ಎರಡು ಸಲ ದೊಡ್ಡ ಪೆಟ್ಟು ತಿಂದ್ರೂ ಬುದ್ಧಿ ಕಲಿಯದ ಭಾರತ ಲೆಫ್ಟಿ ವೇಗಿಗಳಿಗೆ ಬೆಚ್ಚಿ ಬೀಳ್ತಿದ್ದಾರೆ ಟಾಪ್ ಆರ್ಡರ್​​ ಬ್ಯಾಟರ್ಸ್​ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾ ಭಾರತ?

ಬೆಂಗಳೂರು(ಜು.20): ಟೀಂ​ ಇಂಡಿಯಾ ಇಂಗ್ಲೆಂಡ್​​ ನೆಲದಲ್ಲಿ ಏಕದಿನ ಸರಣಿ ಗೆದ್ದಿದೆ. ಎಂ ಎಸ್ ಧೋನಿ ಬಳಿಕ ರೋಹಿತ್ ಶರ್ಮಾ ಬಳಗಕ್ಕೆ 2-1 ಅಂತರದ ಏಕದಿನ ಟ್ರೋಫಿ ಒಲಿದಿದೆ. ಇಂಡಿಯನ್​ ಕಲಿಗಳ ಹೋರಾಟಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಆದ್ರೆ ಟೀಂ​ ಇಂಡಿಯಾ ಸರಣಿ ಜಯಿಸಿದ ಮಾತ್ರಕ್ಕೆ ಹೆಚ್ಚು ಸಂಭ್ರಮಿಸಬೇಕಿಲ್ಲ. ಅದಕ್ಕಿಂತ ಹೆಚ್ಚು ಚಿಂತಿಸಬೇಕಾದ ಸಂಗತಿವೊಂದಿದೆ. 

ಹೌದು, ಇಂಗ್ಲೆಂಡ್ ಎದುರಿನ ಏಕದಿನ ಸರಣಿ ಗೆದ್ದ ಇಂಡಿಯನ್​ ಕಲಿಗಳು ಲೆಫ್ಟ್ ಆರ್ಮ್​ ಬೌಲರ್​​​ ಅಂದ್ರೆ ಹೇಗೆ ಭಯ ಬೀಳ್ತಿದ್ದಾರೆ ಅನ್ನೋದನ್ನು ನಾವೆಲ್ಲರೂ ನೋಡಿದ್ದೇವೆ. ಅದು ಅಂತಿಂಥ ಆಟಗಾರರಲ್ಲ. ದಿ ಗ್ರೇಟ್ ಪ್ಲೇಯರ್ ಅನ್ನಿಸಿಕೊಂಡ ವಿರಾಟ್ ಕೊಹ್ಲಿ, ಡಬಲ್​ ಸೆಂಚುರಿ ಸರದಾರ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್​​. ಮೂವರು ತಮಗಿರೋ ಅಪಾರ ಅನುಭವಕ್ಕೆ ಟೋಪ್ಲೆಯಂತ ಅನಾನುಭವಿ ವೇಗಿಗೆ ನೀರು ಕುಡಿಸಬಹುದಿತ್ತು. ಆದ್ರೆ ಬದಲಿಗೆ ಟೋಪ್ಲೆ ಅನ್ನೋ ಎಡಗೈ ಬೌಲರ್‌ ಮುಂದೆ ಸುಲಭವಾಗಿ ಶಸ್ತ್ರತ್ಯಾಗ ಮಾಡಿಬಿಟ್ಟಿದ್ರು. ಟಾಪ್ ಆರ್ಡರ್ ಬ್ಯಾಟರ್ಸ್​ ಡಿಸೈಡರ್​ ಮ್ಯಾಚ್​​ನಲ್ಲಿ ವರ್ಸ್ಟ್ ಆಟವಾಡಿ ಟೀಕೆ ಎದುರಿಸಿದ್ರು. ಅಲ್ಲಿಗೆ ಈಗಲೂ ಟೀಂ​ ಇಂಡಿಯಾ ಬ್ಯಾಟರ್​ಗಳು ಎಡಗೈ ವೇಗಿಗಳಿಗೆ ಬೆಚ್ಚಿ ಬೀಳ್ತಾರೆ ಅನ್ನೋ ಪ್ರೂವ್ ಆಗಿತ್ತು. ಇದು ಮೊನ್ನೆ ಮ್ಯಾಚ್​​​​​ನ ಕಥೆಯಷ್ಟೇ ಅಲ್ಲ. ಕಳೆದ ಆರು ವರ್ಷಗಳಿಂದ ಲೆಪ್ಟ್ ಆರ್ಮ್​ ಬೌಲರ್ಸ್​ಗೆ ಭಾರತೀಯ ಪ್ಲೇಯರ್ಸ್​ ತಿಣುಕಾಡ್ತಿದ್ದಾರೆ. ಇಷ್ಟಾದ್ರು ಈ ಮಿಸ್ಟೇಕ್ಸ್​​ನಿಂದ ಇನ್ನೂ ಬುದ್ಧಿ ಕಲಿತಿಲ್ಲ.

ಚಾಂಪಿಯನ್ಸ್ ಟ್ರೋಫಿ ಕನಸಿಗೆ ಲೆಫ್ಟಿ ಬೌಲರ್ಸ್​ ವಿಲನ್ : 

2017ರ ಚಾಂಪಿಯನ್ಸ್ ಟ್ರೋಫಿಯನ್ನ ಭಾರತ ಕೂದಲೆಳೆ ಅಂತರದಲ್ಲಿ ಸೋತಿತ್ತು. ಈ ಆಸೆ ಕಮರಿಸಿದ್ದು ಒಬ್ಬ ಲೆಫ್ಟ್​ ಆರ್ಮ್​ ಬೌಲರ್​​​. ಫೈನಲ್​​ ಪಂದ್ಯದಲ್ಲಿ ಪಾಕ್​​ನ ಮೊಹಮ್ಮದ್ ಅಮೀರ್​ ಮಾರಕವಾಗಿದ್ರು. ರೋಹಿತ್​​​​​, ಕೊಹ್ಲಿ ಹಾಗೂ ಧವನ್​ ವಿಕೆಟ್​​​​​​ ಪಡೆದು ಟ್ರೋಫಿ ಕನಸಿಗೆ ಕೊಳ್ಳಿಯಿಟ್ಟಿದ್ರು.

India Tour Of England ಇಂಗ್ಲೆಂಡಲ್ಲಿ ಭಾರತ ವೇಗಿಗಳ ಮಿಂಚು!

2021ರ ಟಿ20 ವಿಶ್ವಕಪ್​​​ನಲ್ಲಿ ಶಾಹೀನ್​​ ಆಗಿದ್ರೂ ಕಿಲ್ಲರ್​ : 

ಇನ್ನು 2017ರ ಚಾಂಪಿಯನ್ಸ್​ ಟ್ರೋಫಿ ಮಾತ್ರವಲ್ಲ. ಕಳೆದ ವರ್ಷದ ಟಿ20 ವಿಶ್ವಕಪ್​​ನಲ್ಲೂ ಎಡಗೈ ಬೌಲರ್ಸ್​ ಭಾರತಕ್ಕೆ ಮಗ್ಗುಲ ಮುಳ್ಳಾಗಿ ಕಾಡಿದ್ರು. ಲೀಗ್​​ ಪಂದ್ಯದಲ್ಲಿ ಪಾಕ್​​ನ ಶಾಹೀನ್ ಅಫ್ರಿದಿ ಆರಂಭಿಕ ಮೂವರು ವಿಕೆಟ್​ ಪಡೆದು ದೊಡ್ಡ ಆಘಾತ ನೀಡಿದ್ರು. ಈ ಪಂದ್ಯದಲ್ಲಿ ಭಾರತ ಹೀನಾಯ ಸೋಲುಂಡಿತ್ತು. 

2022ರ ಟಿ20 ವಿಶ್ವಕಪ್​​​​​​ಗೆ ಇನ್ನೂ 3 ತಿಂಗಳಷ್ಟೇ ಉಳಿದಿದೆ. ಇನ್ನಾದ್ರು ಭಾರತ ಲೆಫ್ಟಿ ಬೌಲರ್ಸ್​ ಫೋಬಿಯಾದಿಂದ ಹೊರಬೇಕು. ಇಲ್ಲವಾದ್ರೆ ಈ ವೀಕ್ನೆಸ್ಸೇ ಈ ಸಲ ಟಿ20 ವಿಶ್ವಕಪ್​ ಗೆಲ್ಲುವ ಮಹಾದಾಸೆಗೆ ಕೊಳ್ಳಿಯಿಟ್ರು ಅಚ್ಚರಿಯಿಲ್ಲ.