Asianet Suvarna News Asianet Suvarna News

ಚೀಟಿ ಹೆಸರಿನಲ್ಲಿ 5 ಕೋಟಿ ರೂ. ಪಂಗನಾಮ ಹಾಕಿದ್ದ ಬೆಂಗಳೂರಿನ ದಂಪತಿ!

ಚೀಟಿ ಹೆಸರಿನಲ್ಲಿ ವಂಚನೆ ಪ್ರಕರಣ/ ಗಿರಿನಗರ ಠಾಣಾ ಪೊಲೀಸರಿಂದ ವಂಚಕ ದಂಪತಿ ಬಂಧನ/ ನೀಲಾವತಿ ಹಾಗೂ ಜ್ಞಾನೇಶ್ ಬಂಧಿತ ವಂಚಕ ದಂಪತಿ/ ಹೊಸಕೆರೆಹಳ್ಳಿ, ಗಿರಿನಗರ ಸುತ್ತಮುತ್ತಲಿನ ನೂರಾರು ಮಂದಿಗೆ ವಂಚಿಸಿರುವ ದಂಪತಿ/ ಚೀಟಿ ಹೆಸರಿನಲ್ಲಿ 5 ಕೋಟಿಗೂ ಅಧಿಕ ಹಣ ವಂಚಿಸಿರುವ ದಂಪತಿ

Bengaluru Couple arrested for multi crore fraud mah
Author
Bengaluru, First Published Dec 14, 2020, 9:11 PM IST

ಬೆಂಗಳೂರು(ಡಿ. 14)  ಚೀಟಿ ಹೆಸರಿನಲ್ಲಿ ವಂಚನೆ ನಡೆಸಿದ ಆರೋಪದ ಮೇಲೆ  ಗಿರಿನಗರ ಠಾಣಾ ಪೊಲೀಸರು ದಂಪತಿಯನ್ನು ಬಂಧಸಿದ್ದಾರೆ. ನೀಲಾವತಿ ಹಾಗೂ ಜ್ಞಾನೇಶ್ ಬಂಧಿತ ವಂಚಕ ದಂಪತಿ.

ಹೊಸಕೆರೆಹಳ್ಳಿ, ಗಿರಿನಗರ ಸುತ್ತಮುತ್ತಲಿನ ನೂರಾರು ಮಂದಿಗೆ  ಚೀಟಿ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ ಎಂಬ ಆರೋಪ  ಕೇಳಿ ಬಂದಿದೆ. ಚೀಟಿ ಹೆಸರಿನಲ್ಲಿ 5 ಕೋಟಿಗೂ ಅಧಿಕ ಹಣ ವಂಚಿಸಿರುವ ಆರೋಪ ಬಂದಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಚೀಟಿ ಹಣ ಹಿಂದಿರುಗಿಸದೇ ತಾವೇ ಬಡ್ಡಿ ನೀಡುವುದಾಗಿ ಹೇಳಿ ವಂಚನೆ ಮಾಡುತ್ತಿದ್ದರು.

ಮನೆ ಬಾಡಿಗೆ ಪಡೆದು ಲೀಸ್ ಗೆ ಕೊಡುತ್ತಿದ್ದ ಬೆಂಗಳೂರಿನ ಐನಾತಿ ದಂಪತಿ

ಇದುವರೆಗೂ 50ಕ್ಕೂ ಅಧಿಕ ಮಂದಿಯಿಂದ ಪೊಲೀಸರಿಗೆ ದೂರು ದಾಖಲಾಗಿದೆ. ಇತ್ತೀಚಿಗೆ ಹೊಸಕೆರೆಹಳ್ಳಿಯ ಮನೆಯನ್ನೂ ಖಾಲಿ‌ ಮಾಡಿ ಎಸ್ಕೇಪ್ ಆಗಿದ್ದ ದಂಪತಿಯನ್ನು  ಮೋಸಹೋದವರೆ ಹಿಡಿದು ತಂದು ಪೊಲೀಸರಿಗೆ ಒಪ್ಪಿಸಿದ್ದರು. 

Follow Us:
Download App:
  • android
  • ios