ಹರ್ಷಲ್ ಪಟೇಲ್ ಜೊತೆ ಜಸ್ಪ್ರೀತ್ ಬುಮ್ರಾ ಸಹ ಟಿ20 ವರ್ಲ್ಡ್ಕಪ್ ಆಡಲ್ವಾ..?
* ಗಾಯದ ಸಮಸ್ಯೆಯಿಂದಾ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದ ಬುಮ್ರಾ, ಹರ್ಷಲ್ ಪಟೇಲ್
* ಈ ಇಬ್ಬರು ಸ್ಟಾರ್ ವೇಗಿಗಳು ಟಿ20 ವಿಶ್ವಕಪ್ ಆಡೋದು ಅನುಮಾನ
* ಬೆಂಗಳೂರಿನಲ್ಲಿರುವ ಎನ್ಸಿಎನಲ್ಲಿ ತರಬೇತಿ ಪಡೆಯುತ್ತಿರುವ ವೇಗಿಗಳು
ಬೆಂಗಳೂರು(ಆ.12): ಭಾರತೀಯ ಕ್ರಿಕೆಟ್ ಅನ್ನು ಗಾಯ ಅನ್ನೋ ಭೂತ ಯಾಕೋ ಬಿಡುವಂತೆ ಕಾಣ್ತಿಲ್ಲ. ಒಬ್ಬಲ್ಲ ಒಬ್ಬ ಮೇನ್ ಪ್ಲೇಯರ್ ಇಂಜುರಿಯಾಗಿ ಟೀಮ್ನಿಂದ ಹೊರಬೀಳುತ್ತಿದ್ದಾರೆ. ರೋಹಿತ್ ಶರ್ಮಾ. ರಾಹುಲ್. ದೀಪಕ್ ಚಹರ್ ಇಂಜುರಿಯಾಗಿ ರಿಕವರಿಯಾಗಿದ್ದಾಯ್ತು. ಈಗ ಫಾಸ್ಟ್ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಇಂಜುರಿ ಲಿಸ್ಟ್ಗೆ ಸೇರಿದ್ದಾರೆ. ಕೆಲವೇ ದಿನಗಳಲ್ಲಿ ರಿಕವರಿಯಾಗಿ ರಿಟರ್ನ್ ಆಗ್ತಾರೆ ಅಂತ ಅಂದಾಜಿಸಲಾಗಿತ್ತು. ಆದ್ರೆ ಯಾಕೋ ಇವರಿಬ್ಬರು ಟಿ20 ವಿಶ್ವಕಪ್ ಆಡೋದು ಅನುಮಾನವಾಗಿದೆ.
ಅಂದು ಸಣ್ಣ ಗಾಯ, ಇಂದು ದೊಡ್ಡದಾಗಿದೆ:
ಜಸ್ಪ್ರೀತ್ ಬುಮ್ರಾ ಬೆನ್ನು ನೋವಿಗೆ ತುತ್ತಾಗಿ ಏಷ್ಯಾಕಪ್ನಿಂದ ಹೊರಬಿದ್ದಿರುವುದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೆ ಅವರಿಗೆ ಕಾಣಿಸಿಕೊಂಡಿರುವ ನೋವು ಸದ್ಯಕ್ಕೆ ಸರಿಯಾಗುವಂತೆ ಕಾಣುತ್ತಿಲ್ಲ. ಹಾಗಾಗಿ ಬುಮ್ರಾ, ಟಿ20 ವರ್ಲ್ಡ್ಕಪ್ ಆಡೋದು ಅನುಮಾನ ಅಂತ ಬಿಸಿಸಿಐ ಮೂಲಗಳು ತಿಳಿಸಿವೆ. 2019ರಲ್ಲೂ ಬುಮ್ರಾಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಐದು ತಿಂಗಳು ಅವರು ಕ್ರಿಕೆಟ್ನಿಂದ ದೂರ ಉಳಿದಿದ್ದರು. ಇದು ಸಣ್ಣ ಪ್ರಮಾಣದ ಗಾಯ ಅಂತ ಅಂದು ಬಿಸಿಸಿಐ ಹೇಳಿತ್ತು. ಆದ್ರೆ ಈಗ ಅದೇ ದೊಡ್ಡ ಪ್ರಮಾಣದ ಗಾಯವಾಗಿದೆ. ಸದ್ಯ ಬುಮ್ರಾ ಬೆಂಗಳೂರಿನಲ್ಲಿರುವ ಎನ್ಸಿಎನಲ್ಲಿ ತರಬೇತಿ ಪಡೆಯುತ್ತಿದ್ದು, ಸದ್ಯಕ್ಕೆ ಅವರು ರಿಕವರಿಯಾಗುವಂತೆ ಕಾಣ್ತಿಲ್ಲ.
ಹರ್ಷಲ್ ಪಟೇಲ್ ಫಿಟ್ ಆಗೋದು ಕಷ್ಟ:
ವೆಸ್ಟ್ ಇಂಡೀಸ್ ಸರಣಿ ವೇಳೆ ಪಕ್ಕೆಲುಬು ನೋವಿಗೆ ತುತ್ತಾಗಿದ್ದ ಹರ್ಷಲ್ ಪಟೇಲ್, ಇಡೀ ಸಿರೀಸ್ ಮಿಸ್ ಮಾಡಿಕೊಂಡಿದ್ದರು. ಏಷ್ಯಾಕಪ್ಗೂ ಸೆಲೆಕ್ಟ್ ಆಗಿಲ್ಲ. ಟಿ20 ವರ್ಲ್ಡ್ಕಪ್ ಆಡೋದು ಅನುಮಾನ ಅಂತ ಹೇಳಲಾಗ್ತಿದೆ. ಅವರು ಸಹ ಬೆಂಗಳೂರಿನಲ್ಲೇ ಫಿಟ್ನೆಸ್ ತರಬೇತಿ ಪಡೆಯುತ್ತಿದ್ದಾರೆ. ಅಲ್ಲಿಗೆ ಇಬ್ಬರು ಪ್ರಮುಖ ವೇಗಿಗಳಿಲ್ಲದೆ ಭಾರತ ವಿಶ್ವಕಪ್ ಆಡಬೇಕಾದ ಅನಿವಾರ್ಯಕ್ಕೆ ಬಿದ್ದಿದೆ.
ಬುಮ್ರಾ-ಹರ್ಷ ಬದಲಿಗೆ ವಿಶ್ವಕಪ್ ಆಡೋರ್ಯಾರು..?:
ಇಬ್ಬರು ಮೇನ್ ಬೌಲರ್ಸ್ಗೆ ರಿಪ್ಲೇಸ್ಮೆಂಟ್ ಹುಡುಕುತ್ತಿದೆ ಬಿಸಿಸಿಐ. ಮೊಹಮ್ಮದ್ ಶಮಿಯನ್ನ ಟಿ20 ಟೀಮ್ನಿಂದ ಡ್ರಾಪ್ ಮಾಡಿರುವುದರಿಂದ ಈಗ ಹೊಸಬರನ್ನೇ ಆಯ್ಕೆ ಮಾಡಬೇಕು. ದೀಪಕ್ ಚಹರ್ ಮತ್ತು ಅವೇಶ್ ಖಾನ್ ಇದ್ದಾರೆ. ಆದ್ರೆ ಆ ಇಬ್ಬರು ಸೀನಿಯರ್ ಬೌಲರ್ಗಳಷ್ಟು ಪರಿಣಾಮಕಾರಿಯಲ್ಲ. ಇದೇ ಬಿಸಿಸಿಐಗೆ ಚಿಂತೆಗೀಡು ಮಾಡಿದೆ.
ಬೆಂಚ್ ಸ್ಟ್ರೆಂಥ್ ಹೆಚ್ಚಿದ್ರೆ ದ್ರಾವಿಡ್ಗೆ ಲಾಭ, ಸೀನಿಯರ್ ಪ್ಲೇಯರ್ಸ್ಗೆ ಶುರುವಾಯ್ತು ಪೀಕಲಾಟ..!
ಇನ್ನು ಬ್ಯಾಟರ್ಸ್ ಮತ್ತು ಸ್ಪಿನ್ನರ್ಸ್ಗೆ ಬ್ಯಾಕ್ ಅಪ್ ಆಗಿ ಸಾಕಷ್ಟು ಪ್ಲೇಯರ್ಸ್ ಇದ್ದಾರೆ. ಆದ್ರೆ ಫಾಸ್ಟ್ ಬೌಲರ್ಸ್ಗೆ ಬ್ಯಾಕ್ ಅಪ್ ಆಗಿ ಹೆಚ್ಚು ಮಂದಿ ಇಲ್ಲ. ಇದೇ ಕೋಚ್ ದ್ರಾವಿಡ್ಗೆ ತಲೆ ನೋವಾಗಿರೋದು. ದೀಪಕ್-ಅವೇಶ್ ಜೊತೆ ಶಾರ್ದೂಲ್ ಠಾಕೂರ್ - ಉಮ್ರಾನ್ ಮಲಿಕ್ ಸಹ ಇದ್ದಾರೆ. ಯಾರನ್ನೇ ಸೆಲೆಕ್ಟ್ ಮಾಡಿದ್ರೂ ಅನಾನುಭವಿಗಳೇ. ಭುವನೇಶ್ವರ್ ಕುಮಾರ್ ಬಿಟ್ರೆ ಉಳಿದವರೆಲ್ಲಾ ಹೊಸಬರೇ. ಈ ಹೊಸ ಬೌಲರ್ಗಳನ್ನ ಕಟ್ಟಿಕೊಂಡು ದ್ರಾವಿಡ್-ರೋಹಿತ್ ಟಿ20 ವಿಶ್ವಕಪ್ ಗೆಲ್ತಾರಾ ಅನ್ನೋ ಪ್ರಶ್ನೆಯೂ ಹುಟ್ಟಿಕೊಂಡಿದೆ.