ಮದುವೆ ಮಾಡಿಕೊಳ್ಳಲು ಹುಡುಗಿ ಸಿಗಲಿಲ್ಲವೆಂಬ ಕಾರಣಕ್ಕೆ ಯುವಕನೋರ್ವ ಜೀವವನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ.

ಶಿರಸಿ, (ಆ.17): ಮದುವೆಯಾಗಲು ವಧು ಸಿಗಲಿಲ್ಲ ಎಂಬ ಕಾರಣಕ್ಕೆ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಹೊರವಲದ ಚಿಪಗಿ ಬೆಟ್ಟದಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಹ್ಯಾದ್ರಿ ಕಾಲೋನಿಯ ಮಂಜುನಾಥ ಭೋವಿ (34) ಮೃತಪಟ್ಟ ದುರ್ದೈವಿ. ಮಂಜುನಾಥನಿಗೆ 34 ವಯಸ್ಸಾಯ್ತು ಇನ್ನೇನು ಮದುವೆ ಮಾಡಿಕೊಳ್ಳುವುದಕ್ಕೆ ಕಳೆದ 4 ವರ್ಷದಿಂದ ಹುಡುಗಿ ಹುಡುಕುತ್ತಿದ್ದ.

ಪುಂಡರ ವಿರುದ್ಧ ಕ್ರಮಕ್ಕೆ ಮುಂದಾದ ಸಿಎಂ, ಕಂಗನಾ ಮಾತಿಗೆ ಸೊನಾಕ್ಷಿ ಗರಂ: ಆ.17ರ ಟಾಪ್ 10 ಸುದ್ದಿ! 

ಆದ್ರೆ, ಹುಡುಗಿ ಸಿಗದ ಕಾರಣ ಜಿಗುಪ್ಸೆಗೊಂಡು ಇಂದು (ಸೋಮವಾರ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಈಗಿನ ಕಾಲದಲ್ಲಿ ಮದ್ವೆಯಾಗಲು ಹೆಣ್ಣು ಸಿಗುತ್ತಿಲ್ಲ. ಈಗಾಗಿ .ಉಲ್ಟಾ ಹೆಣ್ಣಿಗೆ ವರದಕ್ಷಿಣೆ ಕೊಟ್ಟು ಮದ್ವೆ ಮಾಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಇದ್ರೂ ಇನ್ನೊಂದೆಡೆ ಹಲವು ತಾಯಂದಿರು ಗಂಡು ಮಗು ಬೇಕು, ಗಂಡು ಬೇಕು ಎನ್ನುತ್ತಿದ್ದಾರೆ.