Asianet Suvarna News Asianet Suvarna News

ಮದ್ವೆಯಾಗಲು ಹುಡ್ಗಿ ಸಿಗ್ಲಿಲ್ಲವೆಂದು ಜೀವ ಬಿಟ್ಟ ಹುಡ್ಗ

ಮದುವೆ ಮಾಡಿಕೊಳ್ಳಲು ಹುಡುಗಿ ಸಿಗಲಿಲ್ಲವೆಂಬ ಕಾರಣಕ್ಕೆ ಯುವಕನೋರ್ವ ಜೀವವನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ.

34 Year Old Man Commits suicide at Sirsi
Author
Bengaluru, First Published Aug 17, 2020, 8:47 PM IST

ಶಿರಸಿ, (ಆ.17): ಮದುವೆಯಾಗಲು ವಧು ಸಿಗಲಿಲ್ಲ ಎಂಬ ಕಾರಣಕ್ಕೆ ಯುವಕನೋರ್ವ  ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಹೊರವಲದ ಚಿಪಗಿ ಬೆಟ್ಟದಲ್ಲಿ ನಡೆದಿದೆ. 

ಸಹ್ಯಾದ್ರಿ ಕಾಲೋನಿಯ ಮಂಜುನಾಥ ಭೋವಿ (34) ಮೃತಪಟ್ಟ ದುರ್ದೈವಿ.  ಮಂಜುನಾಥನಿಗೆ 34 ವಯಸ್ಸಾಯ್ತು ಇನ್ನೇನು ಮದುವೆ ಮಾಡಿಕೊಳ್ಳುವುದಕ್ಕೆ ಕಳೆದ 4 ವರ್ಷದಿಂದ  ಹುಡುಗಿ ಹುಡುಕುತ್ತಿದ್ದ.

ಪುಂಡರ ವಿರುದ್ಧ ಕ್ರಮಕ್ಕೆ ಮುಂದಾದ ಸಿಎಂ, ಕಂಗನಾ ಮಾತಿಗೆ ಸೊನಾಕ್ಷಿ ಗರಂ: ಆ.17ರ ಟಾಪ್ 10 ಸುದ್ದಿ! 

ಆದ್ರೆ, ಹುಡುಗಿ ಸಿಗದ ಕಾರಣ ಜಿಗುಪ್ಸೆಗೊಂಡು ಇಂದು (ಸೋಮವಾರ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಈಗಿನ ಕಾಲದಲ್ಲಿ ಮದ್ವೆಯಾಗಲು ಹೆಣ್ಣು ಸಿಗುತ್ತಿಲ್ಲ. ಈಗಾಗಿ .ಉಲ್ಟಾ ಹೆಣ್ಣಿಗೆ ವರದಕ್ಷಿಣೆ ಕೊಟ್ಟು ಮದ್ವೆ ಮಾಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಇದ್ರೂ ಇನ್ನೊಂದೆಡೆ ಹಲವು ತಾಯಂದಿರು ಗಂಡು ಮಗು ಬೇಕು, ಗಂಡು ಬೇಕು ಎನ್ನುತ್ತಿದ್ದಾರೆ. 

Follow Us:
Download App:
  • android
  • ios