಸ್ತ  ತನ್ನ ಕೆಲಸದ ಸ್ಥಿತಿಯನ್ನು ವಿಚಾರಿಸಲು ಕಾರು ತಯಾರಿಕಾ ಕಂಪನಿಯನ್ನು ವಿಚಾರಿಸಿದರು. ಆಗ ಅವರಿಗೆ ತಾನು ಮೋಸ ಹೋಗಿರುವುದು ಬೆಳಕಿಗೆ ಬಂತು. ಬಳಿಕ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಘಟನೆಯ ಬಗ್ಗೆ ದೂರು ನೀಡಿದ್ದಾರೆ.

ಪುಣೆ ಸಿಟಿ ಪೊಲೀಸರ ಸೈಬರ್ ಕ್ರೈಂ ಘಟಕವು ಗುರುಗ್ರಾಮ್ ಮೂಲದ ಹಣಕಾಸು ಸೇವಾ ಕಂಪನಿಯ ಸಂಸ್ಥಾಪಕನನ್ನು ಬಂಧಿಸಿದೆ. ಪುಣೆಯ ಆಟೋಮೋಟಿವ್ ಕಂಪನಿಯೊಂದರಲ್ಲಿ ಹಿರಿಯ ಮ್ಯಾನೇಜರ್‌ಗೆ ಕೆನಡಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ 12 ಲಕ್ಷ ರೂ.ಗಳನ್ನು ಕಳುಹಿಸುವ ವಂಚನೆಗೆ ಸಂಬಂಧಿಸಿದಂತೆ ಈ ಬಂಧನವಾಗಿದೆ. ವಿಚಾರಣೆ ನಡೆಯುತ್ತಿದೆ.

 

ಸರ್ಕಾರಿ ನೌಕರಿಯ ಆಮಿಷ: 

ಸರ್ಕಾರಿ ನೌಕರಿಯ ಆಮಿಷವೊಡ್ಡಿ 90 ಲಕ್ಷ ರೂ. ಪಂಗನಾಮ ಹಾಕಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕೇಂದ್ರ ಸರ್ಕಾರದ ವ್ಯಾಪ್ತಿಯ ನೌಕರಿ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಲಾಗಿದೆ. ಬೀದರ ಮೂಲದ ವ್ಯಕ್ತಿಯಿಂದ ಲಕ್ಷ ಲಕ್ಷ ವಂಚನೆ ಮಾಡಲಾಗಿದ್ದು,  ಮಾತಿಗೆ ಮರುಳಾಗಿ 90 ಲಕ್ಷ ಕಳೆದುಕೊಂಡ ಕಲಬುರಗಿ ನಿವೃತ್ತ ನೌಕರ. ಮಗನ ನೌಕರಿಯ ಜೊತೆಗೆ ಪರಿಚಿತರಿಗೂ ನೌಕರಿ ಕೊಡಿಸಲು ಯತ್ನ ನಡೆಸಲಾಗಿತ್ತು. ಬೀದರ ಮೂಲದ ಅನಿಲ್ ಕುಮಾರ್ ಎಂಬುವವನಿಂದ ಟೋಪಿ ಹಾಕಲಾಗಿದೆ. ಅನಿಲ್ ಕುಮಾರ್‌ ಮಾತು ನಂಬಿ ಆತ ಹಣ ಹಾಕಿಸಿದ್ದ ಹಣಮಂತರಾವ್. ಶಶೀರೇಖಾ ಜಿ, ರಾಜಶ್ರೀ ಧನರಾಜ್ ಎನ್ನುವವರ ಬ್ಯಾಂಕ್ ಅಕೌಂಟ್ ಹಣ ಹಾಕಲಾಗಿತ್ತು. ಒಟ್ಟು 90 ಲಕ್ಷ ರೂಪಾಯಿ ಹಣ ಜಮಾ ಮಾಡಲಾಗಿದೆ. 2019ರ ಡಿಸೆಂಬರ್ನಿಂದ 2020 ಡಿಸೆಂಬರ್ ವರೆಗೆ ಹಂತ ಹಂತವಾಗಿ ಹಣ ಹಾಕಲಾಗಿದೆ. 

Follow Us:
Download App:
  • android
  • ios