ಬಟ್ಟೆ ತೊಳೆಯಲು ಬಾವಿಗಿಳಿದಿದ್ದ ಅಣ್ಣ, ತಮ್ಮ ನೀರಲ್ಲಿ ಮುಳುಗಿ ದುರ್ಮರಣ/ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳಪಟ್ಟಣದ ಆಶ್ರಯ ಕಾಲೋನಿಯ ಬಾವಿಯಲ್ಲಿ  ಘಟನೆ/ ಪಟ್ಟಣದ ಆಶ್ರಯ ಕಾಲನಿ ನಿವಾಸಿಗಳಾದ ಪ್ರೇಮು ಹಡಪದ(14), ಪುನೀತ ಹಡಪದ(10) ನೀರಲ್ಲಿ ಮುಳುಗಿ ಸಾವು/ ತಮ್ಮ ಬಟ್ಟೆ ತೊಳೆಯಲೆಂದು ನೀರಿಗೆ ಇಳಿದ ವೇಳೆಯಲ್ಲಿ ಕಾಲು ಜಾರಿ ನೀರಲ್ಲಿ ಬಿದ್ದು ಅವಘಡ

ವಿಜಯಪುರ(ಏ. 26) ಕೊರೋನಾ ನಡುವೆ ಮತ್ತೊಂದು ಕೆಟ್ಟ ಸುದ್ದಿ ಬಂದಿದೆ. ಬಟ್ಟೆ ತೊಳೆಯಲು ಬಾವಿಗಿಳಿದಿದ್ದ ಅಣ್ಣ, ತಮ್ಮ ನೀರಲ್ಲಿ ಮುಳುಗಿ ದುರ್ಮರಣಹೊಂದಿದ್ದಾರೆ.

Add Asianetnews Kannada as a Preferred SourcegooglePreferred

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳಪಟ್ಟಣದ ಆಶ್ರಯ ಕಾಲೋನಿಯ ಬಾವಿಯಲ್ಲಿ ದುರ್ಘಟನೆ ನಡೆದಿದೆ. ಪಟ್ಟಣದ ಆಶ್ರಯ ಕಾಲನಿ ನಿವಾಸಿಗಳಾದ ಪ್ರೇಮು ಹಡಪದ(14), ಪುನೀತ ಹಡಪದ(10) ನೀರಲ್ಲಿ ಮುಳುಗಿ ಸಾವು ಕಂಡಿದ್ದಾರೆ.

ಆಸ್ತಿಗಾಗಿ ಅಣ್ಣನ ಹತ್ಯೆ ಮಾಡಿದ ತಮ್ಮ

ತಮ್ಮ ಬಟ್ಟೆ ತೊಳೆಯಲೆಂದು ನೀರಿಗೆ ಇಳಿದ ವೇಳೆಯಲ್ಲಿ ಕಾಲು ಜಾರಿ ನೀರಲ್ಲಿ ಬಿದ್ದು ಅವಘಡ ಸಂಭವಿಸಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಠಾಣೆಯ ಅಧಿಕಾರಿ ಪ್ರಮೋದ ಬಿ.ಎಸ್.ನೇತೃತ್ವದಲ್ಲಿ ಬಾಲಕರ ಮೃತ ದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು