Asianet Suvarna News Asianet Suvarna News

2ನೇ ಏಕದಿನ ಪಂದ್ಯ; ಟೀಂ ಇಂಡಿಯಾ ದಿಗ್ಗಜರು ಔಟ್, ಆತಂಕದಲ್ಲಿ ಫ್ಯಾನ್ಸ್!

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಭಾರತದ ಪಾಲಿಗೆ ಕಬ್ಬಿಣದ ಕಡಲೆಯಾಗಿ ಮಾರ್ಪಟ್ಟಿದೆ. ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಟೀಂ  ಇಂಡಿಯಾ ಇದೀಗ 2ನೇ ಹಾಗೂ ಮಹತ್ವದ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಭಾರತ ತಂಡದ ಬ್ಯಾಟಿಂಗ್ ಅಭಿಮಾನಿಗಳ ಆತಂಕಕ್ಕೆ ಕಾರವಾಗಿದೆ 

Team India lost 4th wicket in 2nd odi against new zealand
Author
Bengaluru, First Published Feb 8, 2020, 1:13 PM IST

ಆಕ್ಲೆಂಡ್(ಫೆ.08): ಭಾರತ ಹಾಗೂ ನ್ಯೂಜಿಲೆಂಡ್  ನಡುವಿನ 2ನೇ ಏಕದಿನ ಪಂದ್ಯ ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ. ಭಾರತಕ್ಕೆ ಸರಣಿ ಉಳಿಸಿಕೊಳ್ಳಲು ಈ ಪಂದ್ಯ ಗೆಲ್ಲಲೇಬೇಕಿದ್ದರೆ, ಟಿ20 ಸರಣಿ ಸೋತ ನ್ಯೂಜಿಲೆಂಡ್‌ಗೆ ಸರಣಿ ಗೆಲುವು ನಿರ್ಧರಿಸುವ ಪಂದ್ಯವಾಗಿದೆ. ಈ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. 

ಇದನ್ನೂ ಓದಿ: ಗಪ್ಟಿಲ್, ಟೇಲರ್ ಹೋರಾಟ, ಭಾರತಕ್ಕೆ 274 ರನ್ ಟಾರ್ಗೆಟ್

ನ್ಯೂಜಿಲೆಂಡ್ ನೀಡಿದ 274 ರನ್ ಟಾರ್ಗೆಟ್ ಭಾರತದ ಪಾಲಿಗೆ ಮೌಂಟ್ ಎವರೆಸ್ಟ್ ಬೆಟ್ಟದಷ್ಟು ದೊಡ್ಡದಾಗಿದೆ. ಕಾರಣ ಈ ಈಗಾಗಲೇ 4 ವಿಕೆಟ್ ಪತನಗೊಂಡಿದೆ. ಆರಂಭದಲ್ಲೇ ಮಯಾಂಕ್ ಅಗರ್ವಾಲ್ 3 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರೆ, ಪೃಥ್ವಿ ಶಾ 24 ರನ್ ಸಿಡಿಸಿ ಔಟಾದರು.

ಇದನ್ನೂ ಓದಿ: INDvNZ 2ನೇ ಏಕದಿನ: ದಾಖಲೆ ಬರೆದ ಮಾರ್ಟಿನ್ ಗಪ್ಟಿಲ್!

ನಾಯಕ ವಿರಾಟ್ ಕೊಹ್ಲಿ ಕೇವಲ 15 ರನ್ ಸಿಡಿಸಿ ಔಟಾದರು. ಈ ಮೂಲಕ ಭಾರತ ಹಿನ್ನಡೆ ಅನುಭವಿಸಿತು.  ಕೆಎಲ್ ರಾಹುಲ್ ಕೇವಲ 4 ರನ್  ಸಿಡಿಸಿ ನಿರ್ಗಮಿಸಿದರು. 71 ರನ್‌ಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಗೆಲುವಿಗೆ ಹರಸಾಹಸ ಪಡಬೇಕಿದೆ

Follow Us:
Download App:
  • android
  • ios